Home / ಕವನ / ಕವಿತೆ / ಕೇವಲ ನೆನಪು

ಕೇವಲ ನೆನಪು

ನೀನು ಮಾಡಬೇಕಾದದ್ದು ನೋಡಬೇಕಾದದ್ದು
ಇನ್ನೂ ಬಹಳವಿತ್ತು
ಯಾಕೆ ಹೋದೆ ?

ನಂಬಲೂ ಕಷ್ಟ
ಮಲಗಿದೆಯಂತೆ ತುಸು ತುಸು
ಮುಲುಗಿದೆಯಂತೆ
ಮೈ ಬಿಸಿ ಏರುತ್ತ ಇಳಿಯುತ್ತಾ ಮತ್ತೆ
ಏರುತ್ತ
ಇಳಿದು ಬಿಟ್ಟಿತಂತೆ

ಈಗೀಗ ಪದೇ ಪದೇ ನಿನ್ನ ನೆನಪು
ಅದೇ ರೂಪು ಅದೇ ರೂಹು
ನನ್ನ ಕಾಡುತ್ತವೆ ; ಕುಣಿದಾಡುತ್ತವೆ
ಯಾಕೆ ಹೀಗೆ ?

ಇನ್ನೂ ಹಸಿ ಬದುಕು – ಇನ್ನೂ
ಬಿಸಿ ರಕ್ತ
ನಿನ್ನ ನಗೆ ಮುಗಿದಿರಲಿಲ್ಲ – ಅಲ್ಲ
ಸುರುವೇ ಆಗಿರಲಿಲ್ಲ

ಯಾವನು ಆತ
ಅರಳುವ ಮೊದಲೇ ಹೂ ಕೊಯ್ದವನು
ಎಲ್ಲಾ ಬಿಟ್ಟು ನಿನ್ನೇ ಆಯ್ದವನು

ತೀಡಿದೆ, ತೋಡಿದೆ
ನೆನಪಿನ ಬಾವಿ
ಇಳಿದೆ, ಅಳೆದೆ
ಅಲ್ಲಲ್ಲಿ ಬಂಗಾರ – ಹೊಳೆಯಿತು ವರ್ಣ ಸಿಂಗಾರ

ಅಪೂರ್ಣ ಕತೆಯೇ
ವಿಷಾದ – ನೀನು ಸತ್ತಿದ್ದಕ್ಕೆ
ಕಣ್ಣೀರು – ನಿನ್ನ ನೆನಪಿನ ಸಸಿಗೆ

ಇನ್ನೂ ಸ್ವಲ್ಪ ದಿನ – ಸ್ವಲ್ಪ ವರ್ಷ – ಬಹುಶಃ
ಯಾವಾಗಲೂ
ನೀನು ನೆನಪಾಗುತ್ತೀಯ – ಬರೀ
ನೆನಪಾಗುತ್ತೀಯ

ಕೊನೆಗೊಂದು ಪ್ರಶ್ನೆ :
ಸತ್ತೂ ಬದುಕಿರುವ ನಿನಗೆ
ಶ್ರಾದ್ಧ ಯಾಕೆ ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...