ಚೆಲುವ ನಾರಾಯಣನೆ
ಬಂದ ಮಗನಾಗಿ,
ದಿನ ದಿನವು ಕಂದನನು
ತೋಳಿನಲಿ ತೂಗಿ,
ಪರಿಮಳಿಸುತಿದೆ ಬಾಳು
ಹಾಲು ಜೊತೆ ಜೇನು
ಬೆರೆತಂತಿರುವ ಸುಖಕೆ
ಸ್ವರ್ಗ ಸಮವೇನು?
*****