ಸಣ್ಣಹುಡಗಿಯೆ ನಿನ್ನ ಬಣ್ಣಿಸಲಳವೆ ಮುನ್ನಾ

ಸಣ್ಣಹುಡಗಿಯೆ ನಿನ್ನ ಬಣ್ಣಿಸಲಳವೆ ಮುನ್ನಾ
ಆಣಿದ ಜಾಲಕೆ ನಿನ್ನಾ ಬೆನ್ನ ಹತ್ತಿ ಮುನಿ ಜನ
ನುಣ್ಣಗ ಸಂದಾನ್ನವರು ಮನುಜರು ಚನ್ನಚಲ್ವಿಕೆಗೆ ಸೋತು ಅರಣ್ಯದಿ
ರನ್ನ ಸಿದ್ಧ ಋಷಿಗಳನು ಕೆಣಕಿ ಬಲಗಣ್ಣು
ಸೊನ್ನಿಮಾಡಿ ಕಾಮ ಪಾಶದಿ ಮಣ್ಣುಗೂಡಿಸಿದೆ
ಬಿಡು ಮಾಯಿ ಹೌದು ಬಿಡು
ಘನ್ನ ಘಾತಕನ ಕಂಡೆ ನಮ್ಮನ್ನಾ || ೧ ||

ಮೊದಲಿಗೆ ಶಿವನೊಳು ಮುದದಿ ಮೋಹಿಸಿದಳು
ಕದನ ಹಚ್ಚಿ ಲಂಕಾದ್ರಿಯ ಸುಡಿಸಿದಿ
ಅದನ ತಿಳಿದು ಸುಗ್ರೀವನ ಮಡದಿಗೆ ನಜರಿಟ್ಟು
ವಾಲಿಯನು ಹೊಡಸಿದಿ
ಒದಗಿ ಬ್ಯಾಗ ಬ್ರಹ್ಮನ ಶಿರಗಡಿಸಿದಿ
ಇದನ ಕೇಳಿ ಎಮಗೆ ಹೆದರಿಕೆ ಬರುತಿರೆ
ಎದುರಿಗೆ ಬರದಿರು ಪದಮಸುನಿಯಳೆ || ೨ ||

ಆರೆಣೆಗಾಣೆ ನಿನಗೆ ನಾರಿಮಣಿಯರೊಳಗೆ
ಮೀರಿದೊಯ್ಯಾರೆ ಈಗ ಮೂರುಲೋಕಾ ನಿನ್ನ ಕೆಳಗೆ
ದ್ವಾರಕನಗರವ ನೀರೊಳು ಮುಣಗಿಸಿ
ನಾರಾಯಣನ ಮೆಟ್ಟಿ ಕುಳಿತೆ ಸಖಿ
ಧಾರಣಿಪತಿ ಪಾಂಡವರ ಜೂಜಿನಲಿ ಸೇರಿ ಅಡವಿಗಟ್ಟಿಸಿ ನಿನ್ನ ಗುಣಾ
ಸಾರಲೇನು ಶಿಶುನಾಳಧೀಶನ ಮುಂದೆ ತೋರಿಸದಿರು
ಬಡಿವಾರ ಬಜಾರಿ || ೩ ||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನವ್ವಾಲೆ ಬಂತಪ್ಪ ನವ್ವಾಲೆ
Next post ಸಾಕ್ಷಾತ್ಕಾರ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

cheap jordans|wholesale air max|wholesale jordans|wholesale jewelry|wholesale jerseys