ಬೇನೆ

ಈ ಬಾಗಿಲೀಚೆಗೊಂದು ದೃಶ್ಯ ಆಚೆಗೊಂದ ದೃಶ್ಯ
ಈಚೆಗೆ ಗಿಡಕಂಟಿ, ಹೀಚುಹೂವು, ಮುಳ್ಳು
ಕಾಯಿ ಹಣ್ಣು-ಹುಣ್ಣು ಹುಳು
ಆಚೆಗೆ ತಗ್ಗು ಕರೀ ಕಂದಕ ಹಾಳು ಬಾವಿ
ಹಲವು ಕತ್ತರಿಗಳಿಗೆ ಸಿಕ್ಕಿ ನರಗಳೂಳಿಡುವ
ಕೂಗು ಕತ್ತಲು, ಕೊರಗು ಕತ್ತಲು

ಈ ಮೂಲಕ ಹಾಯ್ದು ಬಂದಾಗಲೆಲ್ಲಾ
ಮೈಗೊಂದು ಹೊಸ ಲೇಪ
ಕಣ್ಣಿಗೂಂದು ಹೊಸ ಚಾಳೀಸು
ಸೃಷ್ಟಿಗೆಲ್ಲ ಒಂದು ಹೊಸ ರೂಪ

ಬಂಡೆ ಕೆಳಗೆ ಜಜ್ಜಿ ಹೋಗಿದ್ದ ಸಸಿ
ಬಂಡೆ ಸರಿಸಿದಾಗ ಮರಳಿ ಉಸಿರಾಡಿ ನಗುವುದು
ಹತ್ತಿರ ಬಂದ ಕೂಡಲೇ ಈ ಬಾಗಿಲು
ಕುಗ್ಗುತ್ತದೆ-ಹಿಚುಕುತ್ತದೆ-ಮುಚ್ಚಿಹಾಕಿಕೊಳ್ಳುತ್ತದೆ
ಕರ್ರಗಾಗುತ್ತದೆ, ಕಣ್ಣು ಕಟ್ಟುತ್ತದೆ

ಸಂದಿನೂಳಗೆ ತೂರಿ ಹಿಗ್ಗಾಮುಗ್ಗಾ ಎಳೆದಾಡಿ
ಕೊನೆಗೆ ಉಸಿರುಸಹಿತ ಹೊರಬಂದರೊಂದು ನವಜೀವನ
ಇದ್ದಕ್ಕಿದ್ದಂತೆ ಫಡಾರೆಂದು ತೆರೆದುಕೊಂಡು
ಹರಿದು ಬರುವುದೊಳಗೆ ಬೆಳಕು
ಹೊರಗೂ ಬೆಳಕು ಹರಿಯುತ್ತದೆ

ಅಲ್ಲಿಗಿಲ್ಲಿಗೆ ಓಡಾಡಲು
ಇದೊಂದೇ ದಾರಿಯಲ್ಲಾ ಎಂಬ ಚಿಂತೆ
ಆದರೂ ಪ್ರತಿ ಬಾರಿಯೂ ಪೂರೆ ಕಳಚಿ
ಹೊಸ ಮೈಪಡೆದು ಹೊರಬರುವ ಹಿಗ್ಗು.
(೨೩-೩-೭೮)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಮ
Next post ಎಂಥಾ ಬೆಪ್ಪು

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys