ಏಕೆ ಸಖೀ ಛೇಡಿಸಿ ಕೊಂಕು ನುಡಿಯುವೆ?

ಏಕೆ ಸಖೀ ಛೇಡಿಸಿ ಕೊಂಕು ನುಡಿಯುವೆ
ಗುಟ್ಟೆನ ವ್ಯವಹಾರ ಎಂದು ಅಣಕವಾಡುವೆ?
ಹರಿಯ ನೀನು ಮರೆಯಲ್ಲಿ ಕೊಂಡೆ ಎನ್ನುತ
ಏಕೆ ಸಖೀ ಮಾತಿನಲ್ಲಿ ನನ್ನ ಇರಿಯುವೆ?

ನಿನ್ನ ಮಾತು ಶುದ್ಧ ಸುಳ್ಳು ಕೇಳು ನಿಜವನು
ತಮಟೆ ಹೊಡೆದು ಸಾರುವೆ ದಿಟದ ಮಾತನು,
ಲೋಕ ತಿಳಿಯುವಂತೆಯೇ ಹರಿಯ ಕೊಂಡೆನೇ
ಸಲ್ಲುವಂಥ ಬೆಲೆಯ ಕೊಟ್ಟು ಇಟ್ಟುಕೊಂಡೆನೇ!

ಅರಮನೆಯನೆ ಕೊಟ್ಟೆನೇ ಹರಿಯ ತಣಿಸಲು
ರಾಜವಸ್ತ್ರ ಕಳಚಿದೆ ಅವನ ತಬ್ಬಲು
ಲಜ್ಜೆ ಮಾನ ಮನ್ನಣೆ ಎಲ್ಲ ಕೊಟ್ಟೆನೇ
ಗೆಜ್ಜೆ ಕಟ್ಟಿ ಕುಣಿಯಲು ಎಲ್ಲ ಬಿಟ್ಟೆನೇ!

ಸುಲಭದ ವ್ಯವಹಾರ ಎಂದು ಹೇಳಬೇಡವೇ
ಎಷ್ಟು ಸುರಿದರೂನು ತ್ರಾಸು ಏಳಲಿಲ್ಲವೇ
ಏನೆಲ್ಲ ಅಡಕಿದರೂ ಸಾಲದಾಯಿತೇ
ಕಡೆಗೆ ಹಮ್ಮನಿಟ್ಟೆ – ಆಗ ತೂಕ ತೂಗಿತೇ

ಹೌದೆ ಸಖೀ ಗಿರಿಧರನ ನಾನು ಕೊಂಡೆನು
ಒಂದೇ ತಾಟಿನಲ್ಲಿ ಅವನ ಜೊತೆಗೆ ಉಂಡೆನು.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆಡಂಗುರ-೧೩೮
Next post ಹೊಗೆಯುಗಳದ ಸಿಗರೇಟು

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys