Home / ಕವನ / ಕವಿತೆ / ಭಿನ್ನ ಭೇದವ ಮಾಡಬ್ಯಾಡಿರಿ (ಬೀದಿ ನಾಟಕದ ಹಾಡು)

ಭಿನ್ನ ಭೇದವ ಮಾಡಬ್ಯಾಡಿರಿ (ಬೀದಿ ನಾಟಕದ ಹಾಡು)

ಹಾಡು – ೧

ಹೇಳಿರಣ್ಣ ಹೇಳಿರೊ
ಬುದ್ಧಿವಂತ ಜನಗಳೆ
ಕೇಳಿರಣ್ಣ ಕೇಳಿರೊ
ಮನಸುಳ್ಳ ಜನಗಳೆ ||

ಹೇಳಿರಣ್ಣ ಹೇಳಿರೊ
ಹೆಣ್ಣೆಚ್ಚೊ ಗಂಡಚ್ಚೊ ||

ಹೆಣ್ಣೆಚ್ಚು ಎಂಬುವರು
ಕಾರಣವ ತಿಳಿಯಿರೊ
ಗಂಡೆಚ್ಚು ಎಂಬುವರು
ಕಾರಣವ ಹೇಳಿರೊ ||

ಮಗುವಾಗಿ ಹುಟ್ಟಿದ್ದು
ಹೆಣ್ಣೇಗೆ ಆಯಿತು ?
ಮಗುವಾಗಿ ಹುಟ್ಟಿದ್ದು
ಗಂಡ್ಹೇಗೆ ಆಯಿತು? ||

ಹೆಣ್ಣೋಗಿ ಗಂಡ್ಹೋಗಿ
ಮಗುವಾಗೋದ್ಯಾವಾಗ
ಮನುಷ್ಯನ ಮನಸೋಗಿ
ಮಗು ಮನಸ್ಯಾವಾಗ ||

ಹಾಡು – ೨

ಕೇಳ್ರಯ್ಯ ಗಂಡುಸ್ರೆ
ಕೇಳ್ರಯ್ಯ ||

ಹೆಣ್ಣಿನ ಮಾತ್ವವ
ಕೇಳ್ರಯ್ಯ ||

ನಿಮಿಗೆ ಜನ್ಮ ಕೊಟ್ಟವಳು | ಹೆಣ್ಣಲ್ಲವೆ
ಹೆತ್ತು ಹೊತ್ತು ಸಾಕಿದವಳು | ಹೆಣ್ಣಲ್ಲವೆ
ಎದೆ ಹಾಲು ನಿಡಿದವಳು | ಹೆಣ್ಣಲ್ಲವೆ
ಕೈತುತ್ತು ತಿನಿಸಿದವಳು | ಹೆಣ್ಣಲ್ಲವೆ
ತಾಯಾಗಿ ಮರುಗಿದವಳು | ಹೆಣ್ಣಲ್ಲವೆ
ಅಕ್ಕ ತಂಗಿಯಾದವಳು | ಹೆಣ್ಣಲ್ಲವೆ
ಅತ್ತೆ ಸೊಸೆಯಾದವಳು | ಹೆಣ್ಣಲ್ಲವೆ
ಜೀವನ ಸಂಗಾತಿಯಾದವಳು | ಹೆಣ್ಣಲ್ಲವೆ
ಅತ್ತು ಮರುಗುದಿವಳು | ಹೆಣ್ಣಲ್ಲವೆ
ಮಮತೆಯ ಮಡಿಲಾದವಳು | ಹೆಣ್ಣಲ್ಲವೆ
ಕೇಳ್ರಯ್ಯ ಗಂಡುಸ್ರೆ
ಕೇಳ್ರಯ್ಯ ||
ಹೆಣ್ಣಿನ ಮಾತ್ವವ
ಕೇಳ್ರಯ್ಯ ||

ಹಾಡು – ೩

ಮಕ್ಕಳು ನಮ್ಮ ಮಕ್ಕಳಣ್ಣ
ಗಂಡು ಹೆಣ್ಣು ಅಂತೆಲ್ಲ
ಭಿನ್ನ ಭೇದ ತರವಲ್ಲಣ್ಣ ||

ಗಂಡಾಗಿ ಹೆಚ್ಚೇನು
ಹೆಣ್ಣಾಗಿ ಕೀಳೇನು
ನಮ್ಮ ಮನದ ವಿಕಾರವು
ಆಗುವುದೆಂದು ನಾಶವು ||

ಹೆಣ್ಣೆಂದು ಅಬಲೆಯಳು
ಎಂಬುದೇ ಅಜ್ಞಾನ
ಏನೆಲ್ಲ ಸಾಧಿಸಲುಳು
ಬೇಕು ಸಮಾನತೆಯು ||

ಹಾಡು – ೪

ಹೆಣ್ಣೆಂಬುದು ಕೇಳಣ್ಣ
ಗಂಡು ಮಾಡಿದ ರಾಜಕೀಯ ||

ವಿದ್ಯೆ ಕೊಡಲಿಲ್ಲ
ಬುದ್ಧಿ ಹೇಳಿಲಿಲ್ಲ
ಅವಳ ಬುದ್ಧಿಗೆ ಮೊದಲು
ಬೆಲೆಯ ಕೊಡಲಿಲ್ಲ ||

ಮಾತಿಗೆ ಮುನ್ನ ಬಾಯಿ ಮುಚ್ಚಿಸಿ
ತಲೆ ತುಂಬಾ ಚಿಂತೆ ಹೆಚ್ಚಿಸಿ
ಬಲವಿದ್ದೂ ಹೀನಳ ಮಾಡಿ
ಸುತ್ತಲು ತೊಡಿಸಿ ಬೇಡಿ ||

ಮೊದಲ ಸ್ಥಾನಕೆ ಬರದಂತೆ
ಸದಾ ಮಾಡುತ ಕುತಂತ್ರ
ಜಗದಲೆಲ್ಲ ಎರಡನೆ ದರ್ಜೆಗೆ
ಬಾಳುವಂತಾಯಿತೆ ಹೆಣ್ಣಿಗೆ ||

ಹಾಡು – ೫

ಭಿನ್ನ ಭೇದವ ಮಾಡಬ್ಯಾಡಿರಿ
ಗಂಡೆಚ್ಚೊ ಹೆಣ್ಣೆಚ್ಚೊ ಅನ್ನಬ್ಯಾಡಿರಿ ||

ಗಂಡಿಗೆ ಹೆಣ್ಣು ಹೆಣ್ಣಿಗೆ ಗಂಡು
ಬಿಟ್ಟಿರದ ಬಂಧಾನ ನಡಕಂಡು
ಬಂದೈತೆ ಅನಂತ ರಗಳೆ ಯಾಕಂತ
ಚನ್ನಾಗಿ ತಿಳಿ ನೀನು ಮತಿವಂತ ||

ರೂಪಕೆ ಸೋಲಬ್ಯಾಡ
ಗುಣವಾ ಮರಿಬ್ಯಾಡ
ಹೆಣ್ಣು ನಿನ್ನ ಸುಖದಾ
ಕಣ್ಣಾ ಗೊಂಬೇನು ||

ದುಡ್ಡೀನ ಕಾಲಕೆ ದೊಡ್ಡವನಾಗಿ
ಬಡ್ಡಿಯ ಕಾಲಕೆ ಗಿಡ್ಡವನಾಗಿ
ಹೆಣ್ಣಿನ ಪ್ರೀತಿಯೆ ಚಿಗುರಾಗಿ
ಬೆಳೆಯುವೆ ಹೆಮ್ಮರವಾಗಿ ||

*****

 

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...