Home / ಕವನ / ಕವಿತೆ / ಕಲ್ಲಾಯಿತೆ ಎದೆ

ಕಲ್ಲಾಯಿತೆ ಎದೆ

ಯಾಕೆ ತಾಯಿ ಮುಲುಗುತಿರುವಿ
ಕರುಳ ಬಳ್ಳಿಗಳ ಕತ್ತರಿಸಿ ಚಿಲ್ಲಾಪಿಲ್ಲಿಯಾಗಿಸುತ
ನೀನೇ ನುಂಗಿ ನೀರು ಕುಡಿದರೆ ಹೇಗೆ?
ಸುನಾಮಿ ಜಲಪ್ರಳಯದಲಿ ಅವಿತು
ದೈತ್ಯಾಕಾರದಲಿ ಬಂದು
ಕೈಯಾರೆ ಕೊಚ್ಚಿ ಕೊಚ್ಚಿ ಸದೆಬಡೆದು
ಸದ್ದಡಗಿಸುತಿರುವೆಯಲ್ಲ!

ಇನ್ನೂ ಸಾಕಾಗಲಿಲ್ಲವೆ ತಾಯಿ
ಮತ್ತೆ ಮತ್ತೆ ಗರ್ಜಿಸಿ
ಭೂಕಂಪಿಸುತ ಬುಸುಗುಡುತಿರುವಿ
ಕ್ಷಣ ಮಾತ್ರದಲಿ ನೆಲದಡಿಗೆ ಸೇರಿದ
ನಿನ್ನ ಮಕ್ಕಳ ಆಕ್ರಂದನ ಕೇಳುತಿರುವಿಯಾ
ಯಾಕೆ ಜನನಿ ನಿನ್ನೆದೆ ಕಲ್ಲಾಯಿತು
ಕಿವಿ ಕಿವುಡಾಯಿತು!

ಯುದ್ಧ ಭಯೋತ್ಪಾದನೆಗೆ ಕುಮ್ಮಕ್ಕು
ಕೊಡುವ ರಾಕ್ಷಸ ರಾಜಕೀಯ
ಮಕ್ಕಳ ಕಂಡು ಕೆಂಡವಾದೆಯಾ
ವಿಜ್ಞಾನದೊತ್ತಡಕೆ ಪರಿಸರ ಹಾನಿಗೆ
ಎದೆ ಭಾರವಾಯಿತೆ
ಕಣ್ತುಂಬ ಕೆಂಡದುಂಡೆ ಮೈತುಂಬಾ
ಬೆಂಕಿ ಹೊತ್ತು ತತ್ತರಿಸದಿರು ತಾಯಿ
ಅವರವರ ಕರ್ಮಫಲ ಎನದಿರು ಮತ್ತೆ!

ನೀನೇ ಹಡೆದ ನೂರಾರು ಮಕ್ಕಳಿವರು
ಮುದ್ದಿಸಿ ಸಾಕಿ ಸಲುಹಿ ಆಕಾಶದೆತ್ತರಕೆ ಬೆಳೆಸಿದೆ
ಆದರೊಬ್ಬನೂ ಹತ್ತಿರವಿಲ್ಲ ನಿನ್ನ ಕರುಳಿಗೆ
ಸ್ವಾರ್ಥಿ ಮಕ್ಕಳ ಸಹವಾಸ ಸಾಕಾಯಿತೆ
ಮತ್ತೆ ಮತ್ತೆ ಆಚೆಗೆ ದಬ್ಬುತಲೇ ಇರುವೆ
ಹುಲುಮಾನವರ ಹೆತ್ತಿದ್ದಕ್ಕೆ ಹೊತ್ತಿದ್ದಕ್ಕೆ
ಪಶ್ಚಾತ್ತಾಪ ಪಡುತಿರುವೆಯಾ ತಾಯಿ,
ನಿನ್ನ ಉಡಿ ಸ್ಮಶಾನ ಮಾಡದಿರು
ಕ್ಷಮಿಸು ಜಗಜ್ಜನನಿ ಬಹುರೂಪಿಣಿ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...