ಕ್ಷಾಮ

ಇತಿಯೋಪಿಯಾದಲ್ಲಿ ಕ್ಷಾಮ ಬಂದು
ಇಡೀ ಒಂದು ಗ್ರಾಮವೇ ಬಲಿಯಾಯಿತೆಂದು
ಬೆಳಗ್ಗಿನ ಕಾಫಿ ಹೀರುತ್ತ
ಪತ್ರಿಕೆಯಲ್ಲಿ ಓದಿ

ಕೇಳಿದೆಯೇನೆ ಸುದ್ದಿ
ಎಂದು ಉದ್ಗರಿಸಲಿಲ್ಲ.
ದೇವರಿಗೆ ದೀಪ ಹಚ್ಚಿ ನೀನು
ಪ್ರಾರ್ಥಿಸುತ್ತಿದ್ದುದು ಏನು
ಎಂದು ಕೇಳಲಿಲ್ಲ.

ಮನೆಯೆದುರಿನ ಆಲದ ಮರದಿಂದ ಕಾಗೆಗಳು
ಹಾರಿ ಹೋದುವು ಸದ್ದಿಲ್ಲದೆ.
ಇದು ಸಂಶೋಧಕರ ಗಮನಕ್ಕೆ ಬಂದಾಗ
ಯಾರೂ ಬದುಕಿರಲಿಲ್ಲ.

ಈ ಗ್ರಾಮ ನೀರಿಲ್ಲದೆ ಸತ್ತಿತು.
ನೀರಿಗಾಗಿ ಹೋದವರು
ದಾರಿಯಲ್ಲಿ ಬಿದ್ದರು.  ಕೊಡಗಳ ಚೂರು
ಅಲ್ಲಲ್ಲಿ ಒಂದೆರಡು ಎಲುಬುಗಳ ತುಂಡು
ಮತ್ತೆ ಇವರ ಕಣ್ಣುಗಳೇನಾದವೋ
ಯಾರಿಗೂ ತಿಳಿಯದು.

ಸೂರ್ಯಕಾಂತಿಗೆ ಮಣ್ಣುನೀರುಬೇಕು
ಅಳುವುದಕ್ಕಾದರೂ ಕಣ್ಣುಬೇಕು
ಬೆಂಗಾಡಿನಲ್ಲೇನು ಸಾವುನೋವು
ಸತ್ತಮೇಲೇನು ಮತ್ತೆ ಸಾವು

ಇದು ಮೊತ್ತಮೊದಲು ವಿಮಾನಪ್ರಯಾಣಿಕರ ದೃಷ್ಟಿಗೆ ಬಿತ್ತು
ಕೆಳಗೆ ಹದ್ದುಗಳು ಎರಗುವುದನ್ನು ಇವರು ಗಮನಿಸಿದರು
ಮರಣದ ವಾಸನೆ ಎಷ್ಟು ದೂರ ಹೊಡೆದೀತು
ಇಡೀ ಗ್ರಾಮವೇ ನಾಶವಾದಮೇಲೆ

ಮುಸುಲೊನಿಯೂ ಒಮ್ಮೆ ಹೀಗೆ ಎರಗಿದ್ದನಲ್ಲ
ಅದೊಂದು ಇತಿಹಾಸ.  ಇದು
ಅದರ ಪರಿಹಾಸ.  ಹೀಗೆ
ಕುರುಡು ರಾಜ್ಯದ ಕಣ್ಣುಗುಂಡಿಗಳಲ್ಲಿ
ಕಂಡುಕಾಣದ ಕತೆಗಳು
ಮರುಕಳಿಸುವ ವ್ಯಥೆಗಳು

ಆದರೆ ಇದೀಗ ಬಿಸಿಲ ಬೇಗೆ ನನ್ನ ಮುಖಕ್ಕೇ ಹೊಡೆಯುತ್ತಿದೆ
ನೋಡಲಾರೆ ಹೊರಕ್ಕೆ
ಹೊರಟಿದ್ದಾಳೆ ಈಕೆ ನೀರಿಗೆಂದು
ದೂರದ ಬಾವಿಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಷ್ಟ ಪಾಡ್ಯದ ಚಂದ್ರ
Next post ಹುನ್ನಾರ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys