ತೊಟ್ಟು ಕಳಚಿತು.

ಹಣ್ಣೊಂದು ಇತ್ತು ಮರದಿಂದ ಬಿತ್ತು
ಮಣ್ಣಿನಲಿ ಬಿದ್ದು ಹೋಯ್ತು
ಸಣ್ಣಾಗಿ ಸೋತು ಸುದ್ದಾಗಿ ಮತ್ತೆ
ಕಣ್ಣಿನಲಿ ನೀರು ಬಂತು

ಬೆಳೆದಂತೆ ಕಾಯಿ ತಾ ಭಾರವಾಯ್ತು
ಬೆಳೆದದ್ದೆ ಮುಳುವದಾಯ್ತು
ತಳೆದೀತೆ ಭಾರ ತೆಳ್ಳನೆಯ ತುಂಬು
ಕಳವಳದಿ ತಡೆಯದಾಯ್ತು

ತೊಯ್ದಾಡಿ ತೂಗಿ ಬಯ್ದಾಡಿ ವಿಧಿಯ
ಸುಯ್ದಾಡಿ ಹಗಲುರಾತ್ರಿ
ಕೊಯ್ದಂತೆ ತೊಟ್ಟು, ತಾಯ ಮರ ಬಿಟ್ಟು
ಹೊಯ್ದಾಡಿ ಬಿತ್ತು ಖಾತ್ರಿ

ಅಯ್ಯೋ ಎಂದು ಗೋಳಾಡುತಿತ್ತು
ಚುಯ್ಯೆಂದು ರಸವ ಸೋರಿ
ಬಯ್ಯುವುದು ಯಾರ ತನ್ನನ್ನೆ ತಾನು
ಮೈಯಾರ ನೆಲವ ಸಾರಿ

ದಿನ ತುಂಬಿದಾಗ ತುಂಬಿದ್ದ ಬಾಳು
ಬೇರ್ಪಡುವ ರೀತಿ ಬೇರೆ
ತನು ಮನವು ಬಲಿತು ಹಣ್ಣಾಗಿ ಕೊನೆಗೆ
ಮರ ಬಿಡುವ ರೀತಿ ಬೇರೆ

ಹೊಳೆದಿತ್ತು ತಥ್ಯ ಬಿದ್ದಾಗ ನೆಲಕೆ
ಸದ್ದಾಯ್ತು ಒಳಗೆ ಹೊರಗೆ
ಬಿದ್ದಾಗಲೊಡನೆ ಮರದಿಂದ ಕೆಳಗೆ
ತೆರೆದಿತ್ತು ಮೇಲೆ ಕರೆಗೆ

ವೃಕ್ಷ ಫಲ ಬಂಧ ಶಾಶ್ವತವು ಅಲ್ಲ
ತಕ್ಷಣಕೆ ಬಿಡುವುದಲ್ಲ
ಲಕ್ಷ ವರುಷಗಳ ಸ್ನೇಹವಿದ್ದರೂ
ಲಕ್ಷಣವು ಒಂದೆ ಅಲ್ಲ

ಸೃಷ್ಟಿಯಲಿ ಸಹಜ ಫಲಮರವ ಬಿಟ್ಟು
ಕಷ್ಟದಲಿ ಬೇರೆಯಾಗಿ
ಸೃಷ್ಟಿಸಲೆ ಬೇಕು ಹೊಸಫಲವ ಮತ್ತೆ
ಇಷ್ಟಾನಿಷ್ಟವಾಗಿ
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಂಧಿ ಮತ್ತು ಪ್ರಸ್ತುತತೆ
Next post ಶಕುನ-ಭವಿಷ್ಯ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys