Home / ಕವನ / ಕವಿತೆ / ಅಸ್ಮಿತೆ

ಅಸ್ಮಿತೆ

ಬ್ರೆಡ್‌ಗೆ ಚೀಸ್ ಹಚ್ಚಿ ತಿನ್ನುವಾಗ
ಪಿಝಾಹಟ್‌ದಲ್ಲಿ ಕುಳಿತಾಗ
ಸ್ಟಾರ್ ಹೋಟೆಲಿನ ಮಂದ ಬೆಳಕಿನ ಜಾಝ್‌ದಲ್ಲಿ
ಶಾಪಿಂಗ್ ಮಳಿಗೆಯಲ್ಲಿ ಏ/ಸಿ ಕಾರಿನಲ್ಲಿ
ಇರುವಾಗಲೂ ಇಲ್ಲಿ
ಎಲ್ಲರೆದೆಯಲಿ ಹಕ್ಕಿಗಳೇನೇನೋ
ಮಾತಾಡುತ್ತವೆ.

ಏನೆಲ್ಲ ಐಶಾರಾಮಿ ಬದುಕು ವಿದೇಶಗಳಲಿ
ಆದರೂ ಮನಸು ಮನಸುಗಳಿಗೇಕೋ
ಒಂಟಿತನ ಆತಂಕ
ಕಳೆದು ಹೋಗುವ ಭಯ ತಲ್ಲಣ
ಇದ್ದಕ್ಕಿದ್ದಂತೆ ಒಮ್ಮೊಮ್ಮೆ ಮರಳಿ
ಊರಿಗೆ ಹೊರಟೇ ಬಿಡಬೇಕೆನ್ನುವ
ಉಮ್ಮಳ ಕೊನೆಗೆ
ನಮ್ಮ ನಾವೇ ಸಮಾಧಾನಿಸಿಕೊಳ್ಳುವ
ಸಂತೈಯಿಸಿಕೊಳ್ಳುವ ಎಲ್ಲದರ ಲೆಕ್ಖಾಚಾರ
ಸಮೃದ್ಧಿಯ ನಡುವೆಯೂ ಒಮ್ಮೊಮ್ಮೆ
ಮನಸು ಭಾರ ಮರುಭೂಮಿ.

ಹಬ್ಬ ಜಾತ್ರೆಗಳ ವಿಶೇಷತೆಗಳು
ಮದುವೆ ಗೃಹಪ್ರವೇಶಗಳ ಸಂಭ್ರಮ
ಸಂಬಂಧಿಕರ ಭೇಟಿ ಮಾತು – ಹರಟೆ
ತುಂಟ ಹುಡುಗರ ತುಂಟಾಟಗಳನೆಲ್ಲ ಹೊತ್ತ
ಅಂಚೆ ಪತ್ರಗಳು ಬರುತ್ತವೆ
ಮನಸು ಬೆಚ್ಚಗಾಗಿ ಕಣ್ಣು ಮಂಜಾಗುವುದು
ಎಲ್ಲದಕೂ ಸ್ಪರ್ಧೆ ಬಿಳಿಯರೊಂದಿಗೆ
ಆಫೀಸು ಶಾಲೆ ಕಾಲೇಜು ಎಲ್ಲೆಲ್ಲೂ-
ದೂರ ದೂರ ಇರಬೇಡಿ ದೇಶಬಿಟ್ಟು ಬಂದವರಿಲ್ಲಿ
ಜಾತಿ ಮತ ಭಾಷೆ ಯಾವುದಾದರೇನು
ಭಾರತೀಯರಲ್ಲವೇ ನೀವೆಲ್ಲ
ನಿಮ್ಮತನಕಾಗಿ ಒಗ್ಗೂಡಿ
ಹಕ್ಕಿಗಳೆಲ್ಲರೆದೆಯೊಳಗೆ ಗರಿಬಿಚ್ಚುತ್ತವೆ.

ಈಗ ವಾರಾಂತ್ಯದ ಪಾರ್ಟಿ, ಹಬ್ಬಗಳಿಗೆ
ಹಪಹಪಿಸುತ್ತೇವೆ.
ಕೊಳಲು, ಸಿತಾರ್, ಮೃದಂಗದವರು
ಜೋಕ್ಸ್, ಡಾನ್ಸ್, ಶಾಯರಿಯವರು
ದಸರಾ, ದೀಪಾವಳಿ ಪ್ರಿಯರು
ರೇಶ್ಮೆ ಸೀರೆ ಉಟ್ಟು ನಮಸ್ಕರಿಸುವವರು
ರಾಜಕೀಯ, ಇತಿಹಾಸ, ವಿಜ್ಞಾನ ತಂತ್ರಜ್ಞಾನಗಳ
ಚರ್ಚಿಸುವವರು ಎಲ್ಲ ಸೇರುತ್ತೇವೆ
ವಿದೇಶಿಗರನ್ನು ಆಹ್ವಾನಿಸಿ
ಸಂಸ್ಕೃತಿ, ಸಾಧನೆ ಬಿಂಬಿಸುತ್ತಿದ್ದಂತೆ
ಫೋಟೋಗಳು ಕ್ಲಿಕ್ ಆಗುತ್ತವೆ
ನಮ್ಮ ಐಡೆಂಟಿಟಿಗೆ ನಮಗೆ ಹೆಮ್ಮೆ
ಇನ್ನಷ್ಟೂ ವರ್ಷ ಇರಬೇಕೆನಿಸುತ್ತದೆ.
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...