Home / ಕವನ / ಕವಿತೆ / ನಾಟ್ಯ ಶಾಲೆ

ನಾಟ್ಯ ಶಾಲೆ

ಒಂದು ಕ್ಷ್ನಣವಾದರೂ ಬಗೆದೆ ಯಂತ್ರಾಗಾರವದು ನರಕವೆಂದು.
ಎಣಿಸಲಾರೆನರೆನಿಮಿಷ ಸಹ ನಾಟ್ಯಶಾಲೆಯಿದು ಸ್ಪರ್ಗವೆಂದು.
ಇಂದ್ರನ ರಾಜ್ಯವಿದಲ್ಲ,-ಇಂದ್ರಿಯಗಳ ರಾಜ್ಯವಿದು,
ಮಿಟಿಮಿಟಿ ಸ್ವರ್ಗ, ತ್ರಿಶಂಕುವಿನಮರಪುರಿ!
ದಾರಿ ತಪ್ಪಿ ನಡೆದ ಮಾನವನು ಮೇರೆದಪ್ಪಿ ಹೆಜ್ಜಿಯಿಕ್ಕಿ
ಸುಖವ ದೊರಕಿಸಲೆಂದು ಹೂಡಿರುವ ಮೋಸವಿದು,-ಆತ್ಮವಂಚನೆಯೆಲ್ಲ!
ಮೇನಕೆಯ ರಂಗಭೂವಿಯಿದು: ಎಚ್ಚರಿಕೆ! ಜೀವವೆ!

‘ರಾತ್ರಿ’ಯೆಂಬ ಹೆಸರಾಂತು ಬಣ್ಣ ಬಡೆದುಕೊಂಡು
ಗಂಡಿನೊಡನೆ ಬತ್ತಲೆಗುಣಿತವ ಕುಣಿವ ಹೆಣ್ಣೆ!
ತಿಳಿದಿಲ್ಲ ನೀನು ರಾತ್ರಿಯದೆಂಥ ಧಾತ್ರಿಯೆ೦ಬುದನು.
ಮುಗಿಲಿನಲ್ಲಿ ನಕ್ಷತ್ರಗಳಕ್ಷೋಹಿಣಿಯನಾಡಿಸುವ ಮಾತಾಯಿಯ ನೋಡು!
ಸಮುದ್ರವೆರಗುವದು ಬಂದವಳಡಿಗೆ;
ಕಾಲಿಡು ಹಡಗದ ಹೊರಗೆ. ತೆರೆಗಳು ತರಿದೊಗೆಯುವವು ನಿನ್ನನ್ನು ಹಿಂಡಿ.
ಮೈಮುಚ್ಚುವ ಬದಲು, -ತೆರೆಯುವ ಕಾಳಿಂದಿ ಸೀರೆಯೊಂದನುಟ್ಟು
ಅದರಂಚಿಗೆ ನಾಲ್ಕು ಮುತ್ತುರತುನಗಳ ಹೊಂದಿಸಿ
ಕ್ಷಯ ಹತ್ತಿದ ಚಂದ್ರನಂತೆ ಬಣ್ಣವೇರಿದ ಮೊಗೆ ತೋರಿಸಿದಲ್ಲಿ
ರಾತ್ರಿಯಾದೆಯಾ ನೀನು? ಅಪರಾತ್ರಿ! ತೊಲಗಿಲ್ಲಿಂದ!

ನೂರು ದಿವಸ ಒಳಿತಾಗಿ ಬಾಳಿ ಮೂರು ದಿವಸ ಹೋಳಿಯಾಡಿದಂತೆ
ಒಂದು ದಿವಸದ ಮೋಜಿಗಾಗಿ ನಿರ್ಮಿತವಾದ ನಾಟ್ಯಪದ್ಧತಿಯಿದು
ಒಲಿಯುತಿದೆ,- ಕೊಳೆಯುತಿಹನು ಮಾನವನದರ ಗೋಜಿಗೆ ಹೋಗಿ.
ಸಮಾಜವೆಲ್ಲ ನಾಟ್ಯಶಾಲೆಯಾಗಿ ಸಂಸಾರವೆ ವಿರಳವಾಗಿದೆಯೀಗ.
ದಿನದ ಬಾಳೆಲ್ಲ ಹೋಳಿಯಾಗುತಿದೆ, ಪ್ರೇಮವು ಕಾಮವಾಗುತಿದೆ.
ಗಂಡಾದರೆ ಸಾಕು ಗಂಡನವ! ಹೆಣ್ಣಾದರೆ ಸಾಕು! ಹೆಂಡತಿಯವಳು!
ಇಲ್ಲಿಗಿಳಿದಿದೆ ಸಂಕರ: ಇದಕಿಂತ ಭಯಂಕರವೇನು?
ಮನೆಗೊಂದು ರಾಮಾಯಣವಿರಲು, -ಬರೆಯುವನೆಂತು ನವವಾಲ್ಮೀಕಿ?
ಓಣಿಗೊರ್ವ ಅಹಲ್ಯೆಯಿರಲು,-ಉದ್ದರಿಸುವನೆಂತು ಪತಿತಪಾವನ!
ತುಂಬುತಿದೆ ಕೊಡ, ಹೊಮ್ಮುತಿದೆ ಗಾನ,-ಒತ್ತರಿಸುತಿದೆ ನಾಟ್ಯ:
ಜಗವೆಲ್ಲ ಭ್ರಮಿಸಿ ಬೇಸತ್ತು ಮತ್ತಾತ್ಮ ಹತ್ಯಕಣಿಗೊಂಡು
ಔತಣವನೀಯುತಿದೆ ಪ್ರಳಯಾಗ್ನಿ ಪುರುಷನಿಗೆ!
*****

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...