ಅಸ್ಮಿತೆ

ಬ್ರೆಡ್‌ಗೆ ಚೀಸ್ ಹಚ್ಚಿ ತಿನ್ನುವಾಗ
ಪಿಝಾಹಟ್‌ದಲ್ಲಿ ಕುಳಿತಾಗ
ಸ್ಟಾರ್ ಹೋಟೆಲಿನ ಮಂದ ಬೆಳಕಿನ ಜಾಝ್‌ದಲ್ಲಿ
ಶಾಪಿಂಗ್ ಮಳಿಗೆಯಲ್ಲಿ ಏ/ಸಿ ಕಾರಿನಲ್ಲಿ
ಇರುವಾಗಲೂ ಇಲ್ಲಿ
ಎಲ್ಲರೆದೆಯಲಿ ಹಕ್ಕಿಗಳೇನೇನೋ
ಮಾತಾಡುತ್ತವೆ.

ಏನೆಲ್ಲ ಐಶಾರಾಮಿ ಬದುಕು ವಿದೇಶಗಳಲಿ
ಆದರೂ ಮನಸು ಮನಸುಗಳಿಗೇಕೋ
ಒಂಟಿತನ ಆತಂಕ
ಕಳೆದು ಹೋಗುವ ಭಯ ತಲ್ಲಣ
ಇದ್ದಕ್ಕಿದ್ದಂತೆ ಒಮ್ಮೊಮ್ಮೆ ಮರಳಿ
ಊರಿಗೆ ಹೊರಟೇ ಬಿಡಬೇಕೆನ್ನುವ
ಉಮ್ಮಳ ಕೊನೆಗೆ
ನಮ್ಮ ನಾವೇ ಸಮಾಧಾನಿಸಿಕೊಳ್ಳುವ
ಸಂತೈಯಿಸಿಕೊಳ್ಳುವ ಎಲ್ಲದರ ಲೆಕ್ಖಾಚಾರ
ಸಮೃದ್ಧಿಯ ನಡುವೆಯೂ ಒಮ್ಮೊಮ್ಮೆ
ಮನಸು ಭಾರ ಮರುಭೂಮಿ.

ಹಬ್ಬ ಜಾತ್ರೆಗಳ ವಿಶೇಷತೆಗಳು
ಮದುವೆ ಗೃಹಪ್ರವೇಶಗಳ ಸಂಭ್ರಮ
ಸಂಬಂಧಿಕರ ಭೇಟಿ ಮಾತು – ಹರಟೆ
ತುಂಟ ಹುಡುಗರ ತುಂಟಾಟಗಳನೆಲ್ಲ ಹೊತ್ತ
ಅಂಚೆ ಪತ್ರಗಳು ಬರುತ್ತವೆ
ಮನಸು ಬೆಚ್ಚಗಾಗಿ ಕಣ್ಣು ಮಂಜಾಗುವುದು
ಎಲ್ಲದಕೂ ಸ್ಪರ್ಧೆ ಬಿಳಿಯರೊಂದಿಗೆ
ಆಫೀಸು ಶಾಲೆ ಕಾಲೇಜು ಎಲ್ಲೆಲ್ಲೂ-
ದೂರ ದೂರ ಇರಬೇಡಿ ದೇಶಬಿಟ್ಟು ಬಂದವರಿಲ್ಲಿ
ಜಾತಿ ಮತ ಭಾಷೆ ಯಾವುದಾದರೇನು
ಭಾರತೀಯರಲ್ಲವೇ ನೀವೆಲ್ಲ
ನಿಮ್ಮತನಕಾಗಿ ಒಗ್ಗೂಡಿ
ಹಕ್ಕಿಗಳೆಲ್ಲರೆದೆಯೊಳಗೆ ಗರಿಬಿಚ್ಚುತ್ತವೆ.

ಈಗ ವಾರಾಂತ್ಯದ ಪಾರ್ಟಿ, ಹಬ್ಬಗಳಿಗೆ
ಹಪಹಪಿಸುತ್ತೇವೆ.
ಕೊಳಲು, ಸಿತಾರ್, ಮೃದಂಗದವರು
ಜೋಕ್ಸ್, ಡಾನ್ಸ್, ಶಾಯರಿಯವರು
ದಸರಾ, ದೀಪಾವಳಿ ಪ್ರಿಯರು
ರೇಶ್ಮೆ ಸೀರೆ ಉಟ್ಟು ನಮಸ್ಕರಿಸುವವರು
ರಾಜಕೀಯ, ಇತಿಹಾಸ, ವಿಜ್ಞಾನ ತಂತ್ರಜ್ಞಾನಗಳ
ಚರ್ಚಿಸುವವರು ಎಲ್ಲ ಸೇರುತ್ತೇವೆ
ವಿದೇಶಿಗರನ್ನು ಆಹ್ವಾನಿಸಿ
ಸಂಸ್ಕೃತಿ, ಸಾಧನೆ ಬಿಂಬಿಸುತ್ತಿದ್ದಂತೆ
ಫೋಟೋಗಳು ಕ್ಲಿಕ್ ಆಗುತ್ತವೆ
ನಮ್ಮ ಐಡೆಂಟಿಟಿಗೆ ನಮಗೆ ಹೆಮ್ಮೆ
ಇನ್ನಷ್ಟೂ ವರ್ಷ ಇರಬೇಕೆನಿಸುತ್ತದೆ.
*****
ಪುಸ್ತಕ: ಇರುವಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಶ್ಲೀಲ ಅಂಬೋದು ಡ್ರೆಸ್‍ನಾಗಲ್ಲ ಇರೋದು
Next post ಎಲ್ಲಿದ್ದರೂ ನಾನು ನಿನ್ನದೇ ಧ್ಯಾನ

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…