ಶಾಲಾ ಪ್ರಾರ್ಥನೆ

ದೇವಿ ನಿನ್ನ ಬೇಡುವೆ
ಕಾಯೊ ದೂರ ಮಾಡದೆ,
ಶಕ್ತಿ ನೀಡು ಬಾಳುವಂತೆ ಸತ್ಯ ಧರ್ಮ ಮೀರದೆ.

ಸೂರ್ಯನಾಗಿ ಮೇಲೆ ಚಲಿಸಿ
ಕತ್ತಲನ್ನು ಹರಿಸುವೆ,
ಮೋಡವಾಗಿ ನೀರು ಸುರಿಸಿ
ಲೋಕಕನ್ನ ಉಣಿಸುವೆ,
ಪ್ರಾಣವಾಯುವಾಗಿ ಸುಳಿದು
ಕಾಣದಂತೆ ಕಾಯುವೆ,
ತಂದೆ ನಿನ್ನ ಕರುಣೆಯ ಹೇಗೆ ತಾನೆ ಮರೆಯುವೆ?

ಹರಿಸಿನಲ್ಲು ಹೂವಿನಲ್ಲು
ನಿನ್ನ ಹೆಜ್ಜೆಗುರುತಿದೆ,
ಕೋಟಿ ಹಕ್ಕಿ ಕಂಠದಲ್ಲಿ
ನಿನ್ನ ಸ್ತೋತ್ರ ಚಿಮ್ಮಿದೆ.
ಎಲೆ ಎಲೆಯೂ ನಿನ್ನ ಚಿತ್ರ-
ಕಲೆಯ ಘನತೆ ಸಾರಿದೆ,
ಎಲ್ಲೆಲ್ಲೂ ನೀನೆ ತಂದೆ ನಿನ್ನದಲ್ಲದೇನಿದೆ?

ಈ ಲೋಕ ನೀನು ಇರುವ
ಸುಂದರ ದೇವಾಲಯ,
ಒಳಗೆ ಕೂತು ಮಿಡಿವೆಯಂತೆ
ಇದರ ಎಲ್ಲ ನಾಡಿಯ.
ಇದರ ಸೇವೆ ನಿನ್ನ ಪೂಜೆ
ಎಂಬ ಋಷೀವಾಣಿಯ,
ನಂಬಿದೆವು ಹರಸು ನಮ್ಮ, ನಾವು ಕಲಿವ ಶಾಲೆಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೬೬
Next post ಮೆಟಿಲ್ಡಾ

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…