Home / ಲೇಖನ / ವಿಜ್ಞಾನ / ಸೂರ್ಯ ಶಿಥಿಲಗೊಳ್ಳಲು ಬೇಕು 5000 ಮಿಲಿಯನ್ ವರ್ಷಗಳು (ಬೃಹದ್ ಬೆಂಕಿಯೆ ಉಂಡೆ)

ಸೂರ್ಯ ಶಿಥಿಲಗೊಳ್ಳಲು ಬೇಕು 5000 ಮಿಲಿಯನ್ ವರ್ಷಗಳು (ಬೃಹದ್ ಬೆಂಕಿಯೆ ಉಂಡೆ)

– ಸೂರ್ಯ ಸೃಷ್ಟಿಯಾಗುವುದಕ್ಕೂ ಮುಂಚೆ ಜಲಜನಕ, ಹಿಲಿಯಂ, ಮೋಡಗಳು, ಮತ್ತು ಧೂಳುಗಳಿದ್ವವು. ಗುರುತ್ವಾಕರ್ಷಣೆಯೆ ಫಲವಾಗಿ ಇವೆಲ್ಲ ಕುಗ್ಗಿಉಂಡೆಯಾಯಿತು. ಈ ಕ್ರಿಯೆ ನಡೆಡು ಕೇವಲ 5 ಸಾವಿರ ಬಿಲಿಯನ್ ವರ್ಷಗಳಾದವು !! ವಾಸ್ತವವಾಗಿ ಸೂರ್ಯನಲ್ಲಿ ಮೂರು ಭಾಗ, ಜಲಜನಕ, ಒಂದು ಭಾಗ ಹಿಲಿಯಂ ಇತರ ಅನಿಲ- ಗಳು ಕೂಡಿದ್ದು ಪ್ರಜ್ವಲಿಸುತ್ತವೆ. ಇದರ ಗರ್ಭದಲ್ಲಿ ಜಲಜನಕ ಪರಮಾಣುಗಳು ಜಜ್ಜಿ ಹಿಲಿಯಂ ಪರಮಾಣುಗಳಾಗು- ತ್ತವೆ. ಇದರ ಪರಿಣಾಮದಿಂದಾಗಿ ಅಗಾಧ ಪ್ರಮಾಣದ ಶಾಖ ಮತ್ತು ಬೆಳಕು ಬಿಡುಗಡೆಯಾಗುವುದು. ಈ ಪ್ರಮಾಣಪು 300 ಬಿಲಿಯನ್ ಟ್ರಿಲಿಯನ್ ಎಂದರೆ. 300,0000000000000000000000000 ವ್ಯಾಟ್ ಶಕ್ತಿಬಿಡುಗಡೆ- ಯಾಗುಪುದು (9,000 ಡಿಗ್ರಿಗಿಂತಲೂ ಹೆಚ್ಚು) ಈ ಶಕ್ತಿಯನ್ನು ಆನುಭವಿಸುವುದರಿಂದಲೇ ನಮ್ಮ ಜೈವಿಕಗೋಳ
ಉಳಿದಿದೆ. ಕ್ಷೀರ ಪಥದಲ್ಲಿ ಗುರುತಿಸಲ್ಪಡುವ ಸೂರ್ಯ 9 ಗ್ರಹಗಳ ಕುಟುಂಬವನ್ನು ಹೊಂದಿದೆ. ಅದರಲ್ಲಿ ನಾವು ನೆಲೆನಿಂತ ಭೂಮಿ (ಪೃಥ್ವಿ) ಸೂರ್ಯನಿಂದ 150 ಮಿಲಿಯನ್ ಕಿ.ಮಿ.ಗಳ ದೂರದಲ್ಲಿದೆ. (93,00,000 ಮೈಲು- ಗಳಷ್ಟು ದೂರ) ಸೂರ್ಯನ ಮೇಲ್ಮೈ ಮೇಲೆ 5,500 ಡಿಗ್ರಿC  ಮತ್ತು ಗರ್ಭದಲ್ಲಿ 1,50,00,000 ಡಿಗ್ರಿC ಗಳ ತಾಪವಿದೆ. ಇದರ ಗರ್ಭದಲ್ಲಿ ಜಲಜನಕ ಪರಮಾಣು ಜಜ್ಜಿ ಹಿಲಿಯಂ ಪರಮಾಣುಗಳಾಗುತ್ತವೆ. ಈ ಕ್ರಿಯೆಯಿಂದ ಆಗಾಧ ಪ್ರಮಾಣದ ಶಾಖ ಮತ್ತು ಬೆಳಕು ಬಿಡುಗಡೆಯಾಗುತ್ತದೆ. ಈ ರೀತಿ ಬಿಡುಗಡೆಯಾಗುವ ಶಕ್ತಿಯು ಬೆಳಕಿನ ರೇಡಿಯೋ, ಶಾಖದಿಂದ ಕೂಡಿದ ವಿದ್ಯುತ್ ಕಾಂತೀಯ ತರಂಗಗಳ ರೂಪದಲ್ಲಿಸೂರ್ಯನ ಮೇಲ್ಮೈ ಕಡೆಗೆ ಹರಿಯು- ತ್ತದೆ. ಆಗಾಗ ಆಗಾಧ ಶಕ್ತಿಯನ್ನು ಪ್ರಜ್ವಲಿಸುವ ಜಲಜನಕಪು ಬಿಡುಗಡೆಯಾಗಿ ಆದು ಆಕಾಶದಲ್ಲಿ 55,000 ಕಿ.ಮೀ. ಎತ್ತರದವರೆಗೆ ಪ್ರವಹಿಸುತ್ತದೆ. ಇಂತಹವುಗಳಿಗೆ “ಜ್ವಾಲೋನ್ನತಿ” ಗಳೆಂದು ಕರೆಯಲಾಗುತ್ತದೆ. ಸೂರ್ಯನಲ್ಲಿ ಬದಲಾವಣೆಯಾಗುವ ಕಾಂತೀಯ ಕ್ಷೇತ್ರವು ಅದರ ಮೇಲ್ಮೈ ಮೇಲೆ ಕಪ್ಪುಕಲೆಗಳಾಗಲು ಕಾರಣವಾಗಿದೆ. ಇವುಗಳಿಗೆ ‘ಸೌರಕಲೆ’ಗಳೆಂದು ಕರೆಯುತ್ತಾರೆ.

ಇಂತಹ ಸೂರ್ಯ ಒಂದು ಸೆಕೆಂಡು ಬಿಕ್ಕಳಿಸಿದರೆ ಆದರ ಪರಿಣಾಮ ವಿಶ್ವನಾಶದವರೆಗೆ ಹೋಗುತ್ತದೆ. 200 ಮಿಲಿಯನ್ ಪರಮಾಣು ಬಾಂಬುಗಳಂಥಹ ಜ್ವಾಲಾಶಕ್ತಿ ಸ್ಫೋಟಿಸುತ್ತಾ ವ್ಯಾಪಿಸುತ್ತದೆ. ಈ ಸ್ಫೋಟಗೊಂಡ ಜ್ವಾಲೆಗಳು ಸೌರಮಾರುತಗಳ ಮೂಲಕ ನಮ್ಮ ಪೃಥ್ವಿಯತ್ತ ಬಂದರೆ ಜಗತ್ತಿನಲ್ಲಿಯ ವಿದ್ಯುತ್ ಮತ್ತು ಕಾಂತಾಗೋಳ ತಲ್ಲಣಿನುತ್ತದೆ. ದೂರಕ್ಕೆ ಚಾಚುವ ಇದರ ಕೆನ್ನಾಲಿಗೆಗಳು ಭಯಭೀಕರ ಪರಿಣಾಮವನ್ನುಂಟು  ಈ ಬಿಕ್ಕಳಿಕೆಯೆ ಶಕ್ತಿ ಪ್ರಮಾಣ ಸೂರ್ಯನ ಶಕ್ತಿಯ ಶೇ. 2 ರಷ್ಟು ಮಾತ್ರ. ಇಂತಹ ಸಂವಹನ ಮಿಶ್ರಣ ಕ್ರಿಯೆ (Convention Mixing) ಅಪರೂಪವಾಗಿ ನಡೆಯುತ್ತದೆ. ಈ ಶೇ. 2 ರಷ್ಟರ ಪ್ರಮಾಣದ ಪರಿಣಾಮಗಳಿಂದಲೇ ನಮ್ಮ ಜೈವಿಕ ಪ್ರಪಂಚವು ಸಂಪೂರ್ಣ ನಾಶವಾಗುಪುದಲ್ಲದೇ ಭೂಗೋಳದ ದ್ರವಗಳು ವ್ಯತಿರಿಕ್ತಗೊಳ್ಳುತ್ತವೆ. ಸೌರಮಾರುತಗಳಿಂದ ಭೂಮಿಯ ಮೇಲೆ ರಕ್ಷಣೆ ಅಸಾಧ್ಯವಾಗುತ್ತದೆ.

ಹೊಳಯುವ ಸೂರ್ಯ : ಸೂರ್ಯ ಎಂದರೆ ಪ್ರತಿ ಸೆಕೆಂಡಿಗೆ ಸಾವಿರಾರು ಪರಮಾಣು ಬಾಂಬುಗಳ ಸಿಡಿತದಿಂದ ರೂಪಗೊಂಡ ಉಂಡೆ. ಪ್ರತಿ ಸೆಕೆಂಡಿನಲ್ಲಿಯೂ ಇದು ನಡೆಯುವ ಕ್ರಿಯಾಗಿರುತ್ತದೆ. ಈ ಸಂಘರ್ಷದ ಸಂದರ್ಭದಲ್ಲಿ ಉಂಟಾಗುವ ಬೆಳಕೇ ಪ್ರಕಾಶವಾಗಿ ಹೊರಹೊಮ್ಮಿ ಸೂರ್ಯ ಮತ್ತು ಇತರ ನಕ್ಷಶ್ರಗಳು ಹೊಳೆಯುವಂತೆ ಮಾಡಿದೆ. ಇದರೊಳಗಿನ ಪದಾರ್ಥಗಳು ಸದಾಕಾಲ ಶಕ್ತಿಗೆ ಪರಿವರ್ತಿಸಿದರೆ ಆ ಶಕ್ತಿಮಿಲಿಗಟ್ಟಲೆ ಕಲ್ಲುಕಬ್ಬಿಣಗಳನ್ನು ಸುಟ್ಟು ಬೂದಿಮಾಡಬಲ್ಲದು. ಆದಕ್ಕಾಗಿ ಸೂರ್ಯನೊಂಡು ಅತ್ಯದ್ಬುತ ಬೆಂಕಿಯ ಚಂಡು, ಶಾಖದ ಉಂಡೆ.
***************

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...