Home / ಕವನ / ಕವಿತೆ / ಊರು-ಕೇರಿ ಕುರಿತು

ಊರು-ಕೇರಿ ಕುರಿತು

ನನ್ನ ಕೇರಿ ನಾಕವೇನು? ವಿಶ್ವವಿನೀಕೇತನ ವಿಹಾರಿ!
ಕೇರಿಯೆಂದರೆ: ಹೊಸಲು ಕಾದು, ಕ್ರಿಯಾಶೀಲ ಸ್ಥಳ!
ಜಗದ ಬಾಗಿಲು… ಪುರಾತನ ತೊಟ್ಟಿಲು.
ಕೈಲಾಸಕೆ ಮೆಟ್ಟಿಲು.
ಇಲ್ಲಿಹರು… ಸಮಗಾರ ಹರಳಯ್ಯ, ಕಲ್ಯಾಣದ ಗುಣಮಣೆ,
ಜಾಂಬುವಂತ, ಮಾದರಚೆನ್ನಯ್ಯ, ಬಡ್ವಿಲಿಂಗಮ್ಮ, ಅರುಂಧತಿ,
ಶಬರಿ, ಬಾಲನಾಗಮ್ಮ…
ಅಂಬೇಡ್ಕರ್‍, ಕರಿಯನಂಥಾ ಮನುಜರು!
ಕೇರಿಗಿಂಥಾ ಜನ್ರು ದೇವರಂಥವ್ರು!
ಜಗಕೆ ಮಾನ ತಂದವ್ರು…
ಎಲ್ಲಿ ಸಿಗುವರೋ… ಕೋಟಿಗೊಬ್ರು…
ಹಲಸು, ಮಾವು, ಹುಲುಸು ಜನರು!
ಬುದ್ಧ, ಬಸವ, ಗುರುನಾನಕ, ಪೈಗಂಬರ್‍, ಯೇಸುಕ್ರಿಸ್ತ,
ಗಾಂಧೀ, ನೆಹರು, ರಾಮ, ಕ್ರಿಷ್ಣ ನಡೆದ ಕೇರಿಯು!
ಊರುಕೇರಿ ಎರಡು ಕಣ್ಣಕಣಗಳ ಬಟ್ಟಬಯಲೋ…
ಕಣ್ಣ ರೆಪ್ಪೆಯಂದದಿ ಪ್ರತಿಕ್ಷಣದಿ ಬಡಿವಾ ಜೋಡಿಯು!
ಹಗಲುರಾತ್ರಿ ಮಿಡಿವಾ ಹೃದಯಸ್ತಂಭ!
ಕೇರಿಯೆಂಬುದೇ ಇಂದ್ರನ ವಡ್ಡೊಲಗ!
ನಿನ್ನಂಥಾ ಕಡು ಪಾಪಿ, ನತದೃಶ್ಟ,
ಈ ಜಗದೀ, ಬೇರೆ ಇಹನೇ??
ದೇಹದಾ ತುಂಬಾ, ನವರಂಧ್ರಗಳೇ…!
ಹೊಸಲಸು ತುಂಬಿದಾ ಮಾಂಸದ ಮುದ್ದೆಯೇ?!
ನಿನಗೆ ನಿದ್ದೆ ಹೇಗೆ ಬರುವುದಯ್ಯ??
ಥೂ! ಮನುಶ್ಯನೆಂಬಾ ಕಳಂಕದಾಪಟ್ಟ ಹೊತ್ತು,
ಹೊಲಗೇರಿಯೆಂಬಾ, ಹಣೆಪಟ್ಟಿಗೇ ಹೆದರಿ,
ಕೇರಿ ಹೊರಗೆ, ನಿಂತಾಪಾಪಿ ನೀ…
ಶತ ಶತಮಾನದ ಶಾಪ! ಏನೀದರ ಆಳಾ… ಅಗಲವಯ್ಯ??
ಈ ರಾಮನ ‘ಕೊಳೆ’ ಕಳೆವ,
ಪರಿಪರಿಯನೆಂತೂ ತಿಳಿಸು ಗೆಳೆಯಾ??
ಶತಶತಮಾನಗಳೇ… ಕಳೆದವಲ್ಲ,
ಈ ಕಂದಕ ಮುಚ್ಚಲಿಲ್ಲ!!
ಇಲ್ಲಿ ಕನಸ್ಸುಗಳು, ಕನವರಿಕೆಯ ಕೊಳ್ಳಿದೆವ್ವಗಳೇ…
ಹಂದಿ, ನಾಯಿ, ಮೀನು, ಕಾಗೆ, ಗೂಬೆಗೂ ಕಡೆಯಾದನೇ ಮನುಜನೀ…
ಒಮ್ಮತ… ಒಗ್ಗಟ್ಟಿಗೆ, ದಿವ್ಯ ಔಷದಿಯಿರೆ, ತಿಳಿಸಯ್ಯ ಹೆಳೆಯನೇ…
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...