Home / ಕವನ / ಕವಿತೆ / ಕಿತ್ತೂರು

ಕಿತ್ತೂರು

ಕಾಡಾನೆ ಕಾಡಯ್ಯ, ಬ್ಯಾಡರ ಬೀಡಯ್ಯ
ನಾಡಾಗಿ ಮಾಡಿ ಮಲ್ಲಣ್ಣ, ಕಿತ್ತೂರ
ಗೂಡೀಗೆ ಗುಡಿಯ ನೇರಿಸಿದೊ  ೧
ಬಣಜೀಗ ಮಲ್ಲಣ್ಣ, ಜನದಾಗ ಕಣಿಯಾದ
ಕುಣಿಸಿ ಲಕ್ಕಸಮಿ ನಾಡಾಗ | ಕಿತ್ತೂರ
ಕಣಜಾತು ಮುತ್ತು ಮಾಣಿಕದ  ೨
ಕಿತ್ತೂರ ಕಡೆಯರಸು, ಮುತ್ತು ಮಾಣಿಕದೊಡೆಯ
ದತ್ತಕಽ ಮಗಽ ಮಲಸಜ್ಜೊ | ಸಮಸೂರ
ಸತ್ತ ಕಿತ್ತೂರ ಮುಟ್ಟುದಕೊ  ೩
ಹಾಲಗುಂಬಳ ಬಳ್ಳಿ, ಹಾದೀಗೆ ಹಬ್ಬ್ಯಾವ
ಹಾರೂರಿಗೆ ಬಂತೊ ದೌವಲತ್ತೊ | ಕಿತ್ತೂರ
ಮಲಸರ್ಜ್ಗ ಬಂತೊ ವನದೇಶೋ  ೪
ಸೊಗಲಂಬು ಊರಿಲ್ಲ, ಸಮುದರಕ ನೆಲೆಯಿಲ್ಲ
ಜ್ಯಾತ ಮುತ್ತಿಽಗೆ ಬೆಲೆಯಿಲ್ಲ | ಕಿತ್ತೂರ
ಮಲಸರ್ಜನಂಥ ದೊರೆಯಿಲ್ಲ  ೫
ರಂಗ ಕಿತ್ತೂರ ಮಾಲ, ಹೊಕ್ಕು ನೋಡುಣ ಬಾರ
ಮಾಲ ಮಾಲೆಲ್ಲ ಕನ್ನಡಿ | ಮಲಸರ್ಜ
ಮಾಲ ಕಟ್ಟಿಸಿ ಇರಲಿಲ್ಲೊ  ೬
ಕಿತ್ತೂರ ನೀಮಾಲ, ಮತ್ತ್ಯಾರ ಕಟ್ಟಿಸ್ಯಾರ
ಮಕ್ಕಳ ತಂದಿ ಮಲಸರ್ಜ | ನಿಮ್ಮಾಲ
ಹೊಕ್ಕ ನೋಡ್ಯಾರ ಹೊಲಿಯಾರ  ೭
ಕಿತ್ತೂರ ಮಲಸಜ್ಜ, ಕಿಚ್ಚ ಕಂಜವನಲ್ಲ
ದತ್ತಗೇಡೊಬ್ಬ ಮಗ ಹುಟ್ಟಿ | ಕಳೆದಾನೊ
ಹತ್ತ ತಲಿಗಂಡ ವತನಾವ  ೮
ಕಿತ್ತೂರ ಮಲಸಜ್ಜ, ಯಾರಿಗಂಜವನಲ್ಲ
ಪಚ್ಛೇದ ಕಣ್ಣ ತಿರವೂತ | ಮಲಸರ್ಜ
ತಕೊಂಡೆನೆಂದ ಹುದಲಿಽಯ  ೯
ಶಿವಲಿಂಗ ರುದ್ರನಿಗೆ, ಸಾವುಕೂಡಲೆ ಬಂತು
ಜೀವ ಕಸವೀಸಿ ಚೆನ್ನವ್ವಗೊ | ಹಾರೂರು
ಹಾವಾಗಿ ಮನೆಗೆ ವಿಷ ಬಿಟ್ಟೊ  ೧೦
ಮಡದೇರಿಬ್ಬರು, ಸಿಡಿದು ಕಡದಾಡಿ ಒಡಕ್ಹುಟ್ಟಿ
ತಡಮಾಡ್ದೆ ದತ್ತಕ ತಗೊಂಡು | ಚೆನ್ನಮ್ಮ
ಒಡತ್ಯಾಗಿ ನಾಡ ಆಳ್ಯಾಳೊ  ೧೧
ಹಾಲಿನಂಥ ಕಿತ್ತೂರ್ಗೆ, ಹನ್ನೆರಡು ಕೀಲಗಸಿ
ಸುತ್ತ ಸುತ್ತೆಲ್ಲ ಕಿರಿಜಿಡ್ಡಿ | ಈರಪನ
ಕಿತ್ತೂರಿಗೆ ತಂದು ಇಳುವ್ಯಾರೊ  ೧೨
ಕಂದವ್ನ ಹಡಿಲಿಲ್ಲ, ಕೈ ಬೀಸಿ ನಡೆಲಿಲ್ಲ
ಗಂಡನ ಪುಣ್ಯ ಉಣಲಿಲ್ಲ | ಈರವ್ವ
ರಂಡಿತನ ನಿನಗ ಮೂಲಾತೊ  ೧೩
ಕನ್ನೂರ ಮಲ್ಲಗ, ತನ್ನಿ ಬ್ಯಾನ್ಹತ್ತಲಿ
ಚೆನ್ನಮನ ರಾಜ್ಯ ನುಂಗಾಕೊ | ಥಾಕರೆಗ
ಗುನ್ನೆ ಮಾಡುದಕ ಪುಸಲಿಟ್ಟೊ  ೧೪
ಕಲ್ಲೂರ ಮಲ್ಲಗ, ಎಲ್ಲಾರು ಒಡೆಯಽಲಿ
ಗುಲ್ಲಾಗಂಟೇರು ಉಗಳಽಲಿ | ಥಾಕರೆಗೆ
ಸಲ್ಲಾ ಕೊಟ್ಟಾನೊ ಮುತ್ತಾಕೊ  ೧೫
ಧಾರ್ವಾಡ ವೆಂಕಾಟಿ, ದಾರೆಳಿಲೆ ಸಿರಕೊಯ್ದ
ಕಾರಭಾರಿಗಳು ಕಿವಿಗೊಟ್ಟು | ಕಿತ್ತೂರು
ಚೂರು ಚೂರಾತೊ ಕದನಾತೊ  ೧೬
ಕಿತ್ತೂರ ಚೆನ್ನಮ್ಮ, ಸುತ್ತೂರ ಒಡತ್ಯಾಗಿ
ಕತ್ತಿ ಕವಚಗಳ ಉಡವುಟ್ಟೊ | ಅಬ್ಬರದಿ
ಬತ್ತಲಗುದರೀಯ ಜಿಗದೇರೊ  ೧೭
ಗಂಡನ್ನ ಕಳಕೊಂಡು, ಬೆಂಡಾದ ಚೆನ್ನಮ್ಮ
ಗಂಡಾಗಿ ರಣಕ ಇಳಿದಾಳೊ | ನಾಡನ್ನ
ವುಂಡ ಬಂಡಾಯ ಹಿಂಡಾಕೊ  ೧೮
ಧಾರವಾಡದ ದಂಡು, ವಾರ್ಯಾಗ ಬರುತಿರಲು
ಏರೀಯ ಹತ್ತಿ ಸುರಿಸ್ಯಾರೊ | ಕಿತ್ತೂರ
ವೀರರೊಗೆದಾರೊ ಗುಂಡೀರೊ  ೧೯
ಕೆಂಪು ಮೋರೆಯ ದಂಡು, ಚಿಂಪಾಗಿ ಸಿಡದೀತೊ
ರಂಪರಂಪೆಂದು ಓಡೀತೊ ಅಮಟೂರ
ಬಾಳು ಗುಂಡಿಟ್ಟೊ ಥಾಕರೆಗೊ  ೨೦
ಮುಚ್ಚಿನ ಕಾಳಗಕ, ಮೆಚ್ಚ್ಯಾಳೊ ಚೆನ್ನಮ್ಮ
ಉಚ್ಚಿ ಬೆಳ್ಳಿಗಳ ಕೊಡತಾಳೊ | ಬಂಟರಿಗೆ
ಹೆಚ್ಚಿನ ರೋಜ ಬರೆಸ್ಯಾಳೊ  ೨೧
ಬೆಳಗಾವಿ ಚಿಪ್ಲಿನ್ನ, ಒಳ ಹಾದಿಲೆ ದಂಡೆತ್ತಿ
ಬೆಳಗಾಗಿ ದಂಡು ಬೀಡಿಟ್ಟೊ | ಕಿತ್ತೂರು
ತಳಮಳ ನೋಡೊ ಚಣದಾಗೊ  ೨೨
ಹೊನ್ನು ಹಣಗಳನೀವೆ, ಮನ್ನೂಣಿ ನಿನಗೀವೆ
ಬೇಡಿದ್ದ ನೀವೆ ಗೋವಿಂದ | ಮನಸಿಟ್ಟು
ಮದ್ದಿಽಗೆ ಎಣ್ಣೆ ನೀ ಬೆರಿಸೊ  ೨೩
ಲದ್ದೀಯ ಗೋವಿಂದ, ಕುದ್ದಲಗೇಡ್ಹಾರೂವ
ಮದ್ದಿಽಗೆ ಲದ್ದಿ ಬೆರಿಸ್ಯಾನೊ | ನಸಿಬಾವೊ
ಬಿದ್ದು ಕಿತ್ತೂರು ಹಾಳಾತೊ  ೨೪
ಕನ್ನೂರ ಕಲ್ಲೂರ, ಮಲ್ಲರದು ಪಿತೂರಿ
ರಾಗಿ ಕೂಡಿಸಿದ ಹುಸಿ ಮದ್ದೊ | ಕಿತ್ತೂರ
ನಸಿಬ ಹಾರ್ಯಾವೊ ಹುಸಿ ಗುಂಡೊ  ೨೫
ಕಿತ್ತೂರ ಕಿಲ್ಲೇಕ, ಉತ್ತಿ ಕರ್ಯಾರಿಲ್ಲ
ಉಕ್ಕಿಽನ ಗುಂಡು ಬಿಗಿವಾಗ | ಚೆನ್ನಮ್ನ
ಹಕ್ಕ್ಯಾಗಿ ಬಾಯ ಬಿಡತಾಳ  ೨೬
ಕಿತ್ತೂರ ಕಿಲ್ಲೇಕ, ಏನೇನ ಮಸಲತ್ತ
ಉಕ್ಕಿಽನ ಗುಂಡ ಉರಿಬಾಣ | ಚೆನ್ನಮ್ಮ
ಅರಮನಿಗೆ ಬಾಣ ಬಿಡತಾರೊ  ೨೭
ಜಮಖಂಡಿ ದೇಸಾಯಿ, ಯಮಕೀಲೆ ಕೂಡಿಽದ
ಸಮಯಕ ಚಿಪ್ಲಿನ್ನ ದಂಡಿಽಗೊ | ಕಿತ್ತೂರ
ಸಮನಾಗೈಸೀರಿ ಹೊತ್ತೊಯ್ದೊ  ೨೮
ಎಂಥಾದ ಕಿತ್ತೂರು, ಚಿಂತ್ಯಾಗ ಬೆಳಗಾತ
ಕೆಂಪು ಮೋತೆವರು ಒಲಿಹೂಡಿ | ಚೆನ್ನವ್ನ
ಚಿತ್ರದ ಮೂಲ ಮುರಿದಾರೊ  ೨೯
ಕಿತ್ತೂರ ಕಿಲ್ಲೇಕ, ಹತ್ತು ಕಾಲ್ನಚ್ಚಣಕಿ
ಕೊತ್ತ ಕೊತ್ತಲಕ ಕೈವಂಜು | ಹಿಡಕೊಂಡು
ಸುತ್ತ ಚೆನ್ನವ್ನ ಹುಡಿಕ್ಯಾರೊ  ೩೦
ಕಿತ್ತೂರ ಶರಸೂರಿ, ಮತ್ತೇನ ಹೇಳಲಿ
ಚಿತ್ತರದ ಗೊಂಬಿ ಅಳತಾವ | ಚೆನ್ನವಗ
ಹಿಂಡೆಮ್ಮಿ ಹಸವು ಎಳಿಗಾರ  ೩೧
ಕೆರಳಿಽದ ಕೇಸರಣಿ, ಕಿತ್ತೂರ ಬಿಟಿಗೊಟ್ಟು
ಬತ್ತಲಗುದರೀಯ ಜಿಗದೇರಿ | ಹೊಂಗಲದ
ಗಡಿಯಾಗ್ಬೈರೀಗೆ ಸೆರೆಯಾಗಿ  ೩೨
ಕಿತ್ತೂರ ಶರಸೂರಿ, ಮತ್ತೇನ ಹೇಳಽಲಿ
ಎತ್ತೊಂಟಿ ಮ್ಯಾಗ ಸದಲ್ಹೇರಿ | ಹೊಡೆದಾರೊ
ಮತ್ತ ಧಾರ್ವಾಡ ಕಿಲ್ಲೇಕೊ  ೩೩
ಅತ್ತೆ ಸೊಸ್ತೆರ ತಂದು, ಮತ್ತ ಹೊಂಗಲದಾಗ
ಸುತ್ತ ಕಾವಲಿಯೊ ಹಗಲಿರುಳೊ | ಜನದಾಗ
ಎತ್ತ ನೋಡಿದರೂ ತಳಮಳೊ  ೩೪
ಮುಕ್ಕಣ್ಣ ಗತಿಯೆಂದು, ಸಿಕ್ಕು ಸೆರೆಯಾಗಿದ್ದು
ಬಿಕ್ಕಿ ಅಳತಾಳೊ -ಈರವ್ಹೊ | ರಾಯಣ್ಣ
ಅಸ ನಿಮ್ಮುಪ್ಪು ಈ ರಾಯೊ  ೩೫
ಗೆದ್ದು ಕಿತ್ತೂರ ತಂದು, ಉದ್ದ ಬೀಳುವೆ ತಾಯಿ
ಕದ್ದ ಮಾತಲ್ಲ ನಿಮ್ಮಾಣಿ | ಇಲದಿರಕ
ಬಿದ್ದ ಹೋಗೂವೆ ರಣದಾಗೊ  ೩೬
ಸಂಗೊಳ್ಳಿ ರಾಯಣ್ಣ, ಹಂಗ್ಹರಿದ ದಳವಾಯಿ
ದಂಗೆ ಎಬ್ಬಿಸಿದ ನಾಡಾಗೊ | ಕಿತ್ತೂರ
ಕಂಗೆಟ್ಟ ಜನರು ಕೂಡ್ಯಾರೊ  ೩೭
ಸುದ್ದಿ ಹಬ್ಬಿತು ಸುತ್ತ, ಎದ್ದು ಕೂಡಿತು ಮಂದಿ
ಗದ್ದಲಕ ಅಂಜಿ ಸರಕಾರ | ಈರವ್ನ
ಕದ್ದಿಲ ಕೊಂದಾರೊ ವಿಷ ಕೊಟ್ಟೊ  ೩೮
ಬೆಳ್ಳಿ ಹರಿವಾಣದಾಗ, ಬಿಳಿ ಮುತ್ತು ಸುರಿದ್ಹಾಂಗ
ಚಂದ್ರಸಾಲಿಗೋಡಿ ಬಿರಿಯಾಲಿ | ಈರವ್ನ
ಕೊಂದವರ ವಂಶ ಹುರಿಯಾಲಿ  ೩೯
ಖದಾನ ಪುರದಾಗ ಹೋದಾನೊ ರಾಯಣ್ಣ
ಭೇದವಿಡಲಿಲ್ಲ ಮನದಾಗ | ಲಿಂಗೊಂಡ
ವಾದಿ ರಾಯಣ್ಣ ಮೋಸಾಗಿ  ೪೦
ನಂದಗಡ ಊರಾಗ, ಮಂದ್ಯಾಗ ರಾಯಣ್ಣ
ತಂದು ಶೂಲಕ ಹಾಕ್ಯಾರೊ | ಕಿತ್ತೂರ
ಗೊಂದಲ ಶೂರಗ ದುದಿಮರಣೊ  ೪೧
ಹೊಂಗಲದ ಮಟದಾಗ, ಲಿಂಗ ಪೂಜೆಯ ಮಾಡಿ
ಭಂಗಾಗುದೆಂದು ಎದೆಗುಂದಿ | ಚೆನ್ನವ್ವ
ಉಂಗರ್ವಜ್ಜಿಽರ ನುಂಗ್ಯಾಳೊ  ೪೨
*****
Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...