Home / ಕವನ / ಕವಿತೆ / ವಾಸ್ತವ

ವಾಸ್ತವ

ಚಿತ್ರ: ದೇವನಾಥ
ಚಿತ್ರ: ದೇವನಾಥ

ಪಾಪದವರು ನಾವು
ಅದೆಶ್ಟೋ ಕೋಪ, ತಾಪದಲಿ,
ಪಾಪದ ಕೊಡ ತುಂಬಿ, ತುಂಬಿ…
ಈ ಊರು, ಕೇರಿ, ಹರಿದಿದೆ!
ಎದುರು ಬಿಸಿಲಿಗೆ, ಕಬ್ಬಿಣದಾ ಅದಿರಾಗಿ, ಕಾದಿದ್ದೇವೆ!
ಹಾದು ಹೋಗುವವರ, ಕಾಲುಗಳ ಕಾದು ಕಾದು…
ಕಣ್ಣುಗುಡ್ಡೆ ಒಡೆದೂ…
ಬಳಲಿ ಬೆಂಡಗಿ, ಕರಕಾಗಿ, ಅಲ್ಲೆ ಕುಂತಿದ್ದೇವೆ!
ಕುಂತಿ ಪುತ್ರರಾಗಿ, ಭರತ, ಶತೃಜ್ಞರಾಗಿ-
ಸೂತಕವಿನ್ನು ಕಳೆದಿಲ್ಲ! ಅಡಿಗೆ ಮನೆಗೆ ಕರೆದಿಲ್ಲ!!
*  *  *

ಕರೆಬಾನಿಲೆದ್ದಿ, ತೊಳೆದ ಕೈಗಳ, ಈ ನೀಸುತನ
ಏಳುಕೆರೆ, ಸಪ್ತ ಸಾಗರದಲೆದ್ದಿ, ತೊಳೆತೊಳ್ದೆರಿನ್ನು ಕಳೆದಿಲ್ಲ!
ದೇಶ ವಿದೇಶದ, ಸುವಾಸನೆಯ ಸುಗಂಧ ದ್ರವ್ಯಲದ್ದಿ ತೀಡಿ, ತಿಕ್ಕಿದರೂ…
ಆ ಜಿಗುಟು, ಕಮಟು, ಮಡ್ಸು ವಾಸನೆಗೆ ವಿಮುಕ್ತಿಯಿಲ್ಲ!
ಶತಶತಮಾನದ ಈ ಶಾಪ, ಯಾವ ಜನ್ಮದಲ್ಲಂಟಿತೋ?!
ಹರಳಯ್ಯನಿಂದಾ ಮೊದಲುಗೊಂಡು,
ರೆಂಪಿಗೆಯಾಡಿಸಿದವರ ಪಾಡು,
ಹಾಡಾಗಿ, ಅರಣ್ಯರೋಧನವಾಗಿ, ಹರಿದಿದೆಯಲ್ಲಾ?!
ಕಲ್ಯಾಣದಣ್ಣಗಳಿರಾ…
ಚಪ್ಪಲಿ ಪೂಜೆ ಯಾಕಂದಿರಾ??
ಹರಳಯ್ಯ, ಕಲ್ಯಾಣಮ್ಮನ, ತೊಡೆ ಚರ್ಮದಿ, ಮಾಡಿದ ಕೆರಗಳಿಗೆ,
ಕರ ಮುಗಿದ, ಅಣ್ಣಬಸವಣ್ಣನವರು!!
ಈ ಮೆಟ್ಟು ಮೆಟ್ಟಿದ ತಪ್ಪಿಗೆ
ಕಾಲುರಿ, ಕಣ್ಣುರಿ, ಅಂಗಾಂಗ ಉರಿ ಉರಿ ಎದ್ದು…
ಕರೆಬಾನಿಲಿ ಮುಳುಗೆದ್ದು,
ಕೆರಗಳಿಗೆ ಮನ ತಂದ ಮಾನವಂತ!!
ಶೀಲವಂತನ ಮದುವೆಗೆ, ದಂಗೆ ಎದ್ದ ಜನ,
ಅದೇ ಕಾಲ್ಮರಿಗೆ, ಶರಣೆಂದದ್ದು ಸರಿಯೇ??
*  *  *

ಊರುಕೇರಿ, ಜಗಲಿ ಮೇಲೆ…
ಸಣ್ಣ, ದೊಡ್ಡವರ, ಕಾಲ ಕೆಳಗೆ, ಕಣ್ಣಸೆಳೆವ,
ಗುಡಿ, ಚರ್ಚು, ಮಸೀದಿ, ಅಡಿಗೆ ಮನೇಲಿ,
ಕಾಲ ಮೇಲೆ ಕಾಲನೇರಿ, ಮೆರೆವ ಕಾಲ್ಮಾರಿಗಳೇ…
ನಾವಿನ್ನೂ ಹೊರಗೇ ಊರ ಹೊರಗೇ…!!
ಕೆರಗಳಿಗೆ, ಕರ ಮುಗಿವ, ಹಿರಿಜನರೇ…
ಈ ಹರಿಜನರ, ಕಡೆಗಣಿಸಿರುವುದು, ಸರಿಯೇ??
ಓ… ಹರಿಯೇ… ಇದು ಸರಿಯೇ?!
ಯುಗ ಯುಗಳೆ ಕಳೆದರೂ…
ಕೆರಗಳ ಪರ್‍ಯಾಯವೆಲ್ಲಿದೆ ಹೇಳಿ??
ಕೆರಗಳ ಮಾಡಿದವರ,
ಕರ ಪಿಡಿದು, ಎತ್ತಿದವರುಂಟೇ??
ಪುರಾಣ, ಪುಣ್ಯಪುರುಷರು ಕೆರಗಳಿಗೆ ಕರಮುಗಿದು,
ಗದ್ದುಗೆ ಮೇಲಿಟ್ಟು, ಪೂಜಿಸಿ ಪುನೀತರಾಗಿದ್ದು ಸುಳ್ಳೇ??
ಕೆರಗಳಿಗೆ ಗುಡಿಕಟ್ಟಿ, ಕರ ಮುಗಿವದು ತಿಳಿಯದೇ?
ಅಣ್ಣ ಬಸವಣ್ಣ, ಕೆರಗಳ ಶಿರದಲಿ ಹೊತ್ತು, ಮೆರೆದಾಡಿದ್ದು ಪುರಾಣವೇ??
ಸಭೆ, ಸಮಾರಂಭ, ವಿಧಾನ ಸೌಧದಲಿ…
ಕೆರಗಳು ಕರದಲ ರಂಗೇರಿ, ಹಾರಾಡಿ, ತೂರಾಡಿದಾಗ,
ಮಾದಿಗರ ಶ್ರಮ ಸಾರ್ಥಕವಾಗಿ, ಧನ್ಯರಾಗಿ…
ಪುಟ್ಟ ಕಂದನ ಎತ್ತಿ, ಮುದ್ದಾಡಿದ ಖುಷಿ ಕೇರಿಗರಿಗೆ!!
*  *  *

ಈ ನಮ್ಮ ಹೊಲಸು ಕೆರಗಳಿಗೆ
ಕಡೆಯಾದ ಬುದ್ಧಿ ಕಂಡು ಕೆರಳಿ, ಇವರ…
ಕಿತ್ತೋದ ಕೆರಗಳೆಂಬೆ!
ಸವಕಲು ಮನಸ್ಸೆಂಬೆ!
ಕಿಲುಬುಗಟ್ಟಿದ ಜನರೆಂಬೆ…
…ಮುಳ್ಳುರೆಂಬೆಯೆಂಬೆ!!
ಮಟ ಮಟ ಮಧ್ಯಾನದ ಮಾದಿರೆಂಬೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...