Home / ಲೇಖನ / ವಿಜ್ಞಾನ / ನೋವೇ ಇಲ್ಲದ, ಸೂಜಿಯನ್ನು ಬಳಸುವ ಇಂಜೆಕ್ಷನ್

ನೋವೇ ಇಲ್ಲದ, ಸೂಜಿಯನ್ನು ಬಳಸುವ ಇಂಜೆಕ್ಷನ್

ಕೆಲವರಿಗಂತೂ ಇಂಜೆಕ್ಷನ್ ಅಂದರೆ ಹೆದರಿಕೆ. ಅದರಲ್ಲಿಯೂ ಕೆಲವು ವೈದ್ಯರು ನಿರ್ದಾಕ್ಷಿಣ್ಯವಾಗಿ ಸೂಜಿಯನ್ನು ಚುಚ್ಚುವಾಗಿನ ದೃಷ್ಯ ಭೀಕರವಾಗಿರುತ್ತದೆ. ಕೆಲವು ಸಲವಂತೂ ಇಂಜಕ್ಷನ್ ಮಾಡಿಸಿಕೊಂಡ ಸ್ಥಳದಲ್ಲಿ ಸೆಪ್ಪಿಕ್ ಆಗಿ ನರಳಬೇಕಾಗುತ್ತದೆ. ಒಟ್ಟಿನಲ್ಲಿ ಇಂಜಕ್ಷನ್ ಬದಲು ಮಾತ್ರೆಗಳೇ ಸಾಕು, ಎನ್ನುವ ಜನರೇ ಹೆಚ್ಚು. ಈ ಸ್ಥಿತಿಯನ್ಪು ನೋಡಿ ಅಧ್ಯಯನ ಮಾಡಿದ ಆಕ್ಸ್‌ಫರ್ಡ್ನ ಜೀವ ವಿಜ್ಞಾನಿಗಳು ಚುಚ್ಚುಮದ್ದನ್ನು ಪಿಚಕಾರಿ (Syringe) ಯಲ್ಲಿ ಸಿಂಚನಿಸಿ ಔಷಧಿಯನ್ನು ನೋವಿಲ್ಲದಂತೆ ದೇಹದೊಳಕ್ಕೆ ಕಳಿಸುವ ವಿಧಾನವನ್ನು ಕಂಡುಹಿಡಿದಿದ್ದಾರೆ.

ಹಿಂದಿನ ಕಾಲದಲ್ಲಿ ಡಬ್ಬಳದಂತಹ ಚುಚ್ಚುಸೂಜಿಗಳಿದ್ದವು. ಕೆಲವು ದಿನಗಳ ನಂತರ ಉಪಯೋಗಿಸಿ ಎಸೆಯುವ  ದರಿ ಅಕರ್ಷಕವಾಗಿತ್ತು ಆವರಣ ಕಿಂಚಿತ್ತಾದರೂ ನೋವಿನ ಭಯ ಇದ್ದೇ ಇತ್ಪು ಈ ಸಮಸ್ಯೆಗೆ ನೋವಿಲ್ಲದ, ಕ್ಷಣದಲ್ಲಿ ಔಷಧಿಯನ್ನು ಸಿಂಚನದ ಮೂಲಕ ದೇಹದೊಳಕ್ಕೆ ಕಳಿಸುವ ವಿಧಾನವು ಹೊಚ್ಚ ಹೊಸದು ಮತ್ತು  ಧುನಿಕವಾದದ್ದೆಂದು ರೋಗಿಗಳ ಅನುಭವವಾಗಿದೆ.

ಈ ನವೀನ ಪಿಚಕಾರಿಯನ್ನು ಹಿಸುಕಿದ ತಕ್ಷಣ ಅದರೊಳಗೆ ಸಂಕುಚಿತ ‘ಹೀಲಿಯಂ ಅನಿಲ’ ಶಬ್ದಕ್ಕಿಂತಲೂ ಎರಡುಪಟ್ಟು ಮುನ್ನುಗ್ಗಿ (SuperSonic) ಚಿಮ್ಮುತ್ತ ತನ್ನೆದುರಿಗಿನ ಔಷಧಿ (Powdered drug) ಯ ಕೋಣೆ ಹೊಕ್ಕು ಹೊರಗೆ ನೆಗೆಯುತ್ತದೆ. ಎಳ್ಳಷ್ಟು ನೋವಾಗದಂತೆ ಚರ್ಮವನ್ಪು ಬೇಧಿಸಿ ಒಳಸೇರುತ್ತದೆ. ಈ ಸಿಂಚನದೊಂದಿಗೆ ಔಷಧಿಕಣಗಳು ಸೇರಿರುವುದರಿಂದ ದೇಹದೊಳಗೆ ಕ್ರಿಯೆನಡೆಯಿಸಿ ರೋಗಿಗಳನ್ನು ಗುಣಮುಖರನ್ನಾಗಿಸುತ್ತದೆ.
ಈ ಅನಿಲಗಳು ಅತ್ಯಂತ ಹಗುರವಾಗಿದ್ದು ಕಿಂಚಿತ್ತು ನಿರ್ದಿಷ್ಟ ಸ್ಥಳಕ್ಕೆ ನೋವು ಆಗುವುದೇ ಇಲ್ಲ. ಈ ಪಿಚಕಾರಿಯಲ್ಲಿ ಬಳಸುವ ಔಷಧಿ ಪುಡಿ ರೂಪದಲ್ಲಿರುವ ಔಷಧಿಯ ಬೆಲೆಯೂ ಕೂಡ ಕಡಿಮೆಯಾಗುತ್ತೆದೆ. ಬಾಳಿಕೆ ಬರುತ್ತೆದೆಂದು ವಿಜ್ಞಾನಿಗಳು ಹೇಳುತ್ತಾರೆ.

ಮೊದಲಿನ ಸೂಜಿ ಪಿಚಕಾರಿ ಬಳಸಿದಾಗ ಕೆಲ ಅಂಶ ಗಾಳಿಯು ರಕ್ಲದೊಳಗೆ ಹೋಗಿ ಅಪಾಯ ಮಾಡುವ ಸಂದರ್ಭಗಳಿವೆ. ಆದರೆ ಈ “ಅನಿಲ ಸಿಂಚನ ಪಿಚಕಾರಿ” ಇಂಥಹ ಅಪಾಯವನ್ನು ಮಾಡಲಾರದು. ವೈದ್ಯಕೀಯ ವಿಜ್ಞಾನಕ್ಕೊಂದು ಇದು ಹೊಸ ಸೇರ್ಪಡೆ ಮತ್ತು ನೊವಿವಿಲ್ಲದೇ ರೋಗಿಗಳು ಗುಣಮುಖರಾಗುವುದು ಸ್ತುತ್ಯಾರ್ಹವಾಗಿದೆ.
****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...