Home / ಕವನ / ಕವಿತೆ / ಅಸ್ಮಿತೆ

ಅಸ್ಮಿತೆ

ಬ್ರೆಡ್‌ಗೆ ಚೀಸ್ ಹಚ್ಚಿ ತಿನ್ನುವಾಗ
ಪಿಝಾಹಟ್‌ದಲ್ಲಿ ಕುಳಿತಾಗ
ಸ್ಟಾರ್ ಹೋಟೆಲಿನ ಮಂದ ಬೆಳಕಿನ ಜಾಝ್‌ದಲ್ಲಿ
ಶಾಪಿಂಗ್ ಮಳಿಗೆಯಲ್ಲಿ ಏ/ಸಿ ಕಾರಿನಲ್ಲಿ
ಇರುವಾಗಲೂ ಇಲ್ಲಿ
ಎಲ್ಲರೆದೆಯಲಿ ಹಕ್ಕಿಗಳೇನೇನೋ
ಮಾತಾಡುತ್ತವೆ.

ಏನೆಲ್ಲ ಐಶಾರಾಮಿ ಬದುಕು ವಿದೇಶಗಳಲಿ
ಆದರೂ ಮನಸು ಮನಸುಗಳಿಗೇಕೋ
ಒಂಟಿತನ ಆತಂಕ
ಕಳೆದು ಹೋಗುವ ಭಯ ತಲ್ಲಣ
ಇದ್ದಕ್ಕಿದ್ದಂತೆ ಒಮ್ಮೊಮ್ಮೆ ಮರಳಿ
ಊರಿಗೆ ಹೊರಟೇ ಬಿಡಬೇಕೆನ್ನುವ
ಉಮ್ಮಳ ಕೊನೆಗೆ
ನಮ್ಮ ನಾವೇ ಸಮಾಧಾನಿಸಿಕೊಳ್ಳುವ
ಸಂತೈಯಿಸಿಕೊಳ್ಳುವ ಎಲ್ಲದರ ಲೆಕ್ಖಾಚಾರ
ಸಮೃದ್ಧಿಯ ನಡುವೆಯೂ ಒಮ್ಮೊಮ್ಮೆ
ಮನಸು ಭಾರ ಮರುಭೂಮಿ.

ಹಬ್ಬ ಜಾತ್ರೆಗಳ ವಿಶೇಷತೆಗಳು
ಮದುವೆ ಗೃಹಪ್ರವೇಶಗಳ ಸಂಭ್ರಮ
ಸಂಬಂಧಿಕರ ಭೇಟಿ ಮಾತು – ಹರಟೆ
ತುಂಟ ಹುಡುಗರ ತುಂಟಾಟಗಳನೆಲ್ಲ ಹೊತ್ತ
ಅಂಚೆ ಪತ್ರಗಳು ಬರುತ್ತವೆ
ಮನಸು ಬೆಚ್ಚಗಾಗಿ ಕಣ್ಣು ಮಂಜಾಗುವುದು
ಎಲ್ಲದಕೂ ಸ್ಪರ್ಧೆ ಬಿಳಿಯರೊಂದಿಗೆ
ಆಫೀಸು ಶಾಲೆ ಕಾಲೇಜು ಎಲ್ಲೆಲ್ಲೂ-
ದೂರ ದೂರ ಇರಬೇಡಿ ದೇಶಬಿಟ್ಟು ಬಂದವರಿಲ್ಲಿ
ಜಾತಿ ಮತ ಭಾಷೆ ಯಾವುದಾದರೇನು
ಭಾರತೀಯರಲ್ಲವೇ ನೀವೆಲ್ಲ
ನಿಮ್ಮತನಕಾಗಿ ಒಗ್ಗೂಡಿ
ಹಕ್ಕಿಗಳೆಲ್ಲರೆದೆಯೊಳಗೆ ಗರಿಬಿಚ್ಚುತ್ತವೆ.

ಈಗ ವಾರಾಂತ್ಯದ ಪಾರ್ಟಿ, ಹಬ್ಬಗಳಿಗೆ
ಹಪಹಪಿಸುತ್ತೇವೆ.
ಕೊಳಲು, ಸಿತಾರ್, ಮೃದಂಗದವರು
ಜೋಕ್ಸ್, ಡಾನ್ಸ್, ಶಾಯರಿಯವರು
ದಸರಾ, ದೀಪಾವಳಿ ಪ್ರಿಯರು
ರೇಶ್ಮೆ ಸೀರೆ ಉಟ್ಟು ನಮಸ್ಕರಿಸುವವರು
ರಾಜಕೀಯ, ಇತಿಹಾಸ, ವಿಜ್ಞಾನ ತಂತ್ರಜ್ಞಾನಗಳ
ಚರ್ಚಿಸುವವರು ಎಲ್ಲ ಸೇರುತ್ತೇವೆ
ವಿದೇಶಿಗರನ್ನು ಆಹ್ವಾನಿಸಿ
ಸಂಸ್ಕೃತಿ, ಸಾಧನೆ ಬಿಂಬಿಸುತ್ತಿದ್ದಂತೆ
ಫೋಟೋಗಳು ಕ್ಲಿಕ್ ಆಗುತ್ತವೆ
ನಮ್ಮ ಐಡೆಂಟಿಟಿಗೆ ನಮಗೆ ಹೆಮ್ಮೆ
ಇನ್ನಷ್ಟೂ ವರ್ಷ ಇರಬೇಕೆನಿಸುತ್ತದೆ.
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...