Home / ಕವನ / ಕವಿತೆ / ಕಲ್ಲಾಯಿತೆ ಎದೆ

ಕಲ್ಲಾಯಿತೆ ಎದೆ

ಯಾಕೆ ತಾಯಿ ಮುಲುಗುತಿರುವಿ
ಕರುಳ ಬಳ್ಳಿಗಳ ಕತ್ತರಿಸಿ ಚಿಲ್ಲಾಪಿಲ್ಲಿಯಾಗಿಸುತ
ನೀನೇ ನುಂಗಿ ನೀರು ಕುಡಿದರೆ ಹೇಗೆ?
ಸುನಾಮಿ ಜಲಪ್ರಳಯದಲಿ ಅವಿತು
ದೈತ್ಯಾಕಾರದಲಿ ಬಂದು
ಕೈಯಾರೆ ಕೊಚ್ಚಿ ಕೊಚ್ಚಿ ಸದೆಬಡೆದು
ಸದ್ದಡಗಿಸುತಿರುವೆಯಲ್ಲ!

ಇನ್ನೂ ಸಾಕಾಗಲಿಲ್ಲವೆ ತಾಯಿ
ಮತ್ತೆ ಮತ್ತೆ ಗರ್ಜಿಸಿ
ಭೂಕಂಪಿಸುತ ಬುಸುಗುಡುತಿರುವಿ
ಕ್ಷಣ ಮಾತ್ರದಲಿ ನೆಲದಡಿಗೆ ಸೇರಿದ
ನಿನ್ನ ಮಕ್ಕಳ ಆಕ್ರಂದನ ಕೇಳುತಿರುವಿಯಾ
ಯಾಕೆ ಜನನಿ ನಿನ್ನೆದೆ ಕಲ್ಲಾಯಿತು
ಕಿವಿ ಕಿವುಡಾಯಿತು!

ಯುದ್ಧ ಭಯೋತ್ಪಾದನೆಗೆ ಕುಮ್ಮಕ್ಕು
ಕೊಡುವ ರಾಕ್ಷಸ ರಾಜಕೀಯ
ಮಕ್ಕಳ ಕಂಡು ಕೆಂಡವಾದೆಯಾ
ವಿಜ್ಞಾನದೊತ್ತಡಕೆ ಪರಿಸರ ಹಾನಿಗೆ
ಎದೆ ಭಾರವಾಯಿತೆ
ಕಣ್ತುಂಬ ಕೆಂಡದುಂಡೆ ಮೈತುಂಬಾ
ಬೆಂಕಿ ಹೊತ್ತು ತತ್ತರಿಸದಿರು ತಾಯಿ
ಅವರವರ ಕರ್ಮಫಲ ಎನದಿರು ಮತ್ತೆ!

ನೀನೇ ಹಡೆದ ನೂರಾರು ಮಕ್ಕಳಿವರು
ಮುದ್ದಿಸಿ ಸಾಕಿ ಸಲುಹಿ ಆಕಾಶದೆತ್ತರಕೆ ಬೆಳೆಸಿದೆ
ಆದರೊಬ್ಬನೂ ಹತ್ತಿರವಿಲ್ಲ ನಿನ್ನ ಕರುಳಿಗೆ
ಸ್ವಾರ್ಥಿ ಮಕ್ಕಳ ಸಹವಾಸ ಸಾಕಾಯಿತೆ
ಮತ್ತೆ ಮತ್ತೆ ಆಚೆಗೆ ದಬ್ಬುತಲೇ ಇರುವೆ
ಹುಲುಮಾನವರ ಹೆತ್ತಿದ್ದಕ್ಕೆ ಹೊತ್ತಿದ್ದಕ್ಕೆ
ಪಶ್ಚಾತ್ತಾಪ ಪಡುತಿರುವೆಯಾ ತಾಯಿ,
ನಿನ್ನ ಉಡಿ ಸ್ಮಶಾನ ಮಾಡದಿರು
ಕ್ಷಮಿಸು ಜಗಜ್ಜನನಿ ಬಹುರೂಪಿಣಿ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...