Home / ಕವನ / ಕವಿತೆ / ಕನ್ನಡಿ ಕೊಳವೆ (ಕಲೀಡೋಸ್ಕೋಪ್)

ಕನ್ನಡಿ ಕೊಳವೆ (ಕಲೀಡೋಸ್ಕೋಪ್)

ಕ್ಷಣ ಕ್ಷಣಕೂ ಏರುಬ್ಬರವಾಗಿ
ಭಗ್ನವಾಗುವ ಕನಸುಗಳ ಎಸೆಯದಿರಿ
ತುಂಬು ಕತ್ತಲೆಯ ಹೆಜ್ಜೆಗಳಿಗೆ
ಚುಕ್ಕೆಗಳ ಭರವಸೆಯ ಮಾತುಗಳು
ಗಜಿಬಿಜಿ ಹಾದಿಯಲ್ಲೂ
ಕುರುಡನಿಗೆ ಕೋಲು, ನಿರಾಳ ಉಸಿರು

ಅಂತರಂಗದ ಮಾತುಗಳು
ಮೂಕ ಕುರುಡು ಹೆಳವುಗಳೆಂದು
ನಿರಾಶರಾದರೆ ಹೇಗೆ?
ಮೌನ ಮುರಿದು ಮಾತು ಚಿಗಿತು
ಕಣ್ಣಂಚಿನ ಹನಿಗಳು
ಗಲ್ಲ ಸ್ಪರ್ಶಿಸಿ ಮುಂಗೈಗೆ ಬಿದ್ದದ್ದೇ
ಹೃದಯ ಹಗುರು ಸಂತೃಪ್ತ ಉಸಿರು

ವರ್ತಮಾನ ಭವಿಷ್ಯವೆಲ್ಲಾ
ಅರ್ಥವಿಲ್ಲದ್ದು ಎಂದಿರಾ !
ಹುಷಾರು, ಕಸಕಡ್ಡಿ ಬೆಳೆದು
ಬರಡಾದೀತು ಮನಸು
ಸುಟ್ಟು ಸುಣ್ಣವಾದಾವು ಕನಸುಗಳು,
ಮೇಲೆ ಕಟ್ಟಿಬಿಟ್ಟಾರು ಸಮಾಧಿ-
ನೋಡಿ ಆಕಾಶದಂಗಳ
ತೆರ ತೆರನಾದ ಬೆಳ್ಳಿಮೋಡಗಳ
ಕ್ಷಣ ಕ್ಷಣದ ಸಂತಸ
ಇದ್ದರೆ ಇರಲಿ ಏನಂತೆ ನಡುವೆ
ಕಪ್ಪು ಹಳದಿ ಮೋಡಗಳೂ-
ಕೆನ್ನೆ ಮೇಲಿನ ಗುಳಿಯಂತೆ.

ಬಿಸಿಲು ಬೇಗೆ
ಎಲ್ಲೆಲ್ಲೂ ದಾವಾನಲ, ನೀರಡಿಕೆ
ಎದುರಿಗೆ ಸಮುದ್ರದ ಭೋರ್ಗರೆತ
ಸಮುದ್ರಕ್ಕೆ ಬಾಯಿಹಚ್ಚಿ
ತಣಿಯುವ ತವಕ
ಆದರೆ, ಉಪ್ಪುಪ್ಪು ಜಿಗುಟು ಎಂದರೆ ಹೇಗೆ?
ಇರಲಿ, ಮುಖದ ಮೇಲಾದರೂ
ನೀರು ಚಿಮುಕಿಸಿಕೊಳ್ಳಿ
ಕಡಲಿನಲಿ ಕಾಲಾದರೂ ಎದ್ದಿ
ತಂಪಡರೀತು ಮೈಮನ.

ಬಿಡಿ ಆತ್ಮ ನಿಂದನೆ
ಮನದಾಳದ ಮೌನ, ನಿರಾಶೆ
ಒಂದೊಂದೆ ಒಡಲಾಳಕ್ಕೆ (ಕಲೀಡೋಸ್ಕೋಪ್) ಇಳಿಸಿ.

ಆಹಾ !!
ಎಷ್ಟೊಂದು ಮಾತುಗಳು
ಎಷ್ಟೊಂದು ಚಿತ್ರಗಳು
ಎಷ್ಟೊಂದು ಅರ್ಥಗಳು
ಈ ಮಗ್ಗಲು ಆ ಮಗ್ಗಲು
ಮತ್ತೊಂದು ಮಗ್ಗಲು ಇನ್ನೊಂದು ಮಗ್ಗಲು
ಹಾಗೇ ಮತ್ತೆ ಮತ್ತೆ
ತಡಕಾಟ ಹುಡುಕಾಟ

ಏನಿದು ಸಂಭ್ರಮ
ಬಿರಿದ ನೆಲಕೆ ಮಳೆ ಹನಿಯ ಸ್ಪರ್ಶ
ಮೊಗ್ಗೊಡೆದು ಘಮ್ಮೆನ್ನುವ ಸಮಯ.
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...