Home / ಲೇಖನ / ವಿಜ್ಞಾನ / ಭವಿಷ್ಯದ ಕ್ರಾಂತಿಕಾರದ ಔಷಧಿಗಳು

ಭವಿಷ್ಯದ ಕ್ರಾಂತಿಕಾರದ ಔಷಧಿಗಳು

ಮಾನವನ ವಂಶವಾಹಿನಿಯಲ್ಲಿರುವ ಸುಮಾರು 3 ಬಿಲಿಯನ್ D.N.A. ಗಳಲ್ಲಿ ಶೇ.25 ರಷ್ಟು ವ್ಯಾಧಿಕಾರಕವೆ೦ದು ಗುರುತಿಸಲಾಗಿದೆ.. ಇದನ್ನೇ ಆಧಾರವಾಗಿಟ್ಟುಕೊ೦ಡು ಆಯಾ ವ೦ಶವಾಹಿನಿಗಳು ಉಂಟುಮಾಡುವ ರೋಗಗಳನ್ನು ತಡೆಗಟ್ಟಲು ಸಮರ್ಥವಾದ ಔಷಧಿಗಳನ್ನು ವಿಜ್ಞಾನಿಗಳು ಕಂಡುಹಿಡಿಯಲಿದ್ದಾರೆ. ಇದರಿ೦ದ ರೋಗಿಯ ‘ಬಯೋಕೆಮಿಸ್ಟ್ರಿ’ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಚುಚ್ಚುಮದ್ದಿನ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ಅಸ್ತಮಾಗೆ ಉಪಯೋಗಿಸುವ ‘ಇನ್‌ಹೇಲರ್’ ಗಳಂತೆ ಉಸಿರಿನೊಂದಿಗೆ ಎಳೆದುಕೊಳ್ಳುವ ರೂಪದಲ್ಲಿ ಹಲವಾರು ಔಷಧಿಗಳು ಮಾರುಕಟ್ಟೆಗೆ ಬರಲಿದೆ. ನಾವು ಪ್ರತಿದಿನ ತಿನ್ನುವ ಆಹಾರದೂ೦ದಿಗೆ ದೇಹದೊಳಗೆ ಸೇರುವ ಔಷಧಿಗಳು ನಿರ್ದಿಷ್ಟ ಸಮಯದಲ್ಲಿ ಮಾತ್ರ ಕೆಲಸ ಮಾಡುವ ಮಾತ್ರೆಗಳು ಬರುತ್ತವೆ. ಗಂಭೀರ ಆಹಾರ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸುಲಭವಾಗಿ ಉಪಯೋಗಿಸಲು ಮತ್ತು ಶೀಘ್ರ ಉಪಶಮನವನ್ನು ನೀಡುವ ಔಷಧಿಗಳು ಅಂಗಡಿಗಳಿಗೆ ಬರಲಿದೆ. ಮುಖ್ಯವಾಗಿ ಟಿ.ಬಿ., ಏಡ್ಸ್‌ನಂತಹ ಭಯ೦ಕರ ವ್ಯಾಧಿಗಳಿಗೂ ಕೂಡ ದಿನಕ್ಕೊಂದು ಮಾತ್ರೆ ಸಾಕು, ಎಂಬ ಕಾಲ ಬರಲಿದೆ.

ಕೆಲವು ಔಷಧಿಗಳು ಬಕ್ಕತಲೆಯ ಮೇಲೆ ಕೂದಲು ಬೆಳೆಸಲು ಉಪಯೋಗವಾದರೆ, ಕೂದಲು ಉದುರುವುದನ್ನು ತಡೆಗಟ್ಟುವಂಥಹ ಔಷಧಿಗಳನ್ನು ಚಿಕಾಗೋ ವಿಶ್ವವಿದ್ಯಾನಿಲಯದ ಸ೦ಶೋಧನಾವೃಂದವು ವಿಧಾನವನ್ನು (ಹೊಸ) ಕಂಡುಹಿಡಿದಿದೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯಕ್ಕೆ ಸೇರಿದ ಹೆಚ್.ಲೀ. ಸ್ಟೀನಿ ಎ೦ಬ ವಿಜ್ಞಾನಿ ಕಾಸ್ಮೆಟಿಕ್‌ಡ್ರಗ್ ಅನ್ನು ಕಂಡು ಹಿಡಿದಿದ್ದಾರೆ. ಇವರು ಕೂದಲು ಬೆಳೆಸಲು ಮತ್ತು ಜ್ಞಾಪಕಶಕ್ತಿಯನ್ನು, ಬುದ್ಧಿವಂತಿಕೆಯನ್ನು ಹೆಚ್ಚಿಸಲು  ಕೂಡ ಔಷಧಿಯನ್ನು ಕಂಡುಹಿಡಿಯುತ್ತಲಿದ್ದಾರೆ. ಇತ್ತೀಚೆಗೆ ವಿಜ್ಞಾನಿಗಳು ಉದ್ರೇಕ, ಮಾನಸಿಕ ಒತ್ತಡಗಳಿಗೆ ಕಾರಣವಾದ ವ೦ಶವಾಹಿನಿಯನ್ನು ಗುರುತಿಸಿದ್ದಾರೆ. ಮಧ್ಯಪಾನ, ಮಾದಕ ದ್ರವಗಳ ಚಟಕ್ಕೆ ಕಾರಣವಾಗುವ ವ೦ಶವಾಹಿನಿಯನ್ನು ಗುರುತಿಸಲಾಗಿದೆ.

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...