ಗಿರಿಧರ ಪ್ರಿಯತಮನ – ಶ್ರೀ
ಪಾದಕೆ ಸಲ್ಲುವನೇ
ಅವನೊಲವನು ಗೆಲ್ಲುವೆನೇ!
ಚೆಲುವಿನ ಚಂದ್ರಮ ಇನಿಯ-ನಾ
ಬೆರೆವೆನೆ ಆವನೊಳು ರಾತ್ರಿ;
ನನ್ನನೆ ಮೀರಿ ಕ್ಟಷನ ಸೇರಿ
ಮರೆವೆನೆ ಗಿರಿವನ ಧಾತ್ರಿ.
ಕ್ಟಷ್ಣನು ಕೊಟ್ಟುದ ತಿನುವೆ-ಸ್ವಾಮಿ
ಇತ್ತುದ ನಲಿಯುತ ಉಡುವೆ;
ಇಟ್ಟ ಜಾಗದಲಿ ಇರುವೆ, ಅವ-
ನಿಷ್ಟಾರ್ಥಕೆ ನಾ ಮಡಿವೆ.
ದಾಸಿ ನಾನು ಕನ್ನಯ್ಯಗೆ,
ಬೇಕಿದ್ದರೆ ಒಂದು ಕಾಸಿಗೆ
ಮಾರಲಿ ನನ್ನನು ಸಹಿಸುವೆ, ಹಿತ-
ವಾಗಲಿ ಸ್ವಾಮಿಯ ಮನಸಿಗೆ.
***
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.