Home / ಲೇಖನ / ಇತರೆ / ಆತ್ಮಸ್ಥೈರ್ಯ

ಆತ್ಮಸ್ಥೈರ್ಯ

ಕಾಲದ ಸಾಗರದಲ್ಲಿ ನಮ್ಮ ಜೀವನದ ಡೋಣಿ ತೇಲುತ್ತಾ ಮುಂದೆ ಸಾಗುವಾಗ ಕಷ್ಟ ಪರಂಪರೆ ಮಾನವನಿಗೆ ಬೆನ್ನಟ್ಟಿ ಬರುತ್ತವೆ. ಹೆಜ್ಜೆ ಹೆಜ್ಜೆಗೂ ಕಷ್ಟ-ದುಃಖಗಳು ನಮ್ಮನ್ನು ಕಾಡುವಾಗ ಎದೆಗುಂದದೆ ಅವುಗಳನ್ನು ಎದುರಿಸುವ ಆತ್ಮವಿಶ್ವಾಸ, ಆತ್ಮಸ್ಥೆರ್ಯ ನಾವು ತುಂಬಿಕೊಳ್ಳಬೇಕಾಗುತ್ತದೆ.

ಡಿ. ವಿ. ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಬಹಳ ಸುಂದರವಾಗಿ ಅರಹುತ್ತಾರೆ.

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ-ದುರ್ಬಲರಿಗೆ
ಎಲ್ಲರೊಳಗೊಂದಾಗು-ಮಂಕುತಿಮ್ಮ

ಬೆಟ್ಟದಡಿಯಲ್ಲಿರುವ ಹುಲ್ಲಿನಂತಿದ್ದರೆ ಯಾರಾದರೂ ಮೇಲಿಂದ ಬಿದ್ದರೆ ನೀನು ಅವರನ್ನು ಸುಖವಾಗಿಡಲು ಸಾಧ್ಯ. ಜೊತೆಗೆ ಆ ಹುಲ್ಲನ್ನು ಹಸು-ಕರುಗಳೂ ಕೂಡ ತಿಂದು ತೃಪ್ತಿ ಪಡೆಯುವಂತಾಗಲಿ. ನಿನ್ನ ಮನೆಗೆ ನೀನು ಸುಗಂಧವನ್ನು ಬೀರುವ ಮಲ್ಲಿಗೆಯ ಹೂವಾಗು. ಎಲ್ಲರೂ ನಿನ್ನನ್ನು ನೋಡುವಂತಿರಲಿ. ಕಷ್ಟಗಳ ಮಳೆಯನ್ನು ವಿಧಿ ನಿನ್ನಮೇಲೆ ಸುರಿಸಿದಾಗ ದೃಢಚಿತ್ತನಾಗಿ ನಿಲ್ಲು, ಆ ಕಷ್ಟಗಳು ನಿನ್ನನ್ನು ಏನೂ ಮಾಡಲಾರವು. ಜಗತ್ತಿನಲ್ಲಿರುವ ದೇವರು ಮತ್ತು ದುರ್ಬಲರ ಪಾಲಿಗೆ ಸಿಹಿಯನ್ನು ಕೊಡುವ ಬೆಲ್ಲ ಮತ್ತು ಸಕ್ಕರೆಯಾಗು. ಒಟ್ಟಿನಲ್ಲಿ ಸಮರಸದಿಂದ ಬಾಳು ಎಂಬ ಕವಿಯ ಅನುಭವದ ನುಡಿ ನಮ್ಮಲ್ಲಿ ಧೈರ್ಯವನ್ನು ತುಂಬುತ್ತದೆ. ಇಂಥ ಕಷ್ಟಗಳು ಬುರುವುದಕ್ಕೆ ಮುಖ್ಯಾವಾಗಿ ನಾವೂ ಕಾರಣವಾಗುತ್ತೇವೆ. ನಿತ್ಯ ಬಾಳಿನಲ್ಲಿ ನಮಗೆ ಲಭಿಸಿದಕ್ಕಿಂತಲೂ ಜಾಸ್ತಿಯನ್ನು ಅಪೇಕ್ಷಿಸುವುದೇ ಇದಕ್ಕೆಲ್ಲ ಕಾರಣ. ತೃಪ್ತಿ, ಸಮಾಧಾನ, ನಮ್ಮ ಅಂತಃರಂಗದಲ್ಲಿ ಗೂಡು ಕಟ್ಟಬೇಕು.

‘ಕಷ್ಟ ಬಂದಾಗ ಕಲ್ಲಿನಂತಾಗು, ಸುಖ ಬಂದಾಗ ಬಂದಾಗ ಹೂವಿನಂತೆ ಮೃದುವಾಗು. ಶರಣರ ಮಾತೊಂದು ಬರುತ್ತದೆ. ಬಾಳಿನಲ್ಲಿ ಬರುವ ಕಷ್ಟಗಳನ್ನೆಲ್ಲ ಅನುಭವವನ್ನಾಗಿ ಅಳವಡಿಸಿಕೊಂಡು ಬಾಳಿಗೆ ಒಂದು ನಿರ್ದಿಷ್ಟ ದಾರಿ ರೂಪಿಸಿಕೊಂಡು ಅದನ್ನು ತಲುಪುವಂತೆ ಸಾಗಬೇಕು. ಎಂದು ಮ್ಯಾಕ್ಸ್‌ಮಲ್ಲರ್‌ರು ಹೇಳುತ್ತಾರೆ.

‘ಆತ್ಮಸ್ಥೈರ್ಯ’ ಇಲ್ಲದಿದ್ದರೆ ಸಾರ್ಥಕ ಬದುಕಿಲ್ಲ. ಅಕ್ಕಸಾಲಿಗನು ಬಂಗಾರಕ್ಕೆ ಬೆಂಕಿಯಲ್ಲಿ ಹಾಕಿ ಪರೀಕ್ಷಿಸುವ ಹಾಗೆ ಕಬ್ಬಿಣಕ್ಕೆ ಒರೆಗೆ ಹಚ್ಚಿ ನೋಡುವನೆ! ಹಾಗೇ ಉತ್ತಮರಾಗಿ, ಸಚ್ಚಾರಿತ್ರ್ಯವುಳ್ಳವರಾಗಿ ಬಾಳುವಾಗ ನಮ್ಮನ್ನು ಪರೀಕ್ಷೆಗೆ ಒಡ್ಡುವಂತೆ ದೇವರು ನಮಗೆ ಕಷ್ಟಗಳ ನೀಡಿ ಪರೀಕ್ಷಿಸುತ್ತಾನೆ. ಅಂತಹ ಸಮಯದಲ್ಲಿ ಅವುಗಳನ್ನು ಎದುರಿಸುವ ದಿಟ್ಟತನವಿಲ್ಲದಿದ್ದರೆ ನಾವು ಹೇಡಿಗಳಾಗಿಯೇ ಜೀವಿಸಬೇಕಾಗುತ್ತದೆ. ಯುದ್ಧಕ್ಕೆ ಹೋದಾಗ ವೈರಿಯ ತೀವ್ರ ಆಕ್ರಮಣಕ್ಕೆ ಭಯದಿಂದ ಬೆನ್ನು ಕೊಟ್ಟು ಹಿಂದಕ್ಕೋಡಿದರೆ ನಮ್ಮ ಯೋಧರೇ ನಮ್ಮ ಮೇಲೆ ಪ್ರಹಾರ ಮಾಡುವಂತೆ ಕಷ್ಟಗಳಿಗೆ ಹೆದರಿದರೆ ನಮ್ಮೊಳಗಿನ ಆತ್ಮವಿಶ್ವಾಸ ಇಲ್ಲವಾಗಿ ಸಾವಿನ ಅಂಚಿಗೆ ನಾವು ತಲುಪಬೇಕಾಗುತ್ತದೆ.

ನಮ್ಮ ಸಂತರು ಕಷ್ಟ-ಸುಖಗಳಿಗೆ ಸ್ಪಂದಿಸದೇ ಸಮನಾಗಿ ಸ್ವೀಕರಿಸಬೇಕು. ನಾವು ಟೀವಿಯಂತೆ ಬಾಳಬೇಕೆನ್ನುತ್ತಾರೆ. ಟೀವಿಯು ಪರದೆಯ ಮೇಲೆ ನಡೆಯುವ ಎಲ್ಲ ಘಟನೆಗಳಿಗೂ ಟೀವಿ ಮುಗ್ಧವಾಗಿ ಸ್ವೀಕರಿಸುವಂತೆ ಬಾಳನ್ನ ಹಾಗೇ ನಾವು ಸಹಜವಾಗಿ ಸ್ವೀಕರಿಸಿದಾಗ ಅದೊಂದು ಸಾರ್ಥಕ ಬದುಕಾಗುತ್ತದೆ. ಅಂದಹಾಗೆ ‘ಹಾಸಿಗೆ ಇದ್ದಷ್ಟೇ ಕಾಲು ಚಾಚು’ ಎಂದು ಗಾದೆಯೊಂದು ದಕ್ಕಿದೆ ಪ್ರಸಾದವೆಂದು ಖುಷಿಯಿಂದ ಇರಬೇಕೆಂದು ಹೇಳಿದರೆ ಗೌತಮ ಬುದ್ಧರು ‘ಆಸೆಯೇ ದುಃಖಕ್ಕೆ ಕಾರಣ’ ಎಂದು ಹೇಳಿದರು. ಆಸೆ-ಬಯಕೆ ಸ್ವಾರ್ಥಗಳು ದೂರವಿಟ್ಟು ಬಾಳಿದಾಗ ಮಾತ್ರ ನಿಜವಾದ ಜೀವನದ ಗುರಿ ಸಾಧಿಸಲು ಸಾಧ್ಯ.

ರಂಗನಾಥ ದಿವಾಕರರು ಒಂದು ಕಡೆ ಸಮಸ್ಯೆಗಳಿಂದಲೇ ಜೀವನ, ಸಮಸ್ಯೆಗಳಿಂದಲೇ ಸಂಸಾರ, ಸಮಸ್ಯೆಗಳೇ ಎಲ್ಲ ಚಟುವಟಿಕೆಗಳಿಗೆ ಕಾರಣ ಎನ್ನುತ್ತಾರೆ. ಮಹಾಭಾರತದಲ್ಲಿ ಕುಂತಿ ತನ್ನ ಸೋದರಳಿಯ ಶ್ರೀ ಕೃಷ್ಣನಿಗೆ ವರದ ರೂಪದಲ್ಲಿ ಕಷ್ಟ ಬೇಡುತ್ತಾಳೆ. ಅಂದಹಾಗೇ ಕಷ್ಟಗಳೇ ನಮ್ಮ ಯಶಸ್ಸಿನ ಬದುಕಿನ ಮೆಟ್ಟಲುಗಳು, ಅದಕ್ಕೆ ದ.ರಾ. ಬೇಂದ್ರೆಯವರು ಒಂದು ಕಡೆ `ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ’ ಎಂದರು. ಕಷ್ಟ-ಸುಖಗಳ ಸಮ್ಮಿಶ್ರಣದಿಂದ ಬದುಕು ಸಿಹಿ ಜೇನಾಗಲು ಸಾಧ್ಯ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...