Home / ಲೇಖನ / ಸಾಹಿತ್ಯ / ಮುಂಬರುವ “ಶೌಚಾಲಯ”

ಮುಂಬರುವ “ಶೌಚಾಲಯ”

“ಲ್ಯಾಟ್ರಿನ್’ ಪದ ಅಸಹ್ಯವಲ್ಲ ದೈನಿಕ ಬದುಕಿನ ಜೀವನಕ್ಕೆ ಅನಿವಾರ್ಯವಾದ ವಸ್ತು ಈಗಾಗಲೇ ಹಳ್ಳಿಯಿಂದ ಊರು, ಪೇಟೆ, ಪಟ್ಟಣ ನಗರಗಳಲ್ಲಿ ಈ “ಲ್ಯಾಟ್ರಿನ್” ಆವಿಷ್ಕಾರಗೊಳ್ಳುತ್ತಾ ಬಂದುದನ್ನು ಕಾಣುತ್ತೇವೆ. ಕೆಲವು ಶ್ರೀಮಂತರ ಮನೆಯಲ್ಲಿ ಲಕ್ಷಾಂತರ ರೂ. ಗಳ ವೆಚ್ಚದಲ್ಲಿ ಆಧುನಿಕ ನಮೂನೆಗಳ ಕಕ್ಕಸು ಕೋಣೆಯನ್ನು ಕಟ್ಟಸಿದವರಿದ್ದಾರೆ. ಇವೆಲ್ಲ ಅಂದ, ಚಂದ, ಸ್ವಚ್ಛತೆಯ ದೃಷ್ಟಿಯಿಂದ ಆಪ್ಯಾಯಮಾನವಾಗಿರಬಹುದು.

ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಯ ವೈದ್ಯಕೀಯ ವಿಜ್ಞಾನ ಇಣುಕು ಹಾಕಿದೆ. ಲಂಡನ್ನಿನ ವಿಜ್ಞಾನಿಗಳು ರೂಪಿಸಿದ ಲ್ಯಾಟ್ರಿನ್ ಒಂದು ವರದಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಖ್ಯವಾಗಿ ಗರ್ಭಿಣಿಯರು ಮತ್ತು ಡಯಾಬಿಟಿಸ್ ಕಾಯಿಲೆಗಳಿದ್ದವರ ರೋಗಗಳ ವಿವರವನ್ನು ಈ ಮಲ, ಮೂತ್ರಾಲಯ ನೀಡಲಿದೆ. ಇದಕ್ಕೆ ಸ್ವಯಂ ಚಾಲಿತವಾಗಿ
ಜೋಡಿಸಿದ ಮೋಡೆಮ್‌ಗಳು ರೋಗಿಗಳ ಖಾಸಗಿ ವ್ಶೆದ್ಯರಿಗೆ ರೋಗಗಳ ವಿವರಗಳನ್ನು ಇ-ಮೇಲ್ ಮೂಲಕ ಸಂವಹನ ನಡೆಸುತ್ತವೆ. ವರ್ಸ್‌ಟೈಲ್ ಇಂಟರ್ಯಾಕ್ಟಿವ್ ಪಾನ್ (V.I.P) ಎಂದು ಕರೆಯಲ್ಪಡುವ ಈ ಕಕ್ಕಸ್ಸನ್ನು ಮುಂಬರುವ ಜಾಣ್ಮೆಯ ಕಕ್ಕಸುಗಳೆಂದು ಈಗಾಗಲೇ ಉಪಯೋಗಿಸಿದ ರೋಗಿಗಳ ಅಭಿಪ್ರಾಯವಾಗಿದೆ. ಮಕ್ಕಳು ಅಥವಾ ಅಂಗವಿಕಲರು ಈ ಕಕ್ಕಸ್ಸಿನ ಬಳಿಗೆ ಬಂದು ಮಾತನಾಡಿದರೆ ಸಾಕು ಅದು ಅವರಿಗೆ ಅನುಕೂಲವಾಗುವಂತೆ
ಸ್ವಯಂಚಾಲಿತವಾಗಿ ತನ್ನ ವಿನ್ಯಾಸವನ್ನು ಬದಲಿಸಿಕೊಳ್ಳಲಿದೆ. ಧ್ವನಿಗ್ರಹಣ (ಶಬ್ದ ಮಾಡಿದರೆ) ಮಾಡಿದರೆ ಕಕ್ಕಸ್ಸಿ- ನಿಂದ ಇದು ಕೇವಲ ಮೂತ್ರಾಲಯವಾಗಿ ಪರಿವರ್ತನೆಯಾಗುತ್ತದೆ. ಈ ಹೊಸ ಮಾದರಿಯ ಲ್ಯಾಟ್ರಿನ್  ವಿನ್ಯಾಸ- ಗೊಳಿಸಲು 5 ವರ್ಷ ಹಿಡಿದು 8000 ಡಾಲರ್ ಖರ್ಚಾಗಿದೆ. 2006ರಲ್ಲಿ ಈ ಮಾದರಿಯನ್ನು ಮಾರುಕಟ್ಟೆಗೆ ತರಲಾಗುಪುದೆಂದು ಚೆಸ್ಟರ್ ಮೂಲದ ಟ್ವೈಪೋರ್ಡ್‌ ಬಾತ್‌ರೂಮ್ ಕಂಪನಿ ಪ್ರಕಟಿಸಿದೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...