Home / ಕವನ / ಕವಿತೆ / ಬೇನೆ

ಬೇನೆ

ಈ ಬಾಗಿಲೀಚೆಗೊಂದು ದೃಶ್ಯ ಆಚೆಗೊಂದ ದೃಶ್ಯ
ಈಚೆಗೆ ಗಿಡಕಂಟಿ, ಹೀಚುಹೂವು, ಮುಳ್ಳು
ಕಾಯಿ ಹಣ್ಣು-ಹುಣ್ಣು ಹುಳು
ಆಚೆಗೆ ತಗ್ಗು ಕರೀ ಕಂದಕ ಹಾಳು ಬಾವಿ
ಹಲವು ಕತ್ತರಿಗಳಿಗೆ ಸಿಕ್ಕಿ ನರಗಳೂಳಿಡುವ
ಕೂಗು ಕತ್ತಲು, ಕೊರಗು ಕತ್ತಲು

ಈ ಮೂಲಕ ಹಾಯ್ದು ಬಂದಾಗಲೆಲ್ಲಾ
ಮೈಗೊಂದು ಹೊಸ ಲೇಪ
ಕಣ್ಣಿಗೂಂದು ಹೊಸ ಚಾಳೀಸು
ಸೃಷ್ಟಿಗೆಲ್ಲ ಒಂದು ಹೊಸ ರೂಪ

ಬಂಡೆ ಕೆಳಗೆ ಜಜ್ಜಿ ಹೋಗಿದ್ದ ಸಸಿ
ಬಂಡೆ ಸರಿಸಿದಾಗ ಮರಳಿ ಉಸಿರಾಡಿ ನಗುವುದು
ಹತ್ತಿರ ಬಂದ ಕೂಡಲೇ ಈ ಬಾಗಿಲು
ಕುಗ್ಗುತ್ತದೆ-ಹಿಚುಕುತ್ತದೆ-ಮುಚ್ಚಿಹಾಕಿಕೊಳ್ಳುತ್ತದೆ
ಕರ್ರಗಾಗುತ್ತದೆ, ಕಣ್ಣು ಕಟ್ಟುತ್ತದೆ

ಸಂದಿನೂಳಗೆ ತೂರಿ ಹಿಗ್ಗಾಮುಗ್ಗಾ ಎಳೆದಾಡಿ
ಕೊನೆಗೆ ಉಸಿರುಸಹಿತ ಹೊರಬಂದರೊಂದು ನವಜೀವನ
ಇದ್ದಕ್ಕಿದ್ದಂತೆ ಫಡಾರೆಂದು ತೆರೆದುಕೊಂಡು
ಹರಿದು ಬರುವುದೊಳಗೆ ಬೆಳಕು
ಹೊರಗೂ ಬೆಳಕು ಹರಿಯುತ್ತದೆ

ಅಲ್ಲಿಗಿಲ್ಲಿಗೆ ಓಡಾಡಲು
ಇದೊಂದೇ ದಾರಿಯಲ್ಲಾ ಎಂಬ ಚಿಂತೆ
ಆದರೂ ಪ್ರತಿ ಬಾರಿಯೂ ಪೂರೆ ಕಳಚಿ
ಹೊಸ ಮೈಪಡೆದು ಹೊರಬರುವ ಹಿಗ್ಗು.
(೨೩-೩-೭೮)
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...