Home / ಕವನ / ಕವಿತೆ / ಊರು-ಕೇರಿ ಕುರಿತು

ಊರು-ಕೇರಿ ಕುರಿತು

ನನ್ನ ಕೇರಿ ನಾಕವೇನು? ವಿಶ್ವವಿನೀಕೇತನ ವಿಹಾರಿ!
ಕೇರಿಯೆಂದರೆ: ಹೊಸಲು ಕಾದು, ಕ್ರಿಯಾಶೀಲ ಸ್ಥಳ!
ಜಗದ ಬಾಗಿಲು… ಪುರಾತನ ತೊಟ್ಟಿಲು.
ಕೈಲಾಸಕೆ ಮೆಟ್ಟಿಲು.
ಇಲ್ಲಿಹರು… ಸಮಗಾರ ಹರಳಯ್ಯ, ಕಲ್ಯಾಣದ ಗುಣಮಣೆ,
ಜಾಂಬುವಂತ, ಮಾದರಚೆನ್ನಯ್ಯ, ಬಡ್ವಿಲಿಂಗಮ್ಮ, ಅರುಂಧತಿ,
ಶಬರಿ, ಬಾಲನಾಗಮ್ಮ…
ಅಂಬೇಡ್ಕರ್‍, ಕರಿಯನಂಥಾ ಮನುಜರು!
ಕೇರಿಗಿಂಥಾ ಜನ್ರು ದೇವರಂಥವ್ರು!
ಜಗಕೆ ಮಾನ ತಂದವ್ರು…
ಎಲ್ಲಿ ಸಿಗುವರೋ… ಕೋಟಿಗೊಬ್ರು…
ಹಲಸು, ಮಾವು, ಹುಲುಸು ಜನರು!
ಬುದ್ಧ, ಬಸವ, ಗುರುನಾನಕ, ಪೈಗಂಬರ್‍, ಯೇಸುಕ್ರಿಸ್ತ,
ಗಾಂಧೀ, ನೆಹರು, ರಾಮ, ಕ್ರಿಷ್ಣ ನಡೆದ ಕೇರಿಯು!
ಊರುಕೇರಿ ಎರಡು ಕಣ್ಣಕಣಗಳ ಬಟ್ಟಬಯಲೋ…
ಕಣ್ಣ ರೆಪ್ಪೆಯಂದದಿ ಪ್ರತಿಕ್ಷಣದಿ ಬಡಿವಾ ಜೋಡಿಯು!
ಹಗಲುರಾತ್ರಿ ಮಿಡಿವಾ ಹೃದಯಸ್ತಂಭ!
ಕೇರಿಯೆಂಬುದೇ ಇಂದ್ರನ ವಡ್ಡೊಲಗ!
ನಿನ್ನಂಥಾ ಕಡು ಪಾಪಿ, ನತದೃಶ್ಟ,
ಈ ಜಗದೀ, ಬೇರೆ ಇಹನೇ??
ದೇಹದಾ ತುಂಬಾ, ನವರಂಧ್ರಗಳೇ…!
ಹೊಸಲಸು ತುಂಬಿದಾ ಮಾಂಸದ ಮುದ್ದೆಯೇ?!
ನಿನಗೆ ನಿದ್ದೆ ಹೇಗೆ ಬರುವುದಯ್ಯ??
ಥೂ! ಮನುಶ್ಯನೆಂಬಾ ಕಳಂಕದಾಪಟ್ಟ ಹೊತ್ತು,
ಹೊಲಗೇರಿಯೆಂಬಾ, ಹಣೆಪಟ್ಟಿಗೇ ಹೆದರಿ,
ಕೇರಿ ಹೊರಗೆ, ನಿಂತಾಪಾಪಿ ನೀ…
ಶತ ಶತಮಾನದ ಶಾಪ! ಏನೀದರ ಆಳಾ… ಅಗಲವಯ್ಯ??
ಈ ರಾಮನ ‘ಕೊಳೆ’ ಕಳೆವ,
ಪರಿಪರಿಯನೆಂತೂ ತಿಳಿಸು ಗೆಳೆಯಾ??
ಶತಶತಮಾನಗಳೇ… ಕಳೆದವಲ್ಲ,
ಈ ಕಂದಕ ಮುಚ್ಚಲಿಲ್ಲ!!
ಇಲ್ಲಿ ಕನಸ್ಸುಗಳು, ಕನವರಿಕೆಯ ಕೊಳ್ಳಿದೆವ್ವಗಳೇ…
ಹಂದಿ, ನಾಯಿ, ಮೀನು, ಕಾಗೆ, ಗೂಬೆಗೂ ಕಡೆಯಾದನೇ ಮನುಜನೀ…
ಒಮ್ಮತ… ಒಗ್ಗಟ್ಟಿಗೆ, ದಿವ್ಯ ಔಷದಿಯಿರೆ, ತಿಳಿಸಯ್ಯ ಹೆಳೆಯನೇ…
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...