Home / ಲೇಖನ / ವಿಜ್ಞಾನ / ಮಣ್ಣುತಿನ್ನುವುದು ಆರೋಗ್ಯಕ್ಕೆ ಹಿತಕರ

ಮಣ್ಣುತಿನ್ನುವುದು ಆರೋಗ್ಯಕ್ಕೆ ಹಿತಕರ

“ಸಾಮಾನ್ಯವಾಗಿ ತಪ್ಪು ಮಾಡಿದ್ದರೆ ಮಣ್ಣುತಿನ್ನು ಹೋಗು” ಎಂದು ಉಡಾಫೆಯಾಗಿ ಹೇಳುವ ಜನರಿದ್ಧಾರೆ. ಒಂದರ್ಥದಲ್ಲಿ ಇದು ತಿನ್ನಲು ಯೋಗ್ಯವಲ್ಲದ್ದು ಎಂದೇ ಭಾವನೆ. ಅಥವಾ ಮಣ್ಣನ್ನು ಯಾರು ತಿನ್ನಲಾರರೆಂದೇ ಜನರ ನಂಬಿಕೆ. ಆದರೆ ಇತತ್ತೀಚಿನ ವೈಜ್ಞಾನಿಕ ಪ್ರಯೋಗಗಳ ಪ್ರಕಾರ ಮಣ್ಣು ಒಂದು ಆರೋಗ್ಯವರ್ಧಕ ಪದಾರ್ಥವೆಂದು ದೃಢಪಟ್ಟದೆ. ಇದರಲ್ಲಿ ಅನೇಕ ಪೌಷ್ಟಿಕಾಂಶಗಳು ಇವೆ; ಎಂದು ಸಾಬೀತಾದ ಮಾತು. ಕೆನಡಾದ ಇಬ್ಬರು ವಿಜ್ಞಾನಿಗಳು ಉತ್ತರಕೆರೋಲಿನಾ, ಚೀನಾ ಮತ್ತು ಜಿಂಬಾಬ್ವೆಯಲ್ಲಿ ಕೈಕೊಂಡ ಅಧ್ಯಯನದಿಂದ ಕಂಡು ಕೊಂಡಿದ್ದಾರೆ. ಶುದ್ದವಾದ ಹಳೆಯ ಮಣ್ಣು ಉತ್ತಮ ವಸ್ತುವೆಂದು ಸಂಶೋಧಕರ ಲ್ಲೊಬ್ಬರಾದ ಸುಸಾನ್ ಔಪ್ರೀಟರ್ ತಿಳಿಸುತ್ತಾರೆ. ಅದರಲ್ಲೂ ಭೂಮಿಯೊಳಗಿನ ಮಣ್ಣು ಕಬ್ಬಿಣ ಮತ್ತು ಅಯೋಡಿನ್‌ಗಳಿಂದ ಸಮೃದ್ಧವಾಗಿದ್ದರಿಂದ ಮಕ್ಕಳು ಮತ್ತು ಗರ್ಭಿಣಿಯರು ಉಪಯೋಗಿಸುತ್ತಾರೆ. ಅದರಲ್ಲೂ ಗರ್ಭಿಣಿಯರಿಗೆ ಈ ಮಣ್ಣು ಉತ್ತವು ಪೋಷಕಾಂಶ
ವೆಂದೂ ಅವರು ಹೇಳುತ್ತಾರೆ. (ವರದಿ : ಡ್ಯಾನ್‌ಬರಿ ಅಮೇರಿಕಾ ಅ. 26-1997)

ರೋಮನ್ನರು ಮಣ್ಣು ಮತ್ತು ಆಡಿನ ರಕ್ತವನ್ನು ಸೇರಿಸಿ ಮಾತ್ರೆಗಳನ್ನು ಮಾಡಿ ಉಪಯೋಗಿಸುತ್ತಿದ್ದರು. ಕಳೆದ ಶತಮಾನದಲ್ಲಿ ಜರ್ಮನ್ನರು ಬ್ರೆಡ್ಡಿನೊಂದಿಗೆ ಬೆಣ್ಣೆಯ ಬದಲು ಮಣ್ಣನ್ನು ಉಪಯೋಗಿಸುತ್ತಿದ್ದರಂತೆ. ಆಫ್ರಿಕಾದಲ್ಲಿ ಅಜೀರ್ಣವಾದವರಿಗೆ ಈ ಮಣ್ಣನ್ನೇ ಔಷಧಿಯನ್ನಾಗಿ ತಿನ್ನಲು ಕೊಡುತ್ತಾರೆ. ಈ ಮಣ್ಣಿನ ಸೇವನೆಯಲ್ಲಿ  ಉಪಕಾರಿಯಾಗಬಲ್ಲ ಅಂಶಗಳ ಬಗ್ಗೆ ಕೂಲಂಕುಷವಾಗಿ ಮನಗಾಣಲು ಟೋರಾಂಟೋ ವಿ. ವಿ. ಯ ಪ್ರಯೋಗಾಲಯದ ವಿಶ್ಲೇಷಕಿ ಡಾ|| ಸೂಸನ್ ಮತ್ತು ಯಾಕ್೯ ವಿ. ವಿ.ಯ ಪ್ರೊ.ವಿಲಿಯಂ ಮ್ಯಾಹನಿ ಅವರು ಅನೇಕ ಪ್ರಯೋಗ ನಡೆಯಿಸಿ ಒಪ್ಪಿಕೊಂಡರು. ಚೀನಾದ ಹುನಾನ್ ಪ್ರಾಂತ್ಯದ ಹಳದಿ ಮಿಶ್ರಿತ ಮೆದು ಮಣ್ಣಿನಲ್ಲಿ ಕಬ್ಬಿಣ, ಕ್ಯಾಲ್ಪಿಯಂ, ಮೆಗ್ಲೀಶಿಯಂ, ಪೊಟ್ಯಾಶಿಯಂ ಮತ್ತು ಇತರ ಖನಿಜಗಳಿವೆ. ಜಿಂಬಾಬ್ವೆಯ ಕೆಲವು ಮಣ್ಣಿನಲ್ಲಿ ಲಿನೈಟ್ ಪೌಷ್ಠಿಕಾಂಶ ಇರುವುದಾಗಿ ವಿಜ್ಞಾನಿಗಳು ತಿಳಿಸುತ್ತಾರೆ. ಮಣ್ಣಿನಿಂದಲೇ ನಮ್ಮನ್ನು ರಕ್ಷಿಸುವ ಬೆಳೆಗಳು ಬೆಳೆಯುತ್ತವೆ. ನೀರು, ಖನಿಜಗಳು ದೊರೆಯುತ್ತವೆ. ಜೀವರಕ್ಷಕ ವಿಟ್ಯಾಮಿನ್‌ಗಳು ಈ ಮಣ್ಣಿನಲ್ಲಿ ಇರುವುದರಿಂದಲೇ ಜೀವೋದ್ಭವ- ವಾಗುತ್ತದೆ. ಆದರೆ ಮಣ್ಣು ಕೊಳಕು ಪದಾರ್ಥವೆಂದು ಮಣ್ಣಿನ ಬದಲಾಗಿ ಜೀವರಕ್ಷಕ ಬೆಳೆಗಳ ಆಹಾರವಿರುವಾಗ ಬಹುತೇಕ ಜನ ತಿನ್ನುವುದಿಲ್ಲ ಮತ್ತು ಉದರದೊಳಗಿನ ನರಮಲಡಗಳ ತಂತುಗಳಲ್ಲಿ ಮುಣ್ಣು ಲೇಪನಗೊಂಡು
ನರಮಂಡಲದ ಕ್ರಿಯಾಶೀಲತೆಗೆ ತೊಡಕಾಗಲೂ ಬಹುದೆಂದು ಕೆಲವರ ಅಭಿಪ್ರಾಯ, ಆದ್ದರಿಂದ ಬಹುತೇಕ ಜನ ಮಣ್ಣು ತಿನ್ನಲಾರರು. ಒಂದು ವೇಳೆ ತಿಂದರೆ ಕೆಟ್ಟದ್ದೇನಲ್ಲ ಅಪಾಯಕಾರಿಯಾಗಲಾರದು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...