ಎಲ್ಲಿ ಪ್ರಿಯಕರ ಹೇಳಿ

ಎಲ್ಲಿ ಪ್ರಿಯಕರ ಹೇಳಿ ಯಾರಾದರೂ
ಬಾರನೇತಕೆ ಬಳಿಗೆ ಕ್ಷಣವಾದರೂ?

ಕದ್ದೊಯ್ದ ನನ್ನೆದೆಯ ಕಣ್ಣಿನಲ್ಲಿ,
ಹಗಲು ಬೆರೆಯಿತು ಘೋರ ಇರುಳಿನಲ್ಲಿ
ಪ್ರೀತಿ ಮಾತೆಂದೂ ತುಟಿ ದಾಟಲಿಲ್ಲ – ನೋಟ
ಒಮ್ಮೆಯೂ ದೀನೆಯನು ಸೋಕಲಿಲ್ಲ
ಏಕೆ ಮಾಡಿದ ಹೀಗೆ ನನ್ನ ಚೆಲುವ
ಹೇಗೆ ತಾಳಿದ ಇಂಥ ಘೋರ ನಿಲುವ?

ಕನಸಿನಲ್ಲೂ ಅವನ ನಗೆ ಕರೆವುದು
ಎದ್ದೆನೋ ನೆನಪುಗಳ ಧಗೆ ಸುಡುವುದು
ಒಲವಿನಾಲಿಂಗನಕೆ ಕಾದೆ ದಿನವೂ
ಅವನಿಗೇಕಿಲ್ಲ ದಯೆ ಒಂದು ಕಣವೂ?
ಇಡಿಯ ಬದುಕೇ ನೋವ ಕಡಲಾಗಿದೆ
ಮಾರುಹೋದುದೆ ನನಗೆ ಮುಳುವಾಗಿದೆ.

ನಿದ್ದೆ ಸುಳಿಯದು ನನ್ನ ಕಣ್ಣ ಬಳಿಗೆ
ಕೊನೆಯೆ ಇಲ್ಲವೆ ಈ ಹೊಲೆರಾತ್ರಿಗೆ?
ನಲ್ಲನಿಲ್ಲದ ಪ್ರಿಯವೆ ಇಲ್ಲ ನನಗೆ
ಅವನ ದನಿ ಹೊರತು ಹಿತವಿಲ್ಲ ಕಿವಿಗೆ
ಹೇಳಿ ಯಾರಾದರೂ ಪ್ರಿಯಕರನಿಗೆ
ಒಮ್ಮೆ ಕರೆಯಲಿ ನನ್ನ ಮನದ ಮನೆಗೆ.
*****

ಪುಸ್ತಕ: ನಿನಗಾಗೇ ಈ ಹಾಡುಗಳು

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಲ್ಲಾಯಿತೆ ಎದೆ
Next post ನಗೆ ಡಂಗುರ – ೯೫

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys