Home / ಕವನ / ಕವಿತೆ / ಕನ್ನಡಿ ಕೊಳವೆ (ಕಲೀಡೋಸ್ಕೋಪ್)

ಕನ್ನಡಿ ಕೊಳವೆ (ಕಲೀಡೋಸ್ಕೋಪ್)

ಕ್ಷಣ ಕ್ಷಣಕೂ ಏರುಬ್ಬರವಾಗಿ
ಭಗ್ನವಾಗುವ ಕನಸುಗಳ ಎಸೆಯದಿರಿ
ತುಂಬು ಕತ್ತಲೆಯ ಹೆಜ್ಜೆಗಳಿಗೆ
ಚುಕ್ಕೆಗಳ ಭರವಸೆಯ ಮಾತುಗಳು
ಗಜಿಬಿಜಿ ಹಾದಿಯಲ್ಲೂ
ಕುರುಡನಿಗೆ ಕೋಲು, ನಿರಾಳ ಉಸಿರು

ಅಂತರಂಗದ ಮಾತುಗಳು
ಮೂಕ ಕುರುಡು ಹೆಳವುಗಳೆಂದು
ನಿರಾಶರಾದರೆ ಹೇಗೆ?
ಮೌನ ಮುರಿದು ಮಾತು ಚಿಗಿತು
ಕಣ್ಣಂಚಿನ ಹನಿಗಳು
ಗಲ್ಲ ಸ್ಪರ್ಶಿಸಿ ಮುಂಗೈಗೆ ಬಿದ್ದದ್ದೇ
ಹೃದಯ ಹಗುರು ಸಂತೃಪ್ತ ಉಸಿರು

ವರ್ತಮಾನ ಭವಿಷ್ಯವೆಲ್ಲಾ
ಅರ್ಥವಿಲ್ಲದ್ದು ಎಂದಿರಾ !
ಹುಷಾರು, ಕಸಕಡ್ಡಿ ಬೆಳೆದು
ಬರಡಾದೀತು ಮನಸು
ಸುಟ್ಟು ಸುಣ್ಣವಾದಾವು ಕನಸುಗಳು,
ಮೇಲೆ ಕಟ್ಟಿಬಿಟ್ಟಾರು ಸಮಾಧಿ-
ನೋಡಿ ಆಕಾಶದಂಗಳ
ತೆರ ತೆರನಾದ ಬೆಳ್ಳಿಮೋಡಗಳ
ಕ್ಷಣ ಕ್ಷಣದ ಸಂತಸ
ಇದ್ದರೆ ಇರಲಿ ಏನಂತೆ ನಡುವೆ
ಕಪ್ಪು ಹಳದಿ ಮೋಡಗಳೂ-
ಕೆನ್ನೆ ಮೇಲಿನ ಗುಳಿಯಂತೆ.

ಬಿಸಿಲು ಬೇಗೆ
ಎಲ್ಲೆಲ್ಲೂ ದಾವಾನಲ, ನೀರಡಿಕೆ
ಎದುರಿಗೆ ಸಮುದ್ರದ ಭೋರ್ಗರೆತ
ಸಮುದ್ರಕ್ಕೆ ಬಾಯಿಹಚ್ಚಿ
ತಣಿಯುವ ತವಕ
ಆದರೆ, ಉಪ್ಪುಪ್ಪು ಜಿಗುಟು ಎಂದರೆ ಹೇಗೆ?
ಇರಲಿ, ಮುಖದ ಮೇಲಾದರೂ
ನೀರು ಚಿಮುಕಿಸಿಕೊಳ್ಳಿ
ಕಡಲಿನಲಿ ಕಾಲಾದರೂ ಎದ್ದಿ
ತಂಪಡರೀತು ಮೈಮನ.

ಬಿಡಿ ಆತ್ಮ ನಿಂದನೆ
ಮನದಾಳದ ಮೌನ, ನಿರಾಶೆ
ಒಂದೊಂದೆ ಒಡಲಾಳಕ್ಕೆ (ಕಲೀಡೋಸ್ಕೋಪ್) ಇಳಿಸಿ.

ಆಹಾ !!
ಎಷ್ಟೊಂದು ಮಾತುಗಳು
ಎಷ್ಟೊಂದು ಚಿತ್ರಗಳು
ಎಷ್ಟೊಂದು ಅರ್ಥಗಳು
ಈ ಮಗ್ಗಲು ಆ ಮಗ್ಗಲು
ಮತ್ತೊಂದು ಮಗ್ಗಲು ಇನ್ನೊಂದು ಮಗ್ಗಲು
ಹಾಗೇ ಮತ್ತೆ ಮತ್ತೆ
ತಡಕಾಟ ಹುಡುಕಾಟ

ಏನಿದು ಸಂಭ್ರಮ
ಬಿರಿದ ನೆಲಕೆ ಮಳೆ ಹನಿಯ ಸ್ಪರ್ಶ
ಮೊಗ್ಗೊಡೆದು ಘಮ್ಮೆನ್ನುವ ಸಮಯ.
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...