Home / ಕವನ / ಕವಿತೆ / ತೊಟ್ಟು ಕಳಚಿತು.

ತೊಟ್ಟು ಕಳಚಿತು.

ಹಣ್ಣೊಂದು ಇತ್ತು ಮರದಿಂದ ಬಿತ್ತು
ಮಣ್ಣಿನಲಿ ಬಿದ್ದು ಹೋಯ್ತು
ಸಣ್ಣಾಗಿ ಸೋತು ಸುದ್ದಾಗಿ ಮತ್ತೆ
ಕಣ್ಣಿನಲಿ ನೀರು ಬಂತು

ಬೆಳೆದಂತೆ ಕಾಯಿ ತಾ ಭಾರವಾಯ್ತು
ಬೆಳೆದದ್ದೆ ಮುಳುವದಾಯ್ತು
ತಳೆದೀತೆ ಭಾರ ತೆಳ್ಳನೆಯ ತುಂಬು
ಕಳವಳದಿ ತಡೆಯದಾಯ್ತು

ತೊಯ್ದಾಡಿ ತೂಗಿ ಬಯ್ದಾಡಿ ವಿಧಿಯ
ಸುಯ್ದಾಡಿ ಹಗಲುರಾತ್ರಿ
ಕೊಯ್ದಂತೆ ತೊಟ್ಟು, ತಾಯ ಮರ ಬಿಟ್ಟು
ಹೊಯ್ದಾಡಿ ಬಿತ್ತು ಖಾತ್ರಿ

ಅಯ್ಯೋ ಎಂದು ಗೋಳಾಡುತಿತ್ತು
ಚುಯ್ಯೆಂದು ರಸವ ಸೋರಿ
ಬಯ್ಯುವುದು ಯಾರ ತನ್ನನ್ನೆ ತಾನು
ಮೈಯಾರ ನೆಲವ ಸಾರಿ

ದಿನ ತುಂಬಿದಾಗ ತುಂಬಿದ್ದ ಬಾಳು
ಬೇರ್ಪಡುವ ರೀತಿ ಬೇರೆ
ತನು ಮನವು ಬಲಿತು ಹಣ್ಣಾಗಿ ಕೊನೆಗೆ
ಮರ ಬಿಡುವ ರೀತಿ ಬೇರೆ

ಹೊಳೆದಿತ್ತು ತಥ್ಯ ಬಿದ್ದಾಗ ನೆಲಕೆ
ಸದ್ದಾಯ್ತು ಒಳಗೆ ಹೊರಗೆ
ಬಿದ್ದಾಗಲೊಡನೆ ಮರದಿಂದ ಕೆಳಗೆ
ತೆರೆದಿತ್ತು ಮೇಲೆ ಕರೆಗೆ

ವೃಕ್ಷ ಫಲ ಬಂಧ ಶಾಶ್ವತವು ಅಲ್ಲ
ತಕ್ಷಣಕೆ ಬಿಡುವುದಲ್ಲ
ಲಕ್ಷ ವರುಷಗಳ ಸ್ನೇಹವಿದ್ದರೂ
ಲಕ್ಷಣವು ಒಂದೆ ಅಲ್ಲ

ಸೃಷ್ಟಿಯಲಿ ಸಹಜ ಫಲಮರವ ಬಿಟ್ಟು
ಕಷ್ಟದಲಿ ಬೇರೆಯಾಗಿ
ಸೃಷ್ಟಿಸಲೆ ಬೇಕು ಹೊಸಫಲವ ಮತ್ತೆ
ಇಷ್ಟಾನಿಷ್ಟವಾಗಿ
***

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...