Home / ಕವನ / ಕವಿತೆ / ನಾಟ್ಯ ಶಾಲೆ

ನಾಟ್ಯ ಶಾಲೆ

ಒಂದು ಕ್ಷ್ನಣವಾದರೂ ಬಗೆದೆ ಯಂತ್ರಾಗಾರವದು ನರಕವೆಂದು.
ಎಣಿಸಲಾರೆನರೆನಿಮಿಷ ಸಹ ನಾಟ್ಯಶಾಲೆಯಿದು ಸ್ಪರ್ಗವೆಂದು.
ಇಂದ್ರನ ರಾಜ್ಯವಿದಲ್ಲ,-ಇಂದ್ರಿಯಗಳ ರಾಜ್ಯವಿದು,
ಮಿಟಿಮಿಟಿ ಸ್ವರ್ಗ, ತ್ರಿಶಂಕುವಿನಮರಪುರಿ!
ದಾರಿ ತಪ್ಪಿ ನಡೆದ ಮಾನವನು ಮೇರೆದಪ್ಪಿ ಹೆಜ್ಜಿಯಿಕ್ಕಿ
ಸುಖವ ದೊರಕಿಸಲೆಂದು ಹೂಡಿರುವ ಮೋಸವಿದು,-ಆತ್ಮವಂಚನೆಯೆಲ್ಲ!
ಮೇನಕೆಯ ರಂಗಭೂವಿಯಿದು: ಎಚ್ಚರಿಕೆ! ಜೀವವೆ!

‘ರಾತ್ರಿ’ಯೆಂಬ ಹೆಸರಾಂತು ಬಣ್ಣ ಬಡೆದುಕೊಂಡು
ಗಂಡಿನೊಡನೆ ಬತ್ತಲೆಗುಣಿತವ ಕುಣಿವ ಹೆಣ್ಣೆ!
ತಿಳಿದಿಲ್ಲ ನೀನು ರಾತ್ರಿಯದೆಂಥ ಧಾತ್ರಿಯೆ೦ಬುದನು.
ಮುಗಿಲಿನಲ್ಲಿ ನಕ್ಷತ್ರಗಳಕ್ಷೋಹಿಣಿಯನಾಡಿಸುವ ಮಾತಾಯಿಯ ನೋಡು!
ಸಮುದ್ರವೆರಗುವದು ಬಂದವಳಡಿಗೆ;
ಕಾಲಿಡು ಹಡಗದ ಹೊರಗೆ. ತೆರೆಗಳು ತರಿದೊಗೆಯುವವು ನಿನ್ನನ್ನು ಹಿಂಡಿ.
ಮೈಮುಚ್ಚುವ ಬದಲು, -ತೆರೆಯುವ ಕಾಳಿಂದಿ ಸೀರೆಯೊಂದನುಟ್ಟು
ಅದರಂಚಿಗೆ ನಾಲ್ಕು ಮುತ್ತುರತುನಗಳ ಹೊಂದಿಸಿ
ಕ್ಷಯ ಹತ್ತಿದ ಚಂದ್ರನಂತೆ ಬಣ್ಣವೇರಿದ ಮೊಗೆ ತೋರಿಸಿದಲ್ಲಿ
ರಾತ್ರಿಯಾದೆಯಾ ನೀನು? ಅಪರಾತ್ರಿ! ತೊಲಗಿಲ್ಲಿಂದ!

ನೂರು ದಿವಸ ಒಳಿತಾಗಿ ಬಾಳಿ ಮೂರು ದಿವಸ ಹೋಳಿಯಾಡಿದಂತೆ
ಒಂದು ದಿವಸದ ಮೋಜಿಗಾಗಿ ನಿರ್ಮಿತವಾದ ನಾಟ್ಯಪದ್ಧತಿಯಿದು
ಒಲಿಯುತಿದೆ,- ಕೊಳೆಯುತಿಹನು ಮಾನವನದರ ಗೋಜಿಗೆ ಹೋಗಿ.
ಸಮಾಜವೆಲ್ಲ ನಾಟ್ಯಶಾಲೆಯಾಗಿ ಸಂಸಾರವೆ ವಿರಳವಾಗಿದೆಯೀಗ.
ದಿನದ ಬಾಳೆಲ್ಲ ಹೋಳಿಯಾಗುತಿದೆ, ಪ್ರೇಮವು ಕಾಮವಾಗುತಿದೆ.
ಗಂಡಾದರೆ ಸಾಕು ಗಂಡನವ! ಹೆಣ್ಣಾದರೆ ಸಾಕು! ಹೆಂಡತಿಯವಳು!
ಇಲ್ಲಿಗಿಳಿದಿದೆ ಸಂಕರ: ಇದಕಿಂತ ಭಯಂಕರವೇನು?
ಮನೆಗೊಂದು ರಾಮಾಯಣವಿರಲು, -ಬರೆಯುವನೆಂತು ನವವಾಲ್ಮೀಕಿ?
ಓಣಿಗೊರ್ವ ಅಹಲ್ಯೆಯಿರಲು,-ಉದ್ದರಿಸುವನೆಂತು ಪತಿತಪಾವನ!
ತುಂಬುತಿದೆ ಕೊಡ, ಹೊಮ್ಮುತಿದೆ ಗಾನ,-ಒತ್ತರಿಸುತಿದೆ ನಾಟ್ಯ:
ಜಗವೆಲ್ಲ ಭ್ರಮಿಸಿ ಬೇಸತ್ತು ಮತ್ತಾತ್ಮ ಹತ್ಯಕಣಿಗೊಂಡು
ಔತಣವನೀಯುತಿದೆ ಪ್ರಳಯಾಗ್ನಿ ಪುರುಷನಿಗೆ!
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...