Home / ಲೇಖನ / ಇತರೆ / ಬದುಕೆಂದರೆ ಇಷ್ಟೆಯೇ?

ಬದುಕೆಂದರೆ ಇಷ್ಟೆಯೇ?

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,

ಅವನು ಇಷ್ಟು ದಿನ ಬದುಕಿದ್ದೇ ಸುಳ್ಳೆಂಬಂತೆ ಸತ್ತು ಮಲಗಿದ್ದಾನೆ. ಕೊನೆಯದಾಗಿ ಅವನ ನಿರ್ಜೀವ ದೇಹವನ್ನು ನೋಡಲೆಂದೇ ಈ ಅವನ ಗೆಳೆಯ ಬಂದಿದ್ದಾನೆ. ಎರಡು ದೇಹ ಒಂದು ಜೀವವೆಂಬಂತಿದ್ದ ಈ ಗೆಳೆಯರಲ್ಲಿ ಒಬ್ಬ ಪಿಯುಸಿ ಪರೀಕ್ಷೆಯಲ್ಲಿ ಫೇಲಾಗಿದ್ದೇ ನೆವವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೋಡಲು ಬಂದವನೂ ನಪಾಸಾಗಿದ್ದಾನೆ. ಸತ್ತ ಗೆಳೆಯನನ್ನು ನೋಡುತ್ತಾ ಇವನು ಯೋಚಿಸುತ್ತಿದ್ದಾನೆ. ಈಗ ಬದುಕಿನಲ್ಲಿ ಎಲ್ಲಾ ಮುಗಿದುಹೋಯಿತೆಂದು ಆತ್ಮಹತ್ಯೆ ಮಾಡಿಕೊಳ್ಳಬೇಕೇ?

ಒಮ್ಮೆ ಬದುಕಿನಲ್ಲಿ ಸೋತರೆ ಅದೇ ಕಟ್ಟಕಡೆಯ ಸೋಲೆ? ಮುಂದೆ ಗೆಲುವೇ ಇಲ್ಲವೇ ? ಅಥವಾ ಇದನ್ನು ಹೊರತು ಪಡಿಸಿ ಬೇರೆ ಬದುಕೇ ಇಲ್ಲವೇ ? ಬದುಕೆಂದರೆ ಇಷ್ಟೆಯೇ? ಒಂದು ಯಕಶ್ಚಿತ್ ಪರೀಕ್ಷೆಯಲ್ಲಿ ಫೇಲಾದೊಡನೆ ಬದುಕೇ ಮುಗಿದಂತೆಯೇ? ಬದುಕಿನಲ್ಲಿ ಒಮ್ಮೆ ಒಂದು ಬಾಗಿಲು ಮುಚ್ಚಿತೆಂದಾದರೆ ಅದೆಂದೂ ತೆರೆಯುವುದೇ ಇಲ್ಲವೇ ? ಅಥವಾ ಬದುಕಿಗೆ ಅದೊಂದೇ ಬಾಗಿಲೆ ? ಕಣ್ಣು ತೆರೆದು ನೋಡಿದರೆ ಸುತ್ತಲೂ ಅದೆಷ್ಟು ಅವಕಾಶಗಳಿವೆ. ವಿಭಿನ್ನ ಸಾಧ್ಯತೆಗಳಿವೆ. ಯಾಕಿಂಥಾ ಮೌಢ್ಯ ನನ್ನ ಗೆಳೆಯನನ್ನು ಆವರಿಸಿತು?

ಕಳೆದ ತಿಂಗಳಷ್ಟೇ ಮನೆಯವರು ಬೈಕ್ ಕೊಡಿಸಲಿಲ್ಲವೆಂದು ಸಹಪಾಠಿಯೊಬ್ಬ ವಿಷ ಕುಡಿದು ಸತ್ತದ್ದು ನೆನಪಾಯ್ತು. ನೀನು ಬದುಕಿದ್ದರೆ ಇಂದಲ್ಲ ನಾಳೆ ಬೈಕ್ ಕೊಳ್ಳಬಹುದಿತ್ತು. ನಿಜ ಬದುಕು ಎಷ್ಟೊಂದು ದೊಡ್ಡದಿದೆ. ಸಾಧಿಸುವ ಛಲವಿದ್ದರೆ ಇಂದಲ್ಲ ನಾಳೆ ಗುರಿ ಸೇರಬಹುದು. ಅದು ಬಿಟ್ಟು ಸಣ್ಣ ಪುಟ್ಟ ಸೋಲಿಗೆ ಹೆದರಿ ಹೇಡಿಯಂತೆ ಸತ್ತರೇನು ಬಂತು?

ಕರುಳು ಬಿರಿಯುವಂತೆ ರೋಧಿಸುತ್ತಿರುವ ಗೆಳೆಯನ ತಂದೆ, ತಾಯಿ, ಅಕ್ಕತಮ್ಮ, ಬಂಧು ಬಳಗದವರ ಮಧ್ಯೆ ಇರುವ ಗೆಳೆಯನ ಕಳೇಬರಹವನ್ನೊಮ್ಮೆ ಇವನು ಮರುಕ, ತಿರಸ್ಕಾರದಿಂದ ನೋಡಿದ. ಗೆಳೆಯ ನಿನಗಾಗಿ ಎಷ್ಟೊಂದು ಪ್ರೀತಿ ತುಂಬಿಕೊಂಡಿದ್ದ ಜೀವಗಳನ್ನು ಘಾಸಿಗೊಳಿಸಿದ್ದೀಯೇ, ನೀನು ಘೋರ ತಪ್ಪು ಮಾಡಿಬಿಟ್ಟೆಯೋ. ಬದುಕೆಂದರೆ ಇಷ್ಟೇ ಎಂದು ಅದಕ್ಕೊಂದು ಪೂರ್ಣ ವಿರಾಮ ಹಾಕಿ ಬಿಟ್ಟೆಯಲ್ಲಾ. ಅದಕ್ಕೆ ಎಷ್ಟೊಂದು ಮಗ್ಗುಲುಗಳಿತ್ತು. ನೀನೇಕೆ ಕಣ್ತೆರೆದು ನೋಡಲಿಲ್ಲ? ಇಷ್ಟಕ್ಕೆ ಅಮೂಲ್ಯ ಬದುಕನ್ನು ವಿವೇಚನೆ ಇಲ್ಲದ ಹುಂಬನಂತೆ ಕೊನೆಗೊಳಿಸಿಬಿಟ್ಟೆಯಲ್ಲಾ. ಬದುಕು ನಿನ್ನನ್ನೆಂದೂ ಕ್ಷಮಿಸುವುದಿಲ್ಲ. ನಿನ್ನನ್ನು ನನ್ನ ಗೆಳೆಯನೆಂದು ಹೇಳಿಕೊಳ್ಳಲೇ ನನಗೆ ನಾಚಿಕೆಯಾಗುತ್ತಿದೆ. ಬದುಕಿನಲ್ಲಿ ಈ ಕ್ಷಣಕ್ಕೆ ಸೋತಿದ್ದೇನೆ. ಗೆಲುವಿನ ಮೆಟ್ಟಿಲಾಗಿಸಿಕೊಂಡು ಸಾಧಿಸಿ ತೋರಿಸುತ್ತೇನೆ. ನಿನ್ನಂಥಹ ಹೇಡಿಗಳಿಗೆ ಇದೋ ನನ್ನ ಧಿಕ್ಕಾರ ಎಂದು ಮನದಲ್ಲೇ ಉದ್ಗರಿಸಿಕೊಂಡವನೇ ಸರಸರನೆ ಹೊರ ನಡೆದುಬಿಟ್ಟ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...