Home / ಕವನ / ಕವಿತೆ / ಅರೇಬಿಯಾ

ಅರೇಬಿಯಾ

ಮೈ ಸುಟ್ಟ ಕಪ್ಪು ಬೆಟ್ಟಗಳು
ಬೆತ್ತಲೆ ಮರುಭೂಮಿ
ಚಿಂದಿಯಾಗಿ ಚುಚ್ಚುವ, ಕಚ್ಚುವ ಕ್ಯಾಕ್ಟಸ್
ಕೆಂಪು ಸಮುದ್ರದ ಹವಳಗಳ ಹರ್ಷೋದ್ಗಾರ
ಕನಸು ತಣಿಸುವ ಇಂಧನ.
ಓಯೊಸಿಸ್ ನೀರಿಗಾಗಿ ಹಲುಬಿ
ಇಂಧನವನ್ನೇ ಹರಯಿಸಿಕೊಂಡ ಒಂಟೆಗಳು
ಆಗೀಗಲಷ್ಟೇ ಮುಗುಳು ನಗುವ ಮಳೆ
ಧಕ್ಕಿಸಿಕೊಳ್ಳದ ಮರುಭೂಮಿ
ಸೂರ್ಯನ ಬಿಸಿಲ್ಗುದುರೆಗಳು –

ಸೌಂದರ್ಯವೆಲ್ಲಸೂರೆಗೊಂಡ
ಸುಂದರಿಯರ ಗಜಗಮನೆಯರ ಬುರ್ಕಾ
ಉಸಿರೊಳಗೇ ಬೆರೆತ ನಮಾಜು
ಮಸಾಲೆ ಕಾಫಿ; ಸಾಮೂಹಿಕ ಹುಕ್ಕಾ
ಪ್ರಾತಃಸ್ಮರಣೀಯರಿಲ್ಲದೇ ಸಿಡಿದೆದ್ದ ಉರಿಬಿಸಿಲು
ನಕ್ಷತ್ರ ಪುಂಜಗಳ  ಚಿತ್ರ

ದುಮ್ಮಿಕ್ಕಿ ಆಕಾಶಕ್ಕೇರುವ
ನಗೆ ಇಂಧನ
ಸಮಾರಂಭಗಳ ಅಭಿಲಾಷೆ
ಅಲಂಕರಿಸಿದ ಕೆಲಿಗ್ರಾಫಿ
ಸರಕು ಸರಂಜಾಮಿನ ವ್ಯಾಪಾರಿ ಹಡಗುಗಳು –

ಇಲ್ಲಿ ಮಕ್ಕಳಿಗೆ ಗಾಳಿ ಪಟೋತ್ಸವ
ಬಾಸ್ಕಿ ರಾಬಿನ್ಸ್ ಆಯಸ್ಕ್ರೀಮ ಕಾತುರ
ನಿರಾಯಾಸ ನಿರಾತಂಕ ಹಣಗಳಿಕೆ

ಕಣ್ಣಿಗೆ ಸುಣ್ಣ ಬಣ್ಣಗಳ ಗದ್ದಲವಿಲ್ಲ
ಮಿಸುಕಿದರೆ ಗಲ್ಲುಗಳುಂಟು
ಬಣ್ಣದ ಕನಸುಗಳು ಚಿಗುರುವಿಕೆಗೆ
ಸಮಶೀತೋಷ್ಣವಿಲ್ಲ
ಹೃದಯ ಕಮರುವಾಗ
ಕನಸುಗಳು ಕನವರಿಸುತ್ತವೆ; ಮೊಟ್ಟೆಯೊಡೆಯುವುದಿಲ್ಲ

(ಸೌದಿ‌ಅರೇಬಿಯಾದ ಒಂದು ಒಳನೋಟ)
*****

ಪುಸ್ತಕ: ಗಾಂಜಾ ಡಾಲಿ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...