Home / ಲೇಖನ / ವಿಜ್ಞಾನ / ಈಗ ಕುಡಿಯುವ ಕೊಳವೆ ನೀರೂ ಸಹ ವಿಷವೇ?

ಈಗ ಕುಡಿಯುವ ಕೊಳವೆ ನೀರೂ ಸಹ ವಿಷವೇ?

ಬರಗಾಲದ ಭೀಕರತೆಯಿಂದಾಗಿ ನೀರು ಎಲ್ಲಿಯೂ ಸಕ್ಕುವುದಿಲ್ಲ ಹಳ್ಳಕೊಳ್ಳ ತೊರೆ, ನದಿಗಳು ಬತ್ತಿಹೋಗಿವೆ. ಇಂಥಹ ಸಂದರ್ಭಗಳಲ್ಲಿ ಕೊಳವೆಭಾವಿಗಳನ್ನು ಕೊರೆದು ಅದರಿಂದ ನೀರು ಸಂಗ್ರಹಿಸಿ ಕುಡಿಯಲು ಉಪಯೋಗಿಸುತ್ತಿರುವುದು ಇಂದು ಸಾಮಾನ್ಯ ದೃಷ್ಯ.

ಆದರೆ ಇಂಥಹ ಕೊಳವೆ ಭಾವಿಗಳ ನೀರು ವಿಷಯುಕ್ತವಾಗಿವೆ ಎಂಬ ಸತ್ಯ ಇತ್ತೀಚಿಗೆ ಬಯಲಾಗುತ್ತಲಿದೆ. ನಗರೀಕರಣದ ಒತ್ತಡದಿಂದಾಗಿ ಸುರಂಗಗಳನ್ನು ತೋಡಿ ನೀರು ತೆಗೆಯುವ ಸಾಹಸದಿಂದಾಗಿ ಅಂತಾರ್ಜಲ ಬಿತ್ತಿಹೋಗುತ್ತಲಿದೆ. ಹೀಗಾಗಿ ಈ ಸುರಂಗ ಭಾವಿಗಳನ್ನು ೧೦೦ ರಿಂದ ೫೦೦ ಅಡಿಗಳವರೆಗೂ ಕೊರೆಯಲಾಗುತ್ತದೆ. ಇದು ತೀವ್ರವಾಗತೊಡಗಿದಂತೆ ‘ಆರ್ಸನಿಕ್’, ಅಂಶವು ಹೆಚ್ಚಿನ ಪ್ರಮಾಣದಲ್ಲಿ ಅಂತರಜಲದ ಜೊತೆಗೆ ಸೇರಿಕೊಳ್ಳುತ್ತದೆ. ಥೈಲ್ಯಾಂಡಿನಂತಹ ದೇಶಗಳು ಈ ಹಿಂದೆಯೇ ಆರ್ಸನಿಕ್, ವಿಷಪ್ರಾಶನದಿಂದ ಬಳಲಿ ಪಾಠ ಕಲಿತಿವೆ. ಥೈಲ್ಯಾಂಡಿನ ಕೆಲವು ಪ್ರದೇಶಗಳಲ್ಲಿ ಮಳೆಯ ನೀರನ್ನು ಸಿಮೆಂಟ್ ಜಾಡಿಗಳಲಿ ಸಂಗ್ರಹಿಸಿ ಬಳಸಿಕೊಳ್ಳಲಾಗುತ್ತದೆ. ಅಲ್ಲಿ ವರ್ಷದ ಹತ್ತು ತಿಂಗಳ ಕಾಲ ಕುಡಿಯಲು ಮತ್ತು ಅಡಿಗೆ ತಯಾರಿಕೆಗೆ ಬೇಕಾಗುವ ನೀರನ್ನು ಇಂಥಹ ಮಳೆಯ ನೀರಿನ ಸಂಗ್ರಹದಿಂದಲೇ ಪೂರೈಸಿಕೊಳ್ಳಲಾಗುತ್ತದೆ. ಪಶ್ಚಿಮ ಬಂಗಾಳದ ೮೪೦ ಹಳ್ಳಿಗಳಲ್ಲಿ ಲಕ್ಷಾಂತರ ಜನರು ಅರ್ಸನಿಕ್ ವಿಷ ಪ್ರಾಶನದಿಂದ ನರಳುತ್ತಿದ್ದಾರೆ. ನೆಲದಾಳದಲ್ಲಿರುವ ಕಬ್ಬಿಣದ ಪೈರೈಟ್ಗಳು ಕೊಳವೆ ಭಾವಿಗಳ ಮೂಲಕ ಆಮ್ಲಜನಕದ ಸಂಪರ್ಕಕ್ಕೆ ಬಂದಾಗ ಅಪಾಯಕಾರಿಯಾದ ಆರ್ಸನಿಕ್ ಬಿಡುಗಡೆ ಹೊಂದಿ ಅಂತರ್ಜಲವನ್ನು ಸೇರುತ್ತದೆ. ನೀರಿನೊಂದಿಗೆ ಸೇರುವ ಈ ಆರ್ಸೆನಿಕ್ ಮನುಷ್ಯರಿಗೂ, ಪ್ರಾಣಿಗಳಿಗೂ ಅತ್ಯಂತ ಅಪಾಯಕಾರಿಯಾಗಿದೆ.

ಸಾಮಾನ್ಯವಾಗಿ ಇಂತಹ ಸಮಸ್ಯಗಳಿಗೆ ಸರಳವಾದ ಸುಲಭವಾದ ಮತ್ತು ಕಡಿಮೆ ಖರ್ಚಿನ ಮಾರ್ಗಗಳಿವೆ. ಆದರೆ ಹಲವಾರು ಕಾರಣಗಳಿಂದಾಗಿ ಇಂಥಹ ಪರ್ಯಾಯ ವ್ಯವಸ್ಥೆಗೆ ಒಪ್ಪಿಗೆ ಸಿಗುವುದಿಲ್ಲ ಮುಖ್ಯವಾಗಿ ಮಳೆ ನೀರನ್ನು ಸಂಗ್ರಹಿಸಿ ಇರುವುದು. ಜಲಮೂಲಗಳಿಂದ ನೀರನ್ನು ಪಡೆಯುವುದು. ಮುಂತಾದ ಕ್ರಮಗಳನ್ನು ಅನುಸರಿಸಬೇಕಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...