ಅಸ್ಮಿತೆ

ಬ್ರೆಡ್‌ಗೆ ಚೀಸ್ ಹಚ್ಚಿ ತಿನ್ನುವಾಗ
ಪಿಝಾಹಟ್‌ದಲ್ಲಿ ಕುಳಿತಾಗ
ಸ್ಟಾರ್ ಹೋಟೆಲಿನ ಮಂದ ಬೆಳಕಿನ ಜಾಝ್‌ದಲ್ಲಿ
ಶಾಪಿಂಗ್ ಮಳಿಗೆಯಲ್ಲಿ ಏ/ಸಿ ಕಾರಿನಲ್ಲಿ
ಇರುವಾಗಲೂ ಇಲ್ಲಿ
ಎಲ್ಲರೆದೆಯಲಿ ಹಕ್ಕಿಗಳೇನೇನೋ
ಮಾತಾಡುತ್ತವೆ.

ಏನೆಲ್ಲ ಐಶಾರಾಮಿ ಬದುಕು ವಿದೇಶಗಳಲಿ
ಆದರೂ ಮನಸು ಮನಸುಗಳಿಗೇಕೋ
ಒಂಟಿತನ ಆತಂಕ
ಕಳೆದು ಹೋಗುವ ಭಯ ತಲ್ಲಣ
ಇದ್ದಕ್ಕಿದ್ದಂತೆ ಒಮ್ಮೊಮ್ಮೆ ಮರಳಿ
ಊರಿಗೆ ಹೊರಟೇ ಬಿಡಬೇಕೆನ್ನುವ
ಉಮ್ಮಳ ಕೊನೆಗೆ
ನಮ್ಮ ನಾವೇ ಸಮಾಧಾನಿಸಿಕೊಳ್ಳುವ
ಸಂತೈಯಿಸಿಕೊಳ್ಳುವ ಎಲ್ಲದರ ಲೆಕ್ಖಾಚಾರ
ಸಮೃದ್ಧಿಯ ನಡುವೆಯೂ ಒಮ್ಮೊಮ್ಮೆ
ಮನಸು ಭಾರ ಮರುಭೂಮಿ.

ಹಬ್ಬ ಜಾತ್ರೆಗಳ ವಿಶೇಷತೆಗಳು
ಮದುವೆ ಗೃಹಪ್ರವೇಶಗಳ ಸಂಭ್ರಮ
ಸಂಬಂಧಿಕರ ಭೇಟಿ ಮಾತು – ಹರಟೆ
ತುಂಟ ಹುಡುಗರ ತುಂಟಾಟಗಳನೆಲ್ಲ ಹೊತ್ತ
ಅಂಚೆ ಪತ್ರಗಳು ಬರುತ್ತವೆ
ಮನಸು ಬೆಚ್ಚಗಾಗಿ ಕಣ್ಣು ಮಂಜಾಗುವುದು
ಎಲ್ಲದಕೂ ಸ್ಪರ್ಧೆ ಬಿಳಿಯರೊಂದಿಗೆ
ಆಫೀಸು ಶಾಲೆ ಕಾಲೇಜು ಎಲ್ಲೆಲ್ಲೂ-
ದೂರ ದೂರ ಇರಬೇಡಿ ದೇಶಬಿಟ್ಟು ಬಂದವರಿಲ್ಲಿ
ಜಾತಿ ಮತ ಭಾಷೆ ಯಾವುದಾದರೇನು
ಭಾರತೀಯರಲ್ಲವೇ ನೀವೆಲ್ಲ
ನಿಮ್ಮತನಕಾಗಿ ಒಗ್ಗೂಡಿ
ಹಕ್ಕಿಗಳೆಲ್ಲರೆದೆಯೊಳಗೆ ಗರಿಬಿಚ್ಚುತ್ತವೆ.

ಈಗ ವಾರಾಂತ್ಯದ ಪಾರ್ಟಿ, ಹಬ್ಬಗಳಿಗೆ
ಹಪಹಪಿಸುತ್ತೇವೆ.
ಕೊಳಲು, ಸಿತಾರ್, ಮೃದಂಗದವರು
ಜೋಕ್ಸ್, ಡಾನ್ಸ್, ಶಾಯರಿಯವರು
ದಸರಾ, ದೀಪಾವಳಿ ಪ್ರಿಯರು
ರೇಶ್ಮೆ ಸೀರೆ ಉಟ್ಟು ನಮಸ್ಕರಿಸುವವರು
ರಾಜಕೀಯ, ಇತಿಹಾಸ, ವಿಜ್ಞಾನ ತಂತ್ರಜ್ಞಾನಗಳ
ಚರ್ಚಿಸುವವರು ಎಲ್ಲ ಸೇರುತ್ತೇವೆ
ವಿದೇಶಿಗರನ್ನು ಆಹ್ವಾನಿಸಿ
ಸಂಸ್ಕೃತಿ, ಸಾಧನೆ ಬಿಂಬಿಸುತ್ತಿದ್ದಂತೆ
ಫೋಟೋಗಳು ಕ್ಲಿಕ್ ಆಗುತ್ತವೆ
ನಮ್ಮ ಐಡೆಂಟಿಟಿಗೆ ನಮಗೆ ಹೆಮ್ಮೆ
ಇನ್ನಷ್ಟೂ ವರ್ಷ ಇರಬೇಕೆನಿಸುತ್ತದೆ.
*****
ಪುಸ್ತಕ: ಇರುವಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಶ್ಲೀಲ ಅಂಬೋದು ಡ್ರೆಸ್‍ನಾಗಲ್ಲ ಇರೋದು
Next post ಎಲ್ಲಿದ್ದರೂ ನಾನು ನಿನ್ನದೇ ಧ್ಯಾನ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

cheap jordans|wholesale air max|wholesale jordans|wholesale jewelry|wholesale jerseys