Home / ಕವನ / ಕವಿತೆ / ವಾಸ್ತವ

ವಾಸ್ತವ

ಚಿತ್ರ: ದೇವನಾಥ
ಚಿತ್ರ: ದೇವನಾಥ

ಪಾಪದವರು ನಾವು
ಅದೆಶ್ಟೋ ಕೋಪ, ತಾಪದಲಿ,
ಪಾಪದ ಕೊಡ ತುಂಬಿ, ತುಂಬಿ…
ಈ ಊರು, ಕೇರಿ, ಹರಿದಿದೆ!
ಎದುರು ಬಿಸಿಲಿಗೆ, ಕಬ್ಬಿಣದಾ ಅದಿರಾಗಿ, ಕಾದಿದ್ದೇವೆ!
ಹಾದು ಹೋಗುವವರ, ಕಾಲುಗಳ ಕಾದು ಕಾದು…
ಕಣ್ಣುಗುಡ್ಡೆ ಒಡೆದೂ…
ಬಳಲಿ ಬೆಂಡಗಿ, ಕರಕಾಗಿ, ಅಲ್ಲೆ ಕುಂತಿದ್ದೇವೆ!
ಕುಂತಿ ಪುತ್ರರಾಗಿ, ಭರತ, ಶತೃಜ್ಞರಾಗಿ-
ಸೂತಕವಿನ್ನು ಕಳೆದಿಲ್ಲ! ಅಡಿಗೆ ಮನೆಗೆ ಕರೆದಿಲ್ಲ!!
*  *  *

ಕರೆಬಾನಿಲೆದ್ದಿ, ತೊಳೆದ ಕೈಗಳ, ಈ ನೀಸುತನ
ಏಳುಕೆರೆ, ಸಪ್ತ ಸಾಗರದಲೆದ್ದಿ, ತೊಳೆತೊಳ್ದೆರಿನ್ನು ಕಳೆದಿಲ್ಲ!
ದೇಶ ವಿದೇಶದ, ಸುವಾಸನೆಯ ಸುಗಂಧ ದ್ರವ್ಯಲದ್ದಿ ತೀಡಿ, ತಿಕ್ಕಿದರೂ…
ಆ ಜಿಗುಟು, ಕಮಟು, ಮಡ್ಸು ವಾಸನೆಗೆ ವಿಮುಕ್ತಿಯಿಲ್ಲ!
ಶತಶತಮಾನದ ಈ ಶಾಪ, ಯಾವ ಜನ್ಮದಲ್ಲಂಟಿತೋ?!
ಹರಳಯ್ಯನಿಂದಾ ಮೊದಲುಗೊಂಡು,
ರೆಂಪಿಗೆಯಾಡಿಸಿದವರ ಪಾಡು,
ಹಾಡಾಗಿ, ಅರಣ್ಯರೋಧನವಾಗಿ, ಹರಿದಿದೆಯಲ್ಲಾ?!
ಕಲ್ಯಾಣದಣ್ಣಗಳಿರಾ…
ಚಪ್ಪಲಿ ಪೂಜೆ ಯಾಕಂದಿರಾ??
ಹರಳಯ್ಯ, ಕಲ್ಯಾಣಮ್ಮನ, ತೊಡೆ ಚರ್ಮದಿ, ಮಾಡಿದ ಕೆರಗಳಿಗೆ,
ಕರ ಮುಗಿದ, ಅಣ್ಣಬಸವಣ್ಣನವರು!!
ಈ ಮೆಟ್ಟು ಮೆಟ್ಟಿದ ತಪ್ಪಿಗೆ
ಕಾಲುರಿ, ಕಣ್ಣುರಿ, ಅಂಗಾಂಗ ಉರಿ ಉರಿ ಎದ್ದು…
ಕರೆಬಾನಿಲಿ ಮುಳುಗೆದ್ದು,
ಕೆರಗಳಿಗೆ ಮನ ತಂದ ಮಾನವಂತ!!
ಶೀಲವಂತನ ಮದುವೆಗೆ, ದಂಗೆ ಎದ್ದ ಜನ,
ಅದೇ ಕಾಲ್ಮರಿಗೆ, ಶರಣೆಂದದ್ದು ಸರಿಯೇ??
*  *  *

ಊರುಕೇರಿ, ಜಗಲಿ ಮೇಲೆ…
ಸಣ್ಣ, ದೊಡ್ಡವರ, ಕಾಲ ಕೆಳಗೆ, ಕಣ್ಣಸೆಳೆವ,
ಗುಡಿ, ಚರ್ಚು, ಮಸೀದಿ, ಅಡಿಗೆ ಮನೇಲಿ,
ಕಾಲ ಮೇಲೆ ಕಾಲನೇರಿ, ಮೆರೆವ ಕಾಲ್ಮಾರಿಗಳೇ…
ನಾವಿನ್ನೂ ಹೊರಗೇ ಊರ ಹೊರಗೇ…!!
ಕೆರಗಳಿಗೆ, ಕರ ಮುಗಿವ, ಹಿರಿಜನರೇ…
ಈ ಹರಿಜನರ, ಕಡೆಗಣಿಸಿರುವುದು, ಸರಿಯೇ??
ಓ… ಹರಿಯೇ… ಇದು ಸರಿಯೇ?!
ಯುಗ ಯುಗಳೆ ಕಳೆದರೂ…
ಕೆರಗಳ ಪರ್‍ಯಾಯವೆಲ್ಲಿದೆ ಹೇಳಿ??
ಕೆರಗಳ ಮಾಡಿದವರ,
ಕರ ಪಿಡಿದು, ಎತ್ತಿದವರುಂಟೇ??
ಪುರಾಣ, ಪುಣ್ಯಪುರುಷರು ಕೆರಗಳಿಗೆ ಕರಮುಗಿದು,
ಗದ್ದುಗೆ ಮೇಲಿಟ್ಟು, ಪೂಜಿಸಿ ಪುನೀತರಾಗಿದ್ದು ಸುಳ್ಳೇ??
ಕೆರಗಳಿಗೆ ಗುಡಿಕಟ್ಟಿ, ಕರ ಮುಗಿವದು ತಿಳಿಯದೇ?
ಅಣ್ಣ ಬಸವಣ್ಣ, ಕೆರಗಳ ಶಿರದಲಿ ಹೊತ್ತು, ಮೆರೆದಾಡಿದ್ದು ಪುರಾಣವೇ??
ಸಭೆ, ಸಮಾರಂಭ, ವಿಧಾನ ಸೌಧದಲಿ…
ಕೆರಗಳು ಕರದಲ ರಂಗೇರಿ, ಹಾರಾಡಿ, ತೂರಾಡಿದಾಗ,
ಮಾದಿಗರ ಶ್ರಮ ಸಾರ್ಥಕವಾಗಿ, ಧನ್ಯರಾಗಿ…
ಪುಟ್ಟ ಕಂದನ ಎತ್ತಿ, ಮುದ್ದಾಡಿದ ಖುಷಿ ಕೇರಿಗರಿಗೆ!!
*  *  *

ಈ ನಮ್ಮ ಹೊಲಸು ಕೆರಗಳಿಗೆ
ಕಡೆಯಾದ ಬುದ್ಧಿ ಕಂಡು ಕೆರಳಿ, ಇವರ…
ಕಿತ್ತೋದ ಕೆರಗಳೆಂಬೆ!
ಸವಕಲು ಮನಸ್ಸೆಂಬೆ!
ಕಿಲುಬುಗಟ್ಟಿದ ಜನರೆಂಬೆ…
…ಮುಳ್ಳುರೆಂಬೆಯೆಂಬೆ!!
ಮಟ ಮಟ ಮಧ್ಯಾನದ ಮಾದಿರೆಂಬೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...