Home / ಕವನ / ಕವಿತೆ / ನಾಡಿನಳ್ಕರೆ

ನಾಡಿನಳ್ಕರೆ

ಬಾನು ತೆರದಿರೆ ತಿರೆಯ ತೊಯ್ದಿರೆ ಸೂರ್ಯ ತನ್ನನುರಾಗದಿ
ದೃಷ್ಟಿಹೊಂದಿರೆ ರಸೆಗೆ ಹಸುಳೆಯ ಸ್ತನ್ಯಪಾನದ ಭಾವದಿ
ಕನಸುಮುಂದಿರೆ ನಾಡಿನಳ್ಕರೆ ಹೃದಯದೊಳು ಮಡುವಾಗಿರೆ
ನಮ್ಮನಾಡನು ಕುರಿತು ನಾನಿಂದಾವತೆರದೊಳು ಹಾಡಲಿ?

ನಲಿವ ತೋಪಿನ ನಗುವ ಕೆರೆಗಳ ಹುಲುಸು ಪೈರಿನ ಹೊಲಗಳ
ದೂರ ಕುಲಪಿತರಂತೆ ರಕ್ಷೆಗೆ ಕುಳಿತ ಸಾಲಿನ ಮಲೆಗಳ
ಜೀವದಾನದ ಅಂಬುವಾಹದ ಬಯಲ ಮಡಲಿನ ಹಳ್ಳಿಯ
ನಮ್ಮ ನೆಲದೀ ಚೆಲುವ ಕುರಿತಿಂದಾವ ತರದೊಳು ಹಾಡಲಿ?

ದಿನವ ದೇವನ ತೇರಸೆಳೆಯುವ ಕುದುರೆಯೇಳರ ಕೆನತಕೆ
ಹೊಳಲುಗೊಡುವಿಂಚರದ ಕಣಿವೆಯ, ಮಲೆಯ ಗಾಳಿಯ ಮಲೆತಕೆ
ಹುರುಪುಗೊಡುತಿಹ ಹೂತ ಹಿಪ್ಪೆಯ ಕಂಪಿನುಸಿರಿನ ಹುಳುವಿನ
ಹೊಲದ ತಾಯಿಯ ಮೊಲೆಯ ತೆರದೊಳು ಕಣದ ಬಣಬೆಗಳೊಟ್ಟಿನ

ತಳಿರಿನವಕುಂಠನದಿ ಮಾಧವವಧುವಿನಂದದ ಮಾವಿನ
ತರಳಪರ್ಣಾಶ್ವತ್ಥವೃಕ್ಷಕೆ ಮಧುರಳಾಗಿಹ ಬೇವಿನ
ಸ್ವಾವಲಂಬನದಿಂದ ಹಳುವನೆ ತುಂಬುವೊಲು ಬೆಳೆವಾಲದ
ತಂಪುನೆಳಲೊಳು ಬಿಡುವಗೊಳ್ಳಲು ಗೊಲ್ಲನೊಲಿವ ತಮಾಲದ

ಕೋಡತುದಿಯೊಳು ಕಾಡನಡುಗಡೆ ಆತ್ಮದನುಭವಸಾರವ
ತುಂಬಿಯಂದದಿ ಮರ್ತ್ಯ ಕೂಡಿಡೆ ಬಯಸಿ ಭದ್ರಾಗಾರವ
ನಿರ್ಮಿಸಿಹ ನೀತೆರದೊಳೆನುವಂತಿರುವ ಗುಡಿಗೋಪುರಗಳ
ಬದುಕಿಗೂರಿದ ಸೊಬಗೆ ಹರಳಾದಂತೆ ಮೆರೆಯುವ ಪುರಗಳ-

ಮೊಲ್ಲೆ ಮಲ್ಲಿಗೆ ಜಾಜಿ ಸಂಪಗೆ ಸುರಗಿ ಪಾದರಿ ಕೇದಗೆ
ಹಲವು ಹೋಲಿಕೆಗಾದ ಪಂಕಜ ಇರವಂತಿ ಸೇವಂತಿಗೆ
ಪಾರಿಜಾತ ಸುಗಂಧರಾಜ ಕದಂಬ ಜಾಲಿಯ ಸೌಸವ
ಆವ ಮಣ್ಣೀತೆರದ ಕಂಪೊಳು ಪ್ರಕಟಿಪುದು ತನ್ನಾತ್ಮವ?

ತಿಣ್ಣಮಲೆಗಾಳಿಯನು ಹೊಗಳಲೆ ತಪ್ಪಲಿನ ಕಮ್ಮೆಲರನು
ಕೆರೆಯ ಚೆಂದಾವರೆಯ ಹೂಗಳ ಹಾಯ್ದು ಬಹ ತಣ್ಣೆಲರನು
ಮಳೆಯ ಮೋಡದಿ ತೂರಿ ಮಿಂಚನು ಕುಣಿಸಿ ಗುಡುಗನು ದನಿಸುತ
ಜವ್ವನಿಗರೆದೆ ಬೆದರೆ ಬರುವಾ ಮುಂಗಾರ ಬೆದೆಗಾಳಿಯ ?

ಮಾಂದಳಿರ ಕೈಯಾಡೆ ಕೋಗಿಲೆ ಕೂಗೆ ದುಂಬಿಯು ಮೊರೆಯಿಡೆ
ಪಚ್ಚೆಗಿಳಿಗಳ ತೊಡವ ತೋರುತ ಗೋಣಿಮರಗಳು ಸಾಲಿಡೆ
ಹಚ್ಚ ಹಸುರಿನ ನಡುವೆ ಬೆಳ್ಳನೆ ದಾರಿ ಪಯಣಕೆ ಹೊರಟಿರೆ
ನನ್ನ ಚಿತ್ತವ ದಾರಿಗನ ಗೈದೆಲ್ಲಿಗೈದಿಸಲೀ ದಿನ?

ನೆಲಮುಗಿಲ ಕನಸುಗಳ ಕೊಳ್ಳುತ ದನಿಯ ದೋಣಿಯೊಳಾಡಿಸಿ
ಎಲರ ಮಲರಿಸುವಂಥ ಹಕ್ಕಿಗಳಿಂಚರವ ನಾನಾಲಿಸಿ
ಭಾವ ಶೃಂಗಾರದೊಳು ಛಂದೋಗತಿಗೆ ನರ್ತಿಸಲೆಳಸುವೀ
ನುಡಿಯ ಲಾಸ್ಯಕೆ ರಂಗವಾವುದ ಸಜ್ಜುಗೊಳಿಸುವೆನೇಪರಿ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...