ಭಿನ್ನ ಭೇದವ ಮಾಡಬ್ಯಾಡಿರಿ (ಬೀದಿ ನಾಟಕದ ಹಾಡು)

ಹಾಡು – ೧

ಹೇಳಿರಣ್ಣ ಹೇಳಿರೊ
ಬುದ್ಧಿವಂತ ಜನಗಳೆ
ಕೇಳಿರಣ್ಣ ಕೇಳಿರೊ
ಮನಸುಳ್ಳ ಜನಗಳೆ ||

ಹೇಳಿರಣ್ಣ ಹೇಳಿರೊ
ಹೆಣ್ಣೆಚ್ಚೊ ಗಂಡಚ್ಚೊ ||

ಹೆಣ್ಣೆಚ್ಚು ಎಂಬುವರು
ಕಾರಣವ ತಿಳಿಯಿರೊ
ಗಂಡೆಚ್ಚು ಎಂಬುವರು
ಕಾರಣವ ಹೇಳಿರೊ ||

ಮಗುವಾಗಿ ಹುಟ್ಟಿದ್ದು
ಹೆಣ್ಣೇಗೆ ಆಯಿತು ?
ಮಗುವಾಗಿ ಹುಟ್ಟಿದ್ದು
ಗಂಡ್ಹೇಗೆ ಆಯಿತು? ||

ಹೆಣ್ಣೋಗಿ ಗಂಡ್ಹೋಗಿ
ಮಗುವಾಗೋದ್ಯಾವಾಗ
ಮನುಷ್ಯನ ಮನಸೋಗಿ
ಮಗು ಮನಸ್ಯಾವಾಗ ||

ಹಾಡು – ೨

ಕೇಳ್ರಯ್ಯ ಗಂಡುಸ್ರೆ
ಕೇಳ್ರಯ್ಯ ||

ಹೆಣ್ಣಿನ ಮಾತ್ವವ
ಕೇಳ್ರಯ್ಯ ||

ನಿಮಿಗೆ ಜನ್ಮ ಕೊಟ್ಟವಳು | ಹೆಣ್ಣಲ್ಲವೆ
ಹೆತ್ತು ಹೊತ್ತು ಸಾಕಿದವಳು | ಹೆಣ್ಣಲ್ಲವೆ
ಎದೆ ಹಾಲು ನಿಡಿದವಳು | ಹೆಣ್ಣಲ್ಲವೆ
ಕೈತುತ್ತು ತಿನಿಸಿದವಳು | ಹೆಣ್ಣಲ್ಲವೆ
ತಾಯಾಗಿ ಮರುಗಿದವಳು | ಹೆಣ್ಣಲ್ಲವೆ
ಅಕ್ಕ ತಂಗಿಯಾದವಳು | ಹೆಣ್ಣಲ್ಲವೆ
ಅತ್ತೆ ಸೊಸೆಯಾದವಳು | ಹೆಣ್ಣಲ್ಲವೆ
ಜೀವನ ಸಂಗಾತಿಯಾದವಳು | ಹೆಣ್ಣಲ್ಲವೆ
ಅತ್ತು ಮರುಗುದಿವಳು | ಹೆಣ್ಣಲ್ಲವೆ
ಮಮತೆಯ ಮಡಿಲಾದವಳು | ಹೆಣ್ಣಲ್ಲವೆ
ಕೇಳ್ರಯ್ಯ ಗಂಡುಸ್ರೆ
ಕೇಳ್ರಯ್ಯ ||
ಹೆಣ್ಣಿನ ಮಾತ್ವವ
ಕೇಳ್ರಯ್ಯ ||

ಹಾಡು – ೩

ಮಕ್ಕಳು ನಮ್ಮ ಮಕ್ಕಳಣ್ಣ
ಗಂಡು ಹೆಣ್ಣು ಅಂತೆಲ್ಲ
ಭಿನ್ನ ಭೇದ ತರವಲ್ಲಣ್ಣ ||

ಗಂಡಾಗಿ ಹೆಚ್ಚೇನು
ಹೆಣ್ಣಾಗಿ ಕೀಳೇನು
ನಮ್ಮ ಮನದ ವಿಕಾರವು
ಆಗುವುದೆಂದು ನಾಶವು ||

ಹೆಣ್ಣೆಂದು ಅಬಲೆಯಳು
ಎಂಬುದೇ ಅಜ್ಞಾನ
ಏನೆಲ್ಲ ಸಾಧಿಸಲುಳು
ಬೇಕು ಸಮಾನತೆಯು ||

ಹಾಡು – ೪

ಹೆಣ್ಣೆಂಬುದು ಕೇಳಣ್ಣ
ಗಂಡು ಮಾಡಿದ ರಾಜಕೀಯ ||

ವಿದ್ಯೆ ಕೊಡಲಿಲ್ಲ
ಬುದ್ಧಿ ಹೇಳಿಲಿಲ್ಲ
ಅವಳ ಬುದ್ಧಿಗೆ ಮೊದಲು
ಬೆಲೆಯ ಕೊಡಲಿಲ್ಲ ||

ಮಾತಿಗೆ ಮುನ್ನ ಬಾಯಿ ಮುಚ್ಚಿಸಿ
ತಲೆ ತುಂಬಾ ಚಿಂತೆ ಹೆಚ್ಚಿಸಿ
ಬಲವಿದ್ದೂ ಹೀನಳ ಮಾಡಿ
ಸುತ್ತಲು ತೊಡಿಸಿ ಬೇಡಿ ||

ಮೊದಲ ಸ್ಥಾನಕೆ ಬರದಂತೆ
ಸದಾ ಮಾಡುತ ಕುತಂತ್ರ
ಜಗದಲೆಲ್ಲ ಎರಡನೆ ದರ್ಜೆಗೆ
ಬಾಳುವಂತಾಯಿತೆ ಹೆಣ್ಣಿಗೆ ||

ಹಾಡು – ೫

ಭಿನ್ನ ಭೇದವ ಮಾಡಬ್ಯಾಡಿರಿ
ಗಂಡೆಚ್ಚೊ ಹೆಣ್ಣೆಚ್ಚೊ ಅನ್ನಬ್ಯಾಡಿರಿ ||

ಗಂಡಿಗೆ ಹೆಣ್ಣು ಹೆಣ್ಣಿಗೆ ಗಂಡು
ಬಿಟ್ಟಿರದ ಬಂಧಾನ ನಡಕಂಡು
ಬಂದೈತೆ ಅನಂತ ರಗಳೆ ಯಾಕಂತ
ಚನ್ನಾಗಿ ತಿಳಿ ನೀನು ಮತಿವಂತ ||

ರೂಪಕೆ ಸೋಲಬ್ಯಾಡ
ಗುಣವಾ ಮರಿಬ್ಯಾಡ
ಹೆಣ್ಣು ನಿನ್ನ ಸುಖದಾ
ಕಣ್ಣಾ ಗೊಂಬೇನು ||

ದುಡ್ಡೀನ ಕಾಲಕೆ ದೊಡ್ಡವನಾಗಿ
ಬಡ್ಡಿಯ ಕಾಲಕೆ ಗಿಡ್ಡವನಾಗಿ
ಹೆಣ್ಣಿನ ಪ್ರೀತಿಯೆ ಚಿಗುರಾಗಿ
ಬೆಳೆಯುವೆ ಹೆಮ್ಮರವಾಗಿ ||

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೇವಲ ನೆನಪು
Next post ನಾವು ಒಂದು

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…