ಕ್ಷಾಮ

ಇತಿಯೋಪಿಯಾದಲ್ಲಿ ಕ್ಷಾಮ ಬಂದು
ಇಡೀ ಒಂದು ಗ್ರಾಮವೇ ಬಲಿಯಾಯಿತೆಂದು
ಬೆಳಗ್ಗಿನ ಕಾಫಿ ಹೀರುತ್ತ
ಪತ್ರಿಕೆಯಲ್ಲಿ ಓದಿ

ಕೇಳಿದೆಯೇನೆ ಸುದ್ದಿ
ಎಂದು ಉದ್ಗರಿಸಲಿಲ್ಲ.
ದೇವರಿಗೆ ದೀಪ ಹಚ್ಚಿ ನೀನು
ಪ್ರಾರ್ಥಿಸುತ್ತಿದ್ದುದು ಏನು
ಎಂದು ಕೇಳಲಿಲ್ಲ.

ಮನೆಯೆದುರಿನ ಆಲದ ಮರದಿಂದ ಕಾಗೆಗಳು
ಹಾರಿ ಹೋದುವು ಸದ್ದಿಲ್ಲದೆ.
ಇದು ಸಂಶೋಧಕರ ಗಮನಕ್ಕೆ ಬಂದಾಗ
ಯಾರೂ ಬದುಕಿರಲಿಲ್ಲ.

ಈ ಗ್ರಾಮ ನೀರಿಲ್ಲದೆ ಸತ್ತಿತು.
ನೀರಿಗಾಗಿ ಹೋದವರು
ದಾರಿಯಲ್ಲಿ ಬಿದ್ದರು.  ಕೊಡಗಳ ಚೂರು
ಅಲ್ಲಲ್ಲಿ ಒಂದೆರಡು ಎಲುಬುಗಳ ತುಂಡು
ಮತ್ತೆ ಇವರ ಕಣ್ಣುಗಳೇನಾದವೋ
ಯಾರಿಗೂ ತಿಳಿಯದು.

ಸೂರ್ಯಕಾಂತಿಗೆ ಮಣ್ಣುನೀರುಬೇಕು
ಅಳುವುದಕ್ಕಾದರೂ ಕಣ್ಣುಬೇಕು
ಬೆಂಗಾಡಿನಲ್ಲೇನು ಸಾವುನೋವು
ಸತ್ತಮೇಲೇನು ಮತ್ತೆ ಸಾವು

ಇದು ಮೊತ್ತಮೊದಲು ವಿಮಾನಪ್ರಯಾಣಿಕರ ದೃಷ್ಟಿಗೆ ಬಿತ್ತು
ಕೆಳಗೆ ಹದ್ದುಗಳು ಎರಗುವುದನ್ನು ಇವರು ಗಮನಿಸಿದರು
ಮರಣದ ವಾಸನೆ ಎಷ್ಟು ದೂರ ಹೊಡೆದೀತು
ಇಡೀ ಗ್ರಾಮವೇ ನಾಶವಾದಮೇಲೆ

ಮುಸುಲೊನಿಯೂ ಒಮ್ಮೆ ಹೀಗೆ ಎರಗಿದ್ದನಲ್ಲ
ಅದೊಂದು ಇತಿಹಾಸ.  ಇದು
ಅದರ ಪರಿಹಾಸ.  ಹೀಗೆ
ಕುರುಡು ರಾಜ್ಯದ ಕಣ್ಣುಗುಂಡಿಗಳಲ್ಲಿ
ಕಂಡುಕಾಣದ ಕತೆಗಳು
ಮರುಕಳಿಸುವ ವ್ಯಥೆಗಳು

ಆದರೆ ಇದೀಗ ಬಿಸಿಲ ಬೇಗೆ ನನ್ನ ಮುಖಕ್ಕೇ ಹೊಡೆಯುತ್ತಿದೆ
ನೋಡಲಾರೆ ಹೊರಕ್ಕೆ
ಹೊರಟಿದ್ದಾಳೆ ಈಕೆ ನೀರಿಗೆಂದು
ದೂರದ ಬಾವಿಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಷ್ಟ ಪಾಡ್ಯದ ಚಂದ್ರ
Next post ಹುನ್ನಾರ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…