Home / ಕವನ / ಕವಿತೆ / ನಾಡಿನಳ್ಕರೆ

ನಾಡಿನಳ್ಕರೆ

ಬಾನು ತೆರದಿರೆ ತಿರೆಯ ತೊಯ್ದಿರೆ ಸೂರ್ಯ ತನ್ನನುರಾಗದಿ
ದೃಷ್ಟಿಹೊಂದಿರೆ ರಸೆಗೆ ಹಸುಳೆಯ ಸ್ತನ್ಯಪಾನದ ಭಾವದಿ
ಕನಸುಮುಂದಿರೆ ನಾಡಿನಳ್ಕರೆ ಹೃದಯದೊಳು ಮಡುವಾಗಿರೆ
ನಮ್ಮನಾಡನು ಕುರಿತು ನಾನಿಂದಾವತೆರದೊಳು ಹಾಡಲಿ?

ನಲಿವ ತೋಪಿನ ನಗುವ ಕೆರೆಗಳ ಹುಲುಸು ಪೈರಿನ ಹೊಲಗಳ
ದೂರ ಕುಲಪಿತರಂತೆ ರಕ್ಷೆಗೆ ಕುಳಿತ ಸಾಲಿನ ಮಲೆಗಳ
ಜೀವದಾನದ ಅಂಬುವಾಹದ ಬಯಲ ಮಡಲಿನ ಹಳ್ಳಿಯ
ನಮ್ಮ ನೆಲದೀ ಚೆಲುವ ಕುರಿತಿಂದಾವ ತರದೊಳು ಹಾಡಲಿ?

ದಿನವ ದೇವನ ತೇರಸೆಳೆಯುವ ಕುದುರೆಯೇಳರ ಕೆನತಕೆ
ಹೊಳಲುಗೊಡುವಿಂಚರದ ಕಣಿವೆಯ, ಮಲೆಯ ಗಾಳಿಯ ಮಲೆತಕೆ
ಹುರುಪುಗೊಡುತಿಹ ಹೂತ ಹಿಪ್ಪೆಯ ಕಂಪಿನುಸಿರಿನ ಹುಳುವಿನ
ಹೊಲದ ತಾಯಿಯ ಮೊಲೆಯ ತೆರದೊಳು ಕಣದ ಬಣಬೆಗಳೊಟ್ಟಿನ

ತಳಿರಿನವಕುಂಠನದಿ ಮಾಧವವಧುವಿನಂದದ ಮಾವಿನ
ತರಳಪರ್ಣಾಶ್ವತ್ಥವೃಕ್ಷಕೆ ಮಧುರಳಾಗಿಹ ಬೇವಿನ
ಸ್ವಾವಲಂಬನದಿಂದ ಹಳುವನೆ ತುಂಬುವೊಲು ಬೆಳೆವಾಲದ
ತಂಪುನೆಳಲೊಳು ಬಿಡುವಗೊಳ್ಳಲು ಗೊಲ್ಲನೊಲಿವ ತಮಾಲದ

ಕೋಡತುದಿಯೊಳು ಕಾಡನಡುಗಡೆ ಆತ್ಮದನುಭವಸಾರವ
ತುಂಬಿಯಂದದಿ ಮರ್ತ್ಯ ಕೂಡಿಡೆ ಬಯಸಿ ಭದ್ರಾಗಾರವ
ನಿರ್ಮಿಸಿಹ ನೀತೆರದೊಳೆನುವಂತಿರುವ ಗುಡಿಗೋಪುರಗಳ
ಬದುಕಿಗೂರಿದ ಸೊಬಗೆ ಹರಳಾದಂತೆ ಮೆರೆಯುವ ಪುರಗಳ-

ಮೊಲ್ಲೆ ಮಲ್ಲಿಗೆ ಜಾಜಿ ಸಂಪಗೆ ಸುರಗಿ ಪಾದರಿ ಕೇದಗೆ
ಹಲವು ಹೋಲಿಕೆಗಾದ ಪಂಕಜ ಇರವಂತಿ ಸೇವಂತಿಗೆ
ಪಾರಿಜಾತ ಸುಗಂಧರಾಜ ಕದಂಬ ಜಾಲಿಯ ಸೌಸವ
ಆವ ಮಣ್ಣೀತೆರದ ಕಂಪೊಳು ಪ್ರಕಟಿಪುದು ತನ್ನಾತ್ಮವ?

ತಿಣ್ಣಮಲೆಗಾಳಿಯನು ಹೊಗಳಲೆ ತಪ್ಪಲಿನ ಕಮ್ಮೆಲರನು
ಕೆರೆಯ ಚೆಂದಾವರೆಯ ಹೂಗಳ ಹಾಯ್ದು ಬಹ ತಣ್ಣೆಲರನು
ಮಳೆಯ ಮೋಡದಿ ತೂರಿ ಮಿಂಚನು ಕುಣಿಸಿ ಗುಡುಗನು ದನಿಸುತ
ಜವ್ವನಿಗರೆದೆ ಬೆದರೆ ಬರುವಾ ಮುಂಗಾರ ಬೆದೆಗಾಳಿಯ ?

ಮಾಂದಳಿರ ಕೈಯಾಡೆ ಕೋಗಿಲೆ ಕೂಗೆ ದುಂಬಿಯು ಮೊರೆಯಿಡೆ
ಪಚ್ಚೆಗಿಳಿಗಳ ತೊಡವ ತೋರುತ ಗೋಣಿಮರಗಳು ಸಾಲಿಡೆ
ಹಚ್ಚ ಹಸುರಿನ ನಡುವೆ ಬೆಳ್ಳನೆ ದಾರಿ ಪಯಣಕೆ ಹೊರಟಿರೆ
ನನ್ನ ಚಿತ್ತವ ದಾರಿಗನ ಗೈದೆಲ್ಲಿಗೈದಿಸಲೀ ದಿನ?

ನೆಲಮುಗಿಲ ಕನಸುಗಳ ಕೊಳ್ಳುತ ದನಿಯ ದೋಣಿಯೊಳಾಡಿಸಿ
ಎಲರ ಮಲರಿಸುವಂಥ ಹಕ್ಕಿಗಳಿಂಚರವ ನಾನಾಲಿಸಿ
ಭಾವ ಶೃಂಗಾರದೊಳು ಛಂದೋಗತಿಗೆ ನರ್ತಿಸಲೆಳಸುವೀ
ನುಡಿಯ ಲಾಸ್ಯಕೆ ರಂಗವಾವುದ ಸಜ್ಜುಗೊಳಿಸುವೆನೇಪರಿ?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...