ಶಿಲ್ಪಿ

ಭವ್ಯ ಭಾರತದ ಕುಶಲ ತೋಟಿಗ
ನಾಡಿನ ಭವಿಷ್ಯದ ಸಾಕಾರ ಶಿಲ್ಪಿ
ನಿನಗೆಷ್ಟೊಂದು ಪೂಜಿಸಿದರೂ…
ಪ್ರೀತಿಯಲಿ ಗೌರವಿಸಿದರೂ
ನಿನ್ನಾ.. ಮಹಾನ್ ತ್ಯಾಗ-ಭೋದನೆಗೆ ಬೆಲೆಯಿಲ್ಲ.

ಇಂದು.. ಅದು ಮಾಯವಾಗುತಿಹದು
ನಿಷ್ಠೆ-ಗೌರವ-ಹುಸಿಯಾಗುತಿಹವು
ನಾಚಿಕೆ-ಸಂಕೋಚ ದೂರ ತಳ್ಳುತ
ಹಗಲಿನಲಿ ಹರಾಜು ಮಾಡುತಿಹರು
ಪೂಜ್ಯ.. ಶಿಕ್ಷಕ.. ವೃತ್ತಿಯನು…

ಕೀಳಾಗಿಸಿ ಅಪಹಾಸ್ಯ ಮಾಡುತಿಹರು
ಅಸ್ಪೃಶ್ಯತೆಯಲಿ ಶಿಕ್ಷಕನು ತಳ್ಳುತ
ನಿಜದಲಿ ಗುರುವನರಿಯದೆ…
ಬರಿ-ಪೊಳ್ಳು ಸಭೆ-ಭಾಷಣದಲಿ ಹೊಗಳುತಿಹರು

ನವನಾಗರೀಕತೆಯ ನಿರ್ಮಾಪಕ ಎನ್ನುತಲೇ
ಅರಳಿ-ಬೆಳಗುವ ಕುಸುಮಗಳ ಶಿಲ್ಪಿ
ಅಧಿಕಾರಶಾಹಿ-ಕೊಳಚೆಯ
ಭವಿಷ್ಯದಲಿ ಆತಂಕದ ಘಂಟೆಯ ಬಾರಿಸುತ
ಶಿಕ್ಷಕನನು ಕಡೆಗಣಿಸಿ… ನಿರ್ಲಕ್ಷಿಸಿ…
ನಾಗರೀಕತೆಯ ನಾಶದ ಸಮಾಧಿಯನು ನಿರ್ಮಿಸುತಿಹರು.

***

 

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೋರುಮದಲಾವಾ ಖೇಲ ಖೇಲ
Next post ಹೊತ್ತು ಮುಳುಗಿತು ಜಗದಿ ಕತ್ತಲಾದಿತು

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

cheap jordans|wholesale air max|wholesale jordans|wholesale jewelry|wholesale jerseys