Home / ಲೇಖನ / ವಿಜ್ಞಾನ / ಈಗ ಕುಡಿಯುವ ಕೊಳವೆ ನೀರೂ ಸಹ ವಿಷವೇ?

ಈಗ ಕುಡಿಯುವ ಕೊಳವೆ ನೀರೂ ಸಹ ವಿಷವೇ?

ಬರಗಾಲದ ಭೀಕರತೆಯಿಂದಾಗಿ ನೀರು ಎಲ್ಲಿಯೂ ಸಕ್ಕುವುದಿಲ್ಲ ಹಳ್ಳಕೊಳ್ಳ ತೊರೆ, ನದಿಗಳು ಬತ್ತಿಹೋಗಿವೆ. ಇಂಥಹ ಸಂದರ್ಭಗಳಲ್ಲಿ ಕೊಳವೆಭಾವಿಗಳನ್ನು ಕೊರೆದು ಅದರಿಂದ ನೀರು ಸಂಗ್ರಹಿಸಿ ಕುಡಿಯಲು ಉಪಯೋಗಿಸುತ್ತಿರುವುದು ಇಂದು ಸಾಮಾನ್ಯ ದೃಷ್ಯ.

ಆದರೆ ಇಂಥಹ ಕೊಳವೆ ಭಾವಿಗಳ ನೀರು ವಿಷಯುಕ್ತವಾಗಿವೆ ಎಂಬ ಸತ್ಯ ಇತ್ತೀಚಿಗೆ ಬಯಲಾಗುತ್ತಲಿದೆ. ನಗರೀಕರಣದ ಒತ್ತಡದಿಂದಾಗಿ ಸುರಂಗಗಳನ್ನು ತೋಡಿ ನೀರು ತೆಗೆಯುವ ಸಾಹಸದಿಂದಾಗಿ ಅಂತಾರ್ಜಲ ಬಿತ್ತಿಹೋಗುತ್ತಲಿದೆ. ಹೀಗಾಗಿ ಈ ಸುರಂಗ ಭಾವಿಗಳನ್ನು ೧೦೦ ರಿಂದ ೫೦೦ ಅಡಿಗಳವರೆಗೂ ಕೊರೆಯಲಾಗುತ್ತದೆ. ಇದು ತೀವ್ರವಾಗತೊಡಗಿದಂತೆ ‘ಆರ್ಸನಿಕ್’, ಅಂಶವು ಹೆಚ್ಚಿನ ಪ್ರಮಾಣದಲ್ಲಿ ಅಂತರಜಲದ ಜೊತೆಗೆ ಸೇರಿಕೊಳ್ಳುತ್ತದೆ. ಥೈಲ್ಯಾಂಡಿನಂತಹ ದೇಶಗಳು ಈ ಹಿಂದೆಯೇ ಆರ್ಸನಿಕ್, ವಿಷಪ್ರಾಶನದಿಂದ ಬಳಲಿ ಪಾಠ ಕಲಿತಿವೆ. ಥೈಲ್ಯಾಂಡಿನ ಕೆಲವು ಪ್ರದೇಶಗಳಲ್ಲಿ ಮಳೆಯ ನೀರನ್ನು ಸಿಮೆಂಟ್ ಜಾಡಿಗಳಲಿ ಸಂಗ್ರಹಿಸಿ ಬಳಸಿಕೊಳ್ಳಲಾಗುತ್ತದೆ. ಅಲ್ಲಿ ವರ್ಷದ ಹತ್ತು ತಿಂಗಳ ಕಾಲ ಕುಡಿಯಲು ಮತ್ತು ಅಡಿಗೆ ತಯಾರಿಕೆಗೆ ಬೇಕಾಗುವ ನೀರನ್ನು ಇಂಥಹ ಮಳೆಯ ನೀರಿನ ಸಂಗ್ರಹದಿಂದಲೇ ಪೂರೈಸಿಕೊಳ್ಳಲಾಗುತ್ತದೆ. ಪಶ್ಚಿಮ ಬಂಗಾಳದ ೮೪೦ ಹಳ್ಳಿಗಳಲ್ಲಿ ಲಕ್ಷಾಂತರ ಜನರು ಅರ್ಸನಿಕ್ ವಿಷ ಪ್ರಾಶನದಿಂದ ನರಳುತ್ತಿದ್ದಾರೆ. ನೆಲದಾಳದಲ್ಲಿರುವ ಕಬ್ಬಿಣದ ಪೈರೈಟ್ಗಳು ಕೊಳವೆ ಭಾವಿಗಳ ಮೂಲಕ ಆಮ್ಲಜನಕದ ಸಂಪರ್ಕಕ್ಕೆ ಬಂದಾಗ ಅಪಾಯಕಾರಿಯಾದ ಆರ್ಸನಿಕ್ ಬಿಡುಗಡೆ ಹೊಂದಿ ಅಂತರ್ಜಲವನ್ನು ಸೇರುತ್ತದೆ. ನೀರಿನೊಂದಿಗೆ ಸೇರುವ ಈ ಆರ್ಸೆನಿಕ್ ಮನುಷ್ಯರಿಗೂ, ಪ್ರಾಣಿಗಳಿಗೂ ಅತ್ಯಂತ ಅಪಾಯಕಾರಿಯಾಗಿದೆ.

ಸಾಮಾನ್ಯವಾಗಿ ಇಂತಹ ಸಮಸ್ಯಗಳಿಗೆ ಸರಳವಾದ ಸುಲಭವಾದ ಮತ್ತು ಕಡಿಮೆ ಖರ್ಚಿನ ಮಾರ್ಗಗಳಿವೆ. ಆದರೆ ಹಲವಾರು ಕಾರಣಗಳಿಂದಾಗಿ ಇಂಥಹ ಪರ್ಯಾಯ ವ್ಯವಸ್ಥೆಗೆ ಒಪ್ಪಿಗೆ ಸಿಗುವುದಿಲ್ಲ ಮುಖ್ಯವಾಗಿ ಮಳೆ ನೀರನ್ನು ಸಂಗ್ರಹಿಸಿ ಇರುವುದು. ಜಲಮೂಲಗಳಿಂದ ನೀರನ್ನು ಪಡೆಯುವುದು. ಮುಂತಾದ ಕ್ರಮಗಳನ್ನು ಅನುಸರಿಸಬೇಕಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...