ಗಿರಿಧರ ಪ್ರಿಯತಮನ

ಗಿರಿಧರ ಪ್ರಿಯತಮನ – ಶ್ರೀ
ಪಾದಕೆ ಸಲ್ಲುವನೇ
ಅವನೊಲವನು ಗೆಲ್ಲುವೆನೇ!

ಚೆಲುವಿನ ಚಂದ್ರಮ ಇನಿಯ-ನಾ
ಬೆರೆವೆನೆ ಆವನೊಳು ರಾತ್ರಿ;
ನನ್ನನೆ ಮೀರಿ ಕ್ಟಷನ ಸೇರಿ
ಮರೆವೆನೆ ಗಿರಿವನ ಧಾತ್ರಿ.

ಕ್ಟಷ್ಣನು ಕೊಟ್ಟುದ ತಿನುವೆ-ಸ್ವಾಮಿ
ಇತ್ತುದ ನಲಿಯುತ ಉಡುವೆ;
ಇಟ್ಟ ಜಾಗದಲಿ ಇರುವೆ, ಅವ-
ನಿಷ್ಟಾರ್ಥಕೆ ನಾ ಮಡಿವೆ.

ದಾಸಿ ನಾನು ಕನ್ನಯ್ಯಗೆ,
ಬೇಕಿದ್ದರೆ ಒಂದು ಕಾಸಿಗೆ
ಮಾರಲಿ ನನ್ನನು ಸಹಿಸುವೆ, ಹಿತ-
ವಾಗಲಿ ಸ್ವಾಮಿಯ ಮನಸಿಗೆ.
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆಡಂಗುರ – ೧೨೩
Next post ಸೂರ್ಯ ಶಿಥಿಲಗೊಳ್ಳಲು ಬೇಕು 5000 ಮಿಲಿಯನ್ ವರ್ಷಗಳು (ಬೃಹದ್ ಬೆಂಕಿಯೆ ಉಂಡೆ)

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…