ಹೇ ಸಖೀ ಬೃಂದಾವನ ಎಷ್ಟು ಚೆಂದವೇ!

ಹೇ ಸಖೀ ಬೃಂದಾವನ
ಎಷ್ಟು ಚೆಂದವೇ!
ತೆತ್ತು ಕೊಂಡಿತಲ್ಲ ಇದು
ಹರಿಗೆ ತನ್ನನೇ

ಕುಣಿವ ರೀತಿ ಹರಿವಳು ಇಲ್ಲಿ ಯಮುನೆಯು
ತುಳಸಿವನಕೆ ತರುವಳು ನಿತ್ಯ ನೀರನು
ಹರಿಯು ತುಳಿದ ನೆಲವ ಸೋಕಿ ಅಲೆಯ ಕೈಯಲಿ
ಹರಿನಾಮವ ಜಪಿಸುತಿಹಳು ಮಧುರ ದನಿಯಲಿ!

ಕಾಮಧೇನು ಹಿಂಡು ಹಿಂಡು ಅಲೆಯುವ ನೆಲ
ಹಾಲು ಮೊಸರ ಹಳ್ಳವಾಯ್ತು ನಂದಗೋಕುಲ
ಹಾಲಿಗಿಂತ ರುಚಿಯಾದ ಗಾನಸುಧೆಯನು
ಹರಿಸುವನೇ ಕ್ಟಷ್ಣ ತುಟಿಗೆ ಇಟ್ಟು ಕೊಳಲನು

ಗೋಪೀಜನ ಕೈ ಹೆಣೆದು ಸುತ್ತ ಕುಣಿಯುತ
ಮಧ್ಯ ನಿಂತು ಗಿರಿಧರ ನಗೆಯ ಬೀರುತ,
ಪಶು ಪಕ್ಷಿ ಪ್ರಕೃತಿಯೆಲ್ಲ ಲೋಕ ಮರೆಯುತ
ಸ್ವರ್ಗವಾಯ್ತು ಗೋಕುಲ ಇಲ್ಲೇ ಇರುತ

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆಡಂಗುರ-೧೩೭
Next post ನೋವೇ ಇಲ್ಲದ, ಸೂಜಿಯನ್ನು ಬಳಸುವ ಇಂಜೆಕ್ಷನ್

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…