Home / ಲೇಖನ / ಸಾಹಿತ್ಯ / ಮುಂಬರುವ “ಶೌಚಾಲಯ”

ಮುಂಬರುವ “ಶೌಚಾಲಯ”

“ಲ್ಯಾಟ್ರಿನ್’ ಪದ ಅಸಹ್ಯವಲ್ಲ ದೈನಿಕ ಬದುಕಿನ ಜೀವನಕ್ಕೆ ಅನಿವಾರ್ಯವಾದ ವಸ್ತು ಈಗಾಗಲೇ ಹಳ್ಳಿಯಿಂದ ಊರು, ಪೇಟೆ, ಪಟ್ಟಣ ನಗರಗಳಲ್ಲಿ ಈ “ಲ್ಯಾಟ್ರಿನ್” ಆವಿಷ್ಕಾರಗೊಳ್ಳುತ್ತಾ ಬಂದುದನ್ನು ಕಾಣುತ್ತೇವೆ. ಕೆಲವು ಶ್ರೀಮಂತರ ಮನೆಯಲ್ಲಿ ಲಕ್ಷಾಂತರ ರೂ. ಗಳ ವೆಚ್ಚದಲ್ಲಿ ಆಧುನಿಕ ನಮೂನೆಗಳ ಕಕ್ಕಸು ಕೋಣೆಯನ್ನು ಕಟ್ಟಸಿದವರಿದ್ದಾರೆ. ಇವೆಲ್ಲ ಅಂದ, ಚಂದ, ಸ್ವಚ್ಛತೆಯ ದೃಷ್ಟಿಯಿಂದ ಆಪ್ಯಾಯಮಾನವಾಗಿರಬಹುದು.

ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಯ ವೈದ್ಯಕೀಯ ವಿಜ್ಞಾನ ಇಣುಕು ಹಾಕಿದೆ. ಲಂಡನ್ನಿನ ವಿಜ್ಞಾನಿಗಳು ರೂಪಿಸಿದ ಲ್ಯಾಟ್ರಿನ್ ಒಂದು ವರದಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಖ್ಯವಾಗಿ ಗರ್ಭಿಣಿಯರು ಮತ್ತು ಡಯಾಬಿಟಿಸ್ ಕಾಯಿಲೆಗಳಿದ್ದವರ ರೋಗಗಳ ವಿವರವನ್ನು ಈ ಮಲ, ಮೂತ್ರಾಲಯ ನೀಡಲಿದೆ. ಇದಕ್ಕೆ ಸ್ವಯಂ ಚಾಲಿತವಾಗಿ
ಜೋಡಿಸಿದ ಮೋಡೆಮ್‌ಗಳು ರೋಗಿಗಳ ಖಾಸಗಿ ವ್ಶೆದ್ಯರಿಗೆ ರೋಗಗಳ ವಿವರಗಳನ್ನು ಇ-ಮೇಲ್ ಮೂಲಕ ಸಂವಹನ ನಡೆಸುತ್ತವೆ. ವರ್ಸ್‌ಟೈಲ್ ಇಂಟರ್ಯಾಕ್ಟಿವ್ ಪಾನ್ (V.I.P) ಎಂದು ಕರೆಯಲ್ಪಡುವ ಈ ಕಕ್ಕಸ್ಸನ್ನು ಮುಂಬರುವ ಜಾಣ್ಮೆಯ ಕಕ್ಕಸುಗಳೆಂದು ಈಗಾಗಲೇ ಉಪಯೋಗಿಸಿದ ರೋಗಿಗಳ ಅಭಿಪ್ರಾಯವಾಗಿದೆ. ಮಕ್ಕಳು ಅಥವಾ ಅಂಗವಿಕಲರು ಈ ಕಕ್ಕಸ್ಸಿನ ಬಳಿಗೆ ಬಂದು ಮಾತನಾಡಿದರೆ ಸಾಕು ಅದು ಅವರಿಗೆ ಅನುಕೂಲವಾಗುವಂತೆ
ಸ್ವಯಂಚಾಲಿತವಾಗಿ ತನ್ನ ವಿನ್ಯಾಸವನ್ನು ಬದಲಿಸಿಕೊಳ್ಳಲಿದೆ. ಧ್ವನಿಗ್ರಹಣ (ಶಬ್ದ ಮಾಡಿದರೆ) ಮಾಡಿದರೆ ಕಕ್ಕಸ್ಸಿ- ನಿಂದ ಇದು ಕೇವಲ ಮೂತ್ರಾಲಯವಾಗಿ ಪರಿವರ್ತನೆಯಾಗುತ್ತದೆ. ಈ ಹೊಸ ಮಾದರಿಯ ಲ್ಯಾಟ್ರಿನ್  ವಿನ್ಯಾಸ- ಗೊಳಿಸಲು 5 ವರ್ಷ ಹಿಡಿದು 8000 ಡಾಲರ್ ಖರ್ಚಾಗಿದೆ. 2006ರಲ್ಲಿ ಈ ಮಾದರಿಯನ್ನು ಮಾರುಕಟ್ಟೆಗೆ ತರಲಾಗುಪುದೆಂದು ಚೆಸ್ಟರ್ ಮೂಲದ ಟ್ವೈಪೋರ್ಡ್‌ ಬಾತ್‌ರೂಮ್ ಕಂಪನಿ ಪ್ರಕಟಿಸಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...