Home / ಲೇಖನ / ಇತರೆ / ಬದುಕೆಂದರೆ ಇಷ್ಟೆಯೇ?

ಬದುಕೆಂದರೆ ಇಷ್ಟೆಯೇ?

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,

ಅವನು ಇಷ್ಟು ದಿನ ಬದುಕಿದ್ದೇ ಸುಳ್ಳೆಂಬಂತೆ ಸತ್ತು ಮಲಗಿದ್ದಾನೆ. ಕೊನೆಯದಾಗಿ ಅವನ ನಿರ್ಜೀವ ದೇಹವನ್ನು ನೋಡಲೆಂದೇ ಈ ಅವನ ಗೆಳೆಯ ಬಂದಿದ್ದಾನೆ. ಎರಡು ದೇಹ ಒಂದು ಜೀವವೆಂಬಂತಿದ್ದ ಈ ಗೆಳೆಯರಲ್ಲಿ ಒಬ್ಬ ಪಿಯುಸಿ ಪರೀಕ್ಷೆಯಲ್ಲಿ ಫೇಲಾಗಿದ್ದೇ ನೆವವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೋಡಲು ಬಂದವನೂ ನಪಾಸಾಗಿದ್ದಾನೆ. ಸತ್ತ ಗೆಳೆಯನನ್ನು ನೋಡುತ್ತಾ ಇವನು ಯೋಚಿಸುತ್ತಿದ್ದಾನೆ. ಈಗ ಬದುಕಿನಲ್ಲಿ ಎಲ್ಲಾ ಮುಗಿದುಹೋಯಿತೆಂದು ಆತ್ಮಹತ್ಯೆ ಮಾಡಿಕೊಳ್ಳಬೇಕೇ?

ಒಮ್ಮೆ ಬದುಕಿನಲ್ಲಿ ಸೋತರೆ ಅದೇ ಕಟ್ಟಕಡೆಯ ಸೋಲೆ? ಮುಂದೆ ಗೆಲುವೇ ಇಲ್ಲವೇ ? ಅಥವಾ ಇದನ್ನು ಹೊರತು ಪಡಿಸಿ ಬೇರೆ ಬದುಕೇ ಇಲ್ಲವೇ ? ಬದುಕೆಂದರೆ ಇಷ್ಟೆಯೇ? ಒಂದು ಯಕಶ್ಚಿತ್ ಪರೀಕ್ಷೆಯಲ್ಲಿ ಫೇಲಾದೊಡನೆ ಬದುಕೇ ಮುಗಿದಂತೆಯೇ? ಬದುಕಿನಲ್ಲಿ ಒಮ್ಮೆ ಒಂದು ಬಾಗಿಲು ಮುಚ್ಚಿತೆಂದಾದರೆ ಅದೆಂದೂ ತೆರೆಯುವುದೇ ಇಲ್ಲವೇ ? ಅಥವಾ ಬದುಕಿಗೆ ಅದೊಂದೇ ಬಾಗಿಲೆ ? ಕಣ್ಣು ತೆರೆದು ನೋಡಿದರೆ ಸುತ್ತಲೂ ಅದೆಷ್ಟು ಅವಕಾಶಗಳಿವೆ. ವಿಭಿನ್ನ ಸಾಧ್ಯತೆಗಳಿವೆ. ಯಾಕಿಂಥಾ ಮೌಢ್ಯ ನನ್ನ ಗೆಳೆಯನನ್ನು ಆವರಿಸಿತು?

ಕಳೆದ ತಿಂಗಳಷ್ಟೇ ಮನೆಯವರು ಬೈಕ್ ಕೊಡಿಸಲಿಲ್ಲವೆಂದು ಸಹಪಾಠಿಯೊಬ್ಬ ವಿಷ ಕುಡಿದು ಸತ್ತದ್ದು ನೆನಪಾಯ್ತು. ನೀನು ಬದುಕಿದ್ದರೆ ಇಂದಲ್ಲ ನಾಳೆ ಬೈಕ್ ಕೊಳ್ಳಬಹುದಿತ್ತು. ನಿಜ ಬದುಕು ಎಷ್ಟೊಂದು ದೊಡ್ಡದಿದೆ. ಸಾಧಿಸುವ ಛಲವಿದ್ದರೆ ಇಂದಲ್ಲ ನಾಳೆ ಗುರಿ ಸೇರಬಹುದು. ಅದು ಬಿಟ್ಟು ಸಣ್ಣ ಪುಟ್ಟ ಸೋಲಿಗೆ ಹೆದರಿ ಹೇಡಿಯಂತೆ ಸತ್ತರೇನು ಬಂತು?

ಕರುಳು ಬಿರಿಯುವಂತೆ ರೋಧಿಸುತ್ತಿರುವ ಗೆಳೆಯನ ತಂದೆ, ತಾಯಿ, ಅಕ್ಕತಮ್ಮ, ಬಂಧು ಬಳಗದವರ ಮಧ್ಯೆ ಇರುವ ಗೆಳೆಯನ ಕಳೇಬರಹವನ್ನೊಮ್ಮೆ ಇವನು ಮರುಕ, ತಿರಸ್ಕಾರದಿಂದ ನೋಡಿದ. ಗೆಳೆಯ ನಿನಗಾಗಿ ಎಷ್ಟೊಂದು ಪ್ರೀತಿ ತುಂಬಿಕೊಂಡಿದ್ದ ಜೀವಗಳನ್ನು ಘಾಸಿಗೊಳಿಸಿದ್ದೀಯೇ, ನೀನು ಘೋರ ತಪ್ಪು ಮಾಡಿಬಿಟ್ಟೆಯೋ. ಬದುಕೆಂದರೆ ಇಷ್ಟೇ ಎಂದು ಅದಕ್ಕೊಂದು ಪೂರ್ಣ ವಿರಾಮ ಹಾಕಿ ಬಿಟ್ಟೆಯಲ್ಲಾ. ಅದಕ್ಕೆ ಎಷ್ಟೊಂದು ಮಗ್ಗುಲುಗಳಿತ್ತು. ನೀನೇಕೆ ಕಣ್ತೆರೆದು ನೋಡಲಿಲ್ಲ? ಇಷ್ಟಕ್ಕೆ ಅಮೂಲ್ಯ ಬದುಕನ್ನು ವಿವೇಚನೆ ಇಲ್ಲದ ಹುಂಬನಂತೆ ಕೊನೆಗೊಳಿಸಿಬಿಟ್ಟೆಯಲ್ಲಾ. ಬದುಕು ನಿನ್ನನ್ನೆಂದೂ ಕ್ಷಮಿಸುವುದಿಲ್ಲ. ನಿನ್ನನ್ನು ನನ್ನ ಗೆಳೆಯನೆಂದು ಹೇಳಿಕೊಳ್ಳಲೇ ನನಗೆ ನಾಚಿಕೆಯಾಗುತ್ತಿದೆ. ಬದುಕಿನಲ್ಲಿ ಈ ಕ್ಷಣಕ್ಕೆ ಸೋತಿದ್ದೇನೆ. ಗೆಲುವಿನ ಮೆಟ್ಟಿಲಾಗಿಸಿಕೊಂಡು ಸಾಧಿಸಿ ತೋರಿಸುತ್ತೇನೆ. ನಿನ್ನಂಥಹ ಹೇಡಿಗಳಿಗೆ ಇದೋ ನನ್ನ ಧಿಕ್ಕಾರ ಎಂದು ಮನದಲ್ಲೇ ಉದ್ಗರಿಸಿಕೊಂಡವನೇ ಸರಸರನೆ ಹೊರ ನಡೆದುಬಿಟ್ಟ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...