Home / ಕವನ / ಕವಿತೆ / ಕೇವಲ ನೆನಪು

ಕೇವಲ ನೆನಪು

ನೀನು ಮಾಡಬೇಕಾದದ್ದು ನೋಡಬೇಕಾದದ್ದು
ಇನ್ನೂ ಬಹಳವಿತ್ತು
ಯಾಕೆ ಹೋದೆ ?

ನಂಬಲೂ ಕಷ್ಟ
ಮಲಗಿದೆಯಂತೆ ತುಸು ತುಸು
ಮುಲುಗಿದೆಯಂತೆ
ಮೈ ಬಿಸಿ ಏರುತ್ತ ಇಳಿಯುತ್ತಾ ಮತ್ತೆ
ಏರುತ್ತ
ಇಳಿದು ಬಿಟ್ಟಿತಂತೆ

ಈಗೀಗ ಪದೇ ಪದೇ ನಿನ್ನ ನೆನಪು
ಅದೇ ರೂಪು ಅದೇ ರೂಹು
ನನ್ನ ಕಾಡುತ್ತವೆ ; ಕುಣಿದಾಡುತ್ತವೆ
ಯಾಕೆ ಹೀಗೆ ?

ಇನ್ನೂ ಹಸಿ ಬದುಕು – ಇನ್ನೂ
ಬಿಸಿ ರಕ್ತ
ನಿನ್ನ ನಗೆ ಮುಗಿದಿರಲಿಲ್ಲ – ಅಲ್ಲ
ಸುರುವೇ ಆಗಿರಲಿಲ್ಲ

ಯಾವನು ಆತ
ಅರಳುವ ಮೊದಲೇ ಹೂ ಕೊಯ್ದವನು
ಎಲ್ಲಾ ಬಿಟ್ಟು ನಿನ್ನೇ ಆಯ್ದವನು

ತೀಡಿದೆ, ತೋಡಿದೆ
ನೆನಪಿನ ಬಾವಿ
ಇಳಿದೆ, ಅಳೆದೆ
ಅಲ್ಲಲ್ಲಿ ಬಂಗಾರ – ಹೊಳೆಯಿತು ವರ್ಣ ಸಿಂಗಾರ

ಅಪೂರ್ಣ ಕತೆಯೇ
ವಿಷಾದ – ನೀನು ಸತ್ತಿದ್ದಕ್ಕೆ
ಕಣ್ಣೀರು – ನಿನ್ನ ನೆನಪಿನ ಸಸಿಗೆ

ಇನ್ನೂ ಸ್ವಲ್ಪ ದಿನ – ಸ್ವಲ್ಪ ವರ್ಷ – ಬಹುಶಃ
ಯಾವಾಗಲೂ
ನೀನು ನೆನಪಾಗುತ್ತೀಯ – ಬರೀ
ನೆನಪಾಗುತ್ತೀಯ

ಕೊನೆಗೊಂದು ಪ್ರಶ್ನೆ :
ಸತ್ತೂ ಬದುಕಿರುವ ನಿನಗೆ
ಶ್ರಾದ್ಧ ಯಾಕೆ ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...