Home / ಲೇಖನ / ವಿಜ್ಞಾನ / ನೋವೇ ಇಲ್ಲದ, ಸೂಜಿಯನ್ನು ಬಳಸುವ ಇಂಜೆಕ್ಷನ್

ನೋವೇ ಇಲ್ಲದ, ಸೂಜಿಯನ್ನು ಬಳಸುವ ಇಂಜೆಕ್ಷನ್

ಕೆಲವರಿಗಂತೂ ಇಂಜೆಕ್ಷನ್ ಅಂದರೆ ಹೆದರಿಕೆ. ಅದರಲ್ಲಿಯೂ ಕೆಲವು ವೈದ್ಯರು ನಿರ್ದಾಕ್ಷಿಣ್ಯವಾಗಿ ಸೂಜಿಯನ್ನು ಚುಚ್ಚುವಾಗಿನ ದೃಷ್ಯ ಭೀಕರವಾಗಿರುತ್ತದೆ. ಕೆಲವು ಸಲವಂತೂ ಇಂಜಕ್ಷನ್ ಮಾಡಿಸಿಕೊಂಡ ಸ್ಥಳದಲ್ಲಿ ಸೆಪ್ಪಿಕ್ ಆಗಿ ನರಳಬೇಕಾಗುತ್ತದೆ. ಒಟ್ಟಿನಲ್ಲಿ ಇಂಜಕ್ಷನ್ ಬದಲು ಮಾತ್ರೆಗಳೇ ಸಾಕು, ಎನ್ನುವ ಜನರೇ ಹೆಚ್ಚು. ಈ ಸ್ಥಿತಿಯನ್ಪು ನೋಡಿ ಅಧ್ಯಯನ ಮಾಡಿದ ಆಕ್ಸ್‌ಫರ್ಡ್ನ ಜೀವ ವಿಜ್ಞಾನಿಗಳು ಚುಚ್ಚುಮದ್ದನ್ನು ಪಿಚಕಾರಿ (Syringe) ಯಲ್ಲಿ ಸಿಂಚನಿಸಿ ಔಷಧಿಯನ್ನು ನೋವಿಲ್ಲದಂತೆ ದೇಹದೊಳಕ್ಕೆ ಕಳಿಸುವ ವಿಧಾನವನ್ನು ಕಂಡುಹಿಡಿದಿದ್ದಾರೆ.

ಹಿಂದಿನ ಕಾಲದಲ್ಲಿ ಡಬ್ಬಳದಂತಹ ಚುಚ್ಚುಸೂಜಿಗಳಿದ್ದವು. ಕೆಲವು ದಿನಗಳ ನಂತರ ಉಪಯೋಗಿಸಿ ಎಸೆಯುವ  ದರಿ ಅಕರ್ಷಕವಾಗಿತ್ತು ಆವರಣ ಕಿಂಚಿತ್ತಾದರೂ ನೋವಿನ ಭಯ ಇದ್ದೇ ಇತ್ಪು ಈ ಸಮಸ್ಯೆಗೆ ನೋವಿಲ್ಲದ, ಕ್ಷಣದಲ್ಲಿ ಔಷಧಿಯನ್ನು ಸಿಂಚನದ ಮೂಲಕ ದೇಹದೊಳಕ್ಕೆ ಕಳಿಸುವ ವಿಧಾನವು ಹೊಚ್ಚ ಹೊಸದು ಮತ್ತು  ಧುನಿಕವಾದದ್ದೆಂದು ರೋಗಿಗಳ ಅನುಭವವಾಗಿದೆ.

ಈ ನವೀನ ಪಿಚಕಾರಿಯನ್ನು ಹಿಸುಕಿದ ತಕ್ಷಣ ಅದರೊಳಗೆ ಸಂಕುಚಿತ ‘ಹೀಲಿಯಂ ಅನಿಲ’ ಶಬ್ದಕ್ಕಿಂತಲೂ ಎರಡುಪಟ್ಟು ಮುನ್ನುಗ್ಗಿ (SuperSonic) ಚಿಮ್ಮುತ್ತ ತನ್ನೆದುರಿಗಿನ ಔಷಧಿ (Powdered drug) ಯ ಕೋಣೆ ಹೊಕ್ಕು ಹೊರಗೆ ನೆಗೆಯುತ್ತದೆ. ಎಳ್ಳಷ್ಟು ನೋವಾಗದಂತೆ ಚರ್ಮವನ್ಪು ಬೇಧಿಸಿ ಒಳಸೇರುತ್ತದೆ. ಈ ಸಿಂಚನದೊಂದಿಗೆ ಔಷಧಿಕಣಗಳು ಸೇರಿರುವುದರಿಂದ ದೇಹದೊಳಗೆ ಕ್ರಿಯೆನಡೆಯಿಸಿ ರೋಗಿಗಳನ್ನು ಗುಣಮುಖರನ್ನಾಗಿಸುತ್ತದೆ.
ಈ ಅನಿಲಗಳು ಅತ್ಯಂತ ಹಗುರವಾಗಿದ್ದು ಕಿಂಚಿತ್ತು ನಿರ್ದಿಷ್ಟ ಸ್ಥಳಕ್ಕೆ ನೋವು ಆಗುವುದೇ ಇಲ್ಲ. ಈ ಪಿಚಕಾರಿಯಲ್ಲಿ ಬಳಸುವ ಔಷಧಿ ಪುಡಿ ರೂಪದಲ್ಲಿರುವ ಔಷಧಿಯ ಬೆಲೆಯೂ ಕೂಡ ಕಡಿಮೆಯಾಗುತ್ತೆದೆ. ಬಾಳಿಕೆ ಬರುತ್ತೆದೆಂದು ವಿಜ್ಞಾನಿಗಳು ಹೇಳುತ್ತಾರೆ.

ಮೊದಲಿನ ಸೂಜಿ ಪಿಚಕಾರಿ ಬಳಸಿದಾಗ ಕೆಲ ಅಂಶ ಗಾಳಿಯು ರಕ್ಲದೊಳಗೆ ಹೋಗಿ ಅಪಾಯ ಮಾಡುವ ಸಂದರ್ಭಗಳಿವೆ. ಆದರೆ ಈ “ಅನಿಲ ಸಿಂಚನ ಪಿಚಕಾರಿ” ಇಂಥಹ ಅಪಾಯವನ್ನು ಮಾಡಲಾರದು. ವೈದ್ಯಕೀಯ ವಿಜ್ಞಾನಕ್ಕೊಂದು ಇದು ಹೊಸ ಸೇರ್ಪಡೆ ಮತ್ತು ನೊವಿವಿಲ್ಲದೇ ರೋಗಿಗಳು ಗುಣಮುಖರಾಗುವುದು ಸ್ತುತ್ಯಾರ್ಹವಾಗಿದೆ.
****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...