ಕನ್ನಡಿ ಕೊಳವೆ (ಕಲೀಡೋಸ್ಕೋಪ್)

ಕ್ಷಣ ಕ್ಷಣಕೂ ಏರುಬ್ಬರವಾಗಿ
ಭಗ್ನವಾಗುವ ಕನಸುಗಳ ಎಸೆಯದಿರಿ
ತುಂಬು ಕತ್ತಲೆಯ ಹೆಜ್ಜೆಗಳಿಗೆ
ಚುಕ್ಕೆಗಳ ಭರವಸೆಯ ಮಾತುಗಳು
ಗಜಿಬಿಜಿ ಹಾದಿಯಲ್ಲೂ
ಕುರುಡನಿಗೆ ಕೋಲು, ನಿರಾಳ ಉಸಿರು

ಅಂತರಂಗದ ಮಾತುಗಳು
ಮೂಕ ಕುರುಡು ಹೆಳವುಗಳೆಂದು
ನಿರಾಶರಾದರೆ ಹೇಗೆ?
ಮೌನ ಮುರಿದು ಮಾತು ಚಿಗಿತು
ಕಣ್ಣಂಚಿನ ಹನಿಗಳು
ಗಲ್ಲ ಸ್ಪರ್ಶಿಸಿ ಮುಂಗೈಗೆ ಬಿದ್ದದ್ದೇ
ಹೃದಯ ಹಗುರು ಸಂತೃಪ್ತ ಉಸಿರು

ವರ್ತಮಾನ ಭವಿಷ್ಯವೆಲ್ಲಾ
ಅರ್ಥವಿಲ್ಲದ್ದು ಎಂದಿರಾ !
ಹುಷಾರು, ಕಸಕಡ್ಡಿ ಬೆಳೆದು
ಬರಡಾದೀತು ಮನಸು
ಸುಟ್ಟು ಸುಣ್ಣವಾದಾವು ಕನಸುಗಳು,
ಮೇಲೆ ಕಟ್ಟಿಬಿಟ್ಟಾರು ಸಮಾಧಿ-
ನೋಡಿ ಆಕಾಶದಂಗಳ
ತೆರ ತೆರನಾದ ಬೆಳ್ಳಿಮೋಡಗಳ
ಕ್ಷಣ ಕ್ಷಣದ ಸಂತಸ
ಇದ್ದರೆ ಇರಲಿ ಏನಂತೆ ನಡುವೆ
ಕಪ್ಪು ಹಳದಿ ಮೋಡಗಳೂ-
ಕೆನ್ನೆ ಮೇಲಿನ ಗುಳಿಯಂತೆ.

ಬಿಸಿಲು ಬೇಗೆ
ಎಲ್ಲೆಲ್ಲೂ ದಾವಾನಲ, ನೀರಡಿಕೆ
ಎದುರಿಗೆ ಸಮುದ್ರದ ಭೋರ್ಗರೆತ
ಸಮುದ್ರಕ್ಕೆ ಬಾಯಿಹಚ್ಚಿ
ತಣಿಯುವ ತವಕ
ಆದರೆ, ಉಪ್ಪುಪ್ಪು ಜಿಗುಟು ಎಂದರೆ ಹೇಗೆ?
ಇರಲಿ, ಮುಖದ ಮೇಲಾದರೂ
ನೀರು ಚಿಮುಕಿಸಿಕೊಳ್ಳಿ
ಕಡಲಿನಲಿ ಕಾಲಾದರೂ ಎದ್ದಿ
ತಂಪಡರೀತು ಮೈಮನ.

ಬಿಡಿ ಆತ್ಮ ನಿಂದನೆ
ಮನದಾಳದ ಮೌನ, ನಿರಾಶೆ
ಒಂದೊಂದೆ ಒಡಲಾಳಕ್ಕೆ (ಕಲೀಡೋಸ್ಕೋಪ್) ಇಳಿಸಿ.

ಆಹಾ !!
ಎಷ್ಟೊಂದು ಮಾತುಗಳು
ಎಷ್ಟೊಂದು ಚಿತ್ರಗಳು
ಎಷ್ಟೊಂದು ಅರ್ಥಗಳು
ಈ ಮಗ್ಗಲು ಆ ಮಗ್ಗಲು
ಮತ್ತೊಂದು ಮಗ್ಗಲು ಇನ್ನೊಂದು ಮಗ್ಗಲು
ಹಾಗೇ ಮತ್ತೆ ಮತ್ತೆ
ತಡಕಾಟ ಹುಡುಕಾಟ

ಏನಿದು ಸಂಭ್ರಮ
ಬಿರಿದ ನೆಲಕೆ ಮಳೆ ಹನಿಯ ಸ್ಪರ್ಶ
ಮೊಗ್ಗೊಡೆದು ಘಮ್ಮೆನ್ನುವ ಸಮಯ.
*****
ಪುಸ್ತಕ: ಇರುವಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರೆಡ್ಡಿ ಸೋಲಿಲ್ಲ, ಸುಸ್ಮಕ್ಕ ಗೆಲ್ಲಿಲ್ಲ, ವರಮಹಾಲಕ್ಷ್ಮಿ ವರ ನೀಡ್ಲಿಲ್ಲ.
Next post ಎಲ್ಲೆ ಇರು ನಾ ನಿನ್ನ ನೆನೆಯುವೆನು

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys