Home / ಕವನ / ಕವಿತೆ / ಊರು-ಕೇರಿ ಕುರಿತು

ಊರು-ಕೇರಿ ಕುರಿತು

ನನ್ನ ಕೇರಿ ನಾಕವೇನು? ವಿಶ್ವವಿನೀಕೇತನ ವಿಹಾರಿ!
ಕೇರಿಯೆಂದರೆ: ಹೊಸಲು ಕಾದು, ಕ್ರಿಯಾಶೀಲ ಸ್ಥಳ!
ಜಗದ ಬಾಗಿಲು… ಪುರಾತನ ತೊಟ್ಟಿಲು.
ಕೈಲಾಸಕೆ ಮೆಟ್ಟಿಲು.
ಇಲ್ಲಿಹರು… ಸಮಗಾರ ಹರಳಯ್ಯ, ಕಲ್ಯಾಣದ ಗುಣಮಣೆ,
ಜಾಂಬುವಂತ, ಮಾದರಚೆನ್ನಯ್ಯ, ಬಡ್ವಿಲಿಂಗಮ್ಮ, ಅರುಂಧತಿ,
ಶಬರಿ, ಬಾಲನಾಗಮ್ಮ…
ಅಂಬೇಡ್ಕರ್‍, ಕರಿಯನಂಥಾ ಮನುಜರು!
ಕೇರಿಗಿಂಥಾ ಜನ್ರು ದೇವರಂಥವ್ರು!
ಜಗಕೆ ಮಾನ ತಂದವ್ರು…
ಎಲ್ಲಿ ಸಿಗುವರೋ… ಕೋಟಿಗೊಬ್ರು…
ಹಲಸು, ಮಾವು, ಹುಲುಸು ಜನರು!
ಬುದ್ಧ, ಬಸವ, ಗುರುನಾನಕ, ಪೈಗಂಬರ್‍, ಯೇಸುಕ್ರಿಸ್ತ,
ಗಾಂಧೀ, ನೆಹರು, ರಾಮ, ಕ್ರಿಷ್ಣ ನಡೆದ ಕೇರಿಯು!
ಊರುಕೇರಿ ಎರಡು ಕಣ್ಣಕಣಗಳ ಬಟ್ಟಬಯಲೋ…
ಕಣ್ಣ ರೆಪ್ಪೆಯಂದದಿ ಪ್ರತಿಕ್ಷಣದಿ ಬಡಿವಾ ಜೋಡಿಯು!
ಹಗಲುರಾತ್ರಿ ಮಿಡಿವಾ ಹೃದಯಸ್ತಂಭ!
ಕೇರಿಯೆಂಬುದೇ ಇಂದ್ರನ ವಡ್ಡೊಲಗ!
ನಿನ್ನಂಥಾ ಕಡು ಪಾಪಿ, ನತದೃಶ್ಟ,
ಈ ಜಗದೀ, ಬೇರೆ ಇಹನೇ??
ದೇಹದಾ ತುಂಬಾ, ನವರಂಧ್ರಗಳೇ…!
ಹೊಸಲಸು ತುಂಬಿದಾ ಮಾಂಸದ ಮುದ್ದೆಯೇ?!
ನಿನಗೆ ನಿದ್ದೆ ಹೇಗೆ ಬರುವುದಯ್ಯ??
ಥೂ! ಮನುಶ್ಯನೆಂಬಾ ಕಳಂಕದಾಪಟ್ಟ ಹೊತ್ತು,
ಹೊಲಗೇರಿಯೆಂಬಾ, ಹಣೆಪಟ್ಟಿಗೇ ಹೆದರಿ,
ಕೇರಿ ಹೊರಗೆ, ನಿಂತಾಪಾಪಿ ನೀ…
ಶತ ಶತಮಾನದ ಶಾಪ! ಏನೀದರ ಆಳಾ… ಅಗಲವಯ್ಯ??
ಈ ರಾಮನ ‘ಕೊಳೆ’ ಕಳೆವ,
ಪರಿಪರಿಯನೆಂತೂ ತಿಳಿಸು ಗೆಳೆಯಾ??
ಶತಶತಮಾನಗಳೇ… ಕಳೆದವಲ್ಲ,
ಈ ಕಂದಕ ಮುಚ್ಚಲಿಲ್ಲ!!
ಇಲ್ಲಿ ಕನಸ್ಸುಗಳು, ಕನವರಿಕೆಯ ಕೊಳ್ಳಿದೆವ್ವಗಳೇ…
ಹಂದಿ, ನಾಯಿ, ಮೀನು, ಕಾಗೆ, ಗೂಬೆಗೂ ಕಡೆಯಾದನೇ ಮನುಜನೀ…
ಒಮ್ಮತ… ಒಗ್ಗಟ್ಟಿಗೆ, ದಿವ್ಯ ಔಷದಿಯಿರೆ, ತಿಳಿಸಯ್ಯ ಹೆಳೆಯನೇ…
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...