ದೌರ್ಬಲ್ಯ

ತಾಯಿ ಸೊಟಕ್ಕಂಟಿದ್ದ ದೌರ್ಬಲ್ಯವು ಬೆಳೆಬೆಳೆದು
ಹೆಮ್ಮರವಾಗಿ ಬಳ್ಳಿ ನಡು ಬಳಸುವುದು
ಕಾಲ ಬಳಸಿದ್ದೀಗ ಕೈಯ ಟಳಕುವುದು
ಜೊಲ್ಲು ಸುರಿಸುತ್ತಾ ನಿಂತ ನಾಯಿಯ ಕಾಲಕೆಳಗೇ
ಅದರ ಸೆರೆ ಬಿಡಿಸಿಕೊಳ್ಳಲು ಹವಣಿಸುತ್ತದೆ ನೆರಳು ಪ್ರಾಬಲ್ಯ

ಬದುಕು ರಥವನ್ನೆಳೆವ ಕೀಲೆಣ್ಣೆಯಾಗಿ
ಗತಿ-ಪ್ರಗತಿ-ದುರ್ಗತಿಗಳ ವಕ್ರಚಕ್ರದ ಜಾರೆಣ್ಣೆಯಾಗಿ,
ನರಾಯಣ ಪರಂಪರೆ ಪಣತಿಯ ಸೂಡರೆಣ್ಣೆಯಾಗಿ,
ಜೀವ ಜಂತ್ರದೊಡಲಚ್ಚಾಗಿ ಮನಸಿಜನಚ್ಚು ಮೆಚ್ಚಾಗಿ
ಭೀಮ ಭಯಂಕರರ ಮಣ್ಣು ಮುಕ್ಕಿಸಿ
ಸಂಯಮ ಸನ್ಯಾಸಿಗಳಿಗೆ ಸೊನ್ನೆ ಸುತ್ತಿಸಿ
ಪ್ರಾಬಲ್ಯವೆಂಬುದನಾಳುವಂತಿದೆ ಈ ದೌರ್ಬಲ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೌಂದರ್ಯ ಸ್ಪರ್ಧೆ
Next post ಅರ್‍ಲಿ ಟು ಬೆಡ್ – ಅರ್‍ಲಿ ಟು ರೈಸ್

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys