Home / ಕವನ / ಕವಿತೆ / ಊರು-ಕೇರಿ ಕುರಿತು

ಊರು-ಕೇರಿ ಕುರಿತು

ನನ್ನ ಕೇರಿ ನಾಕವೇನು? ವಿಶ್ವವಿನೀಕೇತನ ವಿಹಾರಿ!
ಕೇರಿಯೆಂದರೆ: ಹೊಸಲು ಕಾದು, ಕ್ರಿಯಾಶೀಲ ಸ್ಥಳ!
ಜಗದ ಬಾಗಿಲು… ಪುರಾತನ ತೊಟ್ಟಿಲು.
ಕೈಲಾಸಕೆ ಮೆಟ್ಟಿಲು.
ಇಲ್ಲಿಹರು… ಸಮಗಾರ ಹರಳಯ್ಯ, ಕಲ್ಯಾಣದ ಗುಣಮಣೆ,
ಜಾಂಬುವಂತ, ಮಾದರಚೆನ್ನಯ್ಯ, ಬಡ್ವಿಲಿಂಗಮ್ಮ, ಅರುಂಧತಿ,
ಶಬರಿ, ಬಾಲನಾಗಮ್ಮ…
ಅಂಬೇಡ್ಕರ್‍, ಕರಿಯನಂಥಾ ಮನುಜರು!
ಕೇರಿಗಿಂಥಾ ಜನ್ರು ದೇವರಂಥವ್ರು!
ಜಗಕೆ ಮಾನ ತಂದವ್ರು…
ಎಲ್ಲಿ ಸಿಗುವರೋ… ಕೋಟಿಗೊಬ್ರು…
ಹಲಸು, ಮಾವು, ಹುಲುಸು ಜನರು!
ಬುದ್ಧ, ಬಸವ, ಗುರುನಾನಕ, ಪೈಗಂಬರ್‍, ಯೇಸುಕ್ರಿಸ್ತ,
ಗಾಂಧೀ, ನೆಹರು, ರಾಮ, ಕ್ರಿಷ್ಣ ನಡೆದ ಕೇರಿಯು!
ಊರುಕೇರಿ ಎರಡು ಕಣ್ಣಕಣಗಳ ಬಟ್ಟಬಯಲೋ…
ಕಣ್ಣ ರೆಪ್ಪೆಯಂದದಿ ಪ್ರತಿಕ್ಷಣದಿ ಬಡಿವಾ ಜೋಡಿಯು!
ಹಗಲುರಾತ್ರಿ ಮಿಡಿವಾ ಹೃದಯಸ್ತಂಭ!
ಕೇರಿಯೆಂಬುದೇ ಇಂದ್ರನ ವಡ್ಡೊಲಗ!
ನಿನ್ನಂಥಾ ಕಡು ಪಾಪಿ, ನತದೃಶ್ಟ,
ಈ ಜಗದೀ, ಬೇರೆ ಇಹನೇ??
ದೇಹದಾ ತುಂಬಾ, ನವರಂಧ್ರಗಳೇ…!
ಹೊಸಲಸು ತುಂಬಿದಾ ಮಾಂಸದ ಮುದ್ದೆಯೇ?!
ನಿನಗೆ ನಿದ್ದೆ ಹೇಗೆ ಬರುವುದಯ್ಯ??
ಥೂ! ಮನುಶ್ಯನೆಂಬಾ ಕಳಂಕದಾಪಟ್ಟ ಹೊತ್ತು,
ಹೊಲಗೇರಿಯೆಂಬಾ, ಹಣೆಪಟ್ಟಿಗೇ ಹೆದರಿ,
ಕೇರಿ ಹೊರಗೆ, ನಿಂತಾಪಾಪಿ ನೀ…
ಶತ ಶತಮಾನದ ಶಾಪ! ಏನೀದರ ಆಳಾ… ಅಗಲವಯ್ಯ??
ಈ ರಾಮನ ‘ಕೊಳೆ’ ಕಳೆವ,
ಪರಿಪರಿಯನೆಂತೂ ತಿಳಿಸು ಗೆಳೆಯಾ??
ಶತಶತಮಾನಗಳೇ… ಕಳೆದವಲ್ಲ,
ಈ ಕಂದಕ ಮುಚ್ಚಲಿಲ್ಲ!!
ಇಲ್ಲಿ ಕನಸ್ಸುಗಳು, ಕನವರಿಕೆಯ ಕೊಳ್ಳಿದೆವ್ವಗಳೇ…
ಹಂದಿ, ನಾಯಿ, ಮೀನು, ಕಾಗೆ, ಗೂಬೆಗೂ ಕಡೆಯಾದನೇ ಮನುಜನೀ…
ಒಮ್ಮತ… ಒಗ್ಗಟ್ಟಿಗೆ, ದಿವ್ಯ ಔಷದಿಯಿರೆ, ತಿಳಿಸಯ್ಯ ಹೆಳೆಯನೇ…
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...