ಕೆಟ್ಟ ಕಣ್ಣು

ನಮ್ಮ ಕಣ್ಣು ಬಹಳ ಕೆಟ್ಟವು ಸ್ವಾಮೀ,
ಒಳ್ಳೆದೆಂಬುದರಲೆಲ್ಲಾ ಕೆಟ್ಟದನೇ ಕಾಣ್ತಾವೆ,
ಕೆಟ್ಟ ಕೆಟ್ಟುದರಾಗೇ ಗಟ್ಟಿಯೇನೋ ಕಾಣ್ತಾವೆ,
ನೋಡಬಾರದಂಬೋವನೆಲ್ಲ ತಿರುತಿರುಗಿ ನೋಡ್ತಾವೆ,
ಹೋಗಬಾರದೆಂಬೆಡೆಯಲ್ಲಿ ಬೇಲಿ ದಾಟಬೇಕಂತಾವೆ
ಚೆಲುವಿನ ಸೆಲೆಗಳ ನೋಡುತ್ತ ಸೌಂದರ್ಯಮೀಮಾಂಸೆಗೆ
ತೊಡಗುತ್ತವೆ
ರಸಪಾತ್ರೆಗಳ ಅಳೆದುಸುರಿದು ಅವುಗಳ
ಜೀವ-ರಸಾಯನ ಶಾಸ್ತ್ರ ಪ್ರಮಾಣ ನಿಷ್ಕರ್ಷೆ ಮಾಡುತ್ತವೆ
ಬಣ್ಣ ಬಿಂದುಗಳ ವಾಸನೆ ಮೂಸುತ್ತಾ ಹೋಗಿ
ಅವುಗಳ ವಂಶವೃಕ್ಷ ಚರಿತ್ರೆಯ ತೋಡುತ್ತವೆ
ಕೋಟಿ ದೇವತೆಗಳನೆಲ್ಲ ಆಡಿಸಿದ ಆ ಸೂತ್ರದಿಂದ
ಈ ಮನುಕುಲದಾಧಿಪತ್ಯಗಳ ಮಣ್ಣು ಮಾಡಿ
ಆದಮೀವರ ಏಕಚಕ್ರಾಧಿಪತ್ಯಗಳ ಕಲ್ಪಿಸುತ್ತವೆ
ಈ ಕೊಂಬೆರೆಂಬೆಗಳ ನೇರ ದೊಂಬಿಗಳ ಕೆಳಗಿನ
ಬೇರನೇ ಗುರಿಯಿಡುತ್ತವೆ ಆದ್ದರಿಂದ
ನಿಮ್ಮ ದೃಷ್ಟಿಯಲ್ಲಿ ನಮ್ಮ ಕಣ್ಣು ಬಹಳ ಕೆಟ್ಟವು ಸ್ವಾಮಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ – ಕರ್ನಾಟಕ ಜಾಗೃತಿಯಲ್ಲಿ ಕನ್ನಡ ಚಿತ್ರರಂಗದ ಪಾತ್ರ
Next post ಲಿಂಗಮ್ಮನ ವಚನಗಳು – ೮೧

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…