Home / ಕವನ / ಕವಿತೆ / ಕ್ಷಿತಿಜಯಕ್ಷ

ಕ್ಷಿತಿಜಯಕ್ಷ

ಬಾಳ್ಗಡಲು ಕೆರಳಿಹುದು, ಕಾರಿರುಳು ಬೆಳೆದಿಹುದು
ಮನದ ಮನೆಯಲಿ ಭೀತಿ ನಡುಗುತಿಹುದು
ನೀಲಿಮಾಪಥದಲ್ಲಿ ಅಭ್ರರಥ ತಾರೆಗಳ
ತುಳಿದರೆದು ಬಾನೆದೆಯ ಸೀಳಿರುವುದು

ಅಪ್ಪಿ ತಿರೆಯೆದೆಯನ್ನು ತೆಪ್ಪಗಿಹ ಮೆಲುಗಾಳಿ
ನೂರು ನಾಲಗೆ ಚಾಚಿ ಒದರುತಿಹುದು
-‘ಗುಡ್ಡಗಳ ಚಲಿಸುವೆನ್ಮು ಕಡಲನ್ನು ಕಡೆಯುವೆನು
ಸ್ವರ್ಗಸಿಂಹಾಸನವ ನಡುಗಿಸುವೆನು’

ಕಡಲತೆರೆ ಹುಚ್ಚೆದ್ದು ಹಾವಿನೊಲು ಹೆಡೆಗಳನು
ಅಪ್ಪಳಸಿ ಅಬ್ಬರಿಸಿ ಮುತ್ತುತಿಹವು
ಮರಣ ಜಿವ್ಹೆಯ ಹಾಗೆ ತುತ್ತಲಿಕೆ ಸುತ್ತಿಹವು
ತಮ್ಮ ಬಲೆಯನು ಹರಡಿ, ಎಳೆಯುತಿಹವು.

ನನ್ನ ಈ ಕಿರಿ ನಾವೆ ಹಿರಿಗಡಲ ಮಡಿಲಲ್ಲಿ
ಏಳುತ್ತ ಮುಳುಗುತ್ತ ತೇಲುತಿಹುದು
ನೀರಗೋರಿಯ ಕಂಡ ನೂರು ನಾವೆಯಕಂಡು
ತತ್ತರಿಸಿ ಒಳಗೊಳಗೆ ಕುಸಿಯುತಿಹುದು.

ತೆರೆಗೆ ತುತ್ತಾಗುವುದೊ? ದೈವರಕ್ಷಿತವಾಗಿ
ದಂಡೆಯಲಿ ಬಂದರವ ಸೇರಬಹುದೊ?
-ದಿಗ್ಭ್ರಾಂತ ನಿರೆಯಿಂತು ಆಕಾಶದಂಚಿನಲಿ
ಹೊನ್ನ ಹೊಳೆಯೊಲು ಕಾಂತಿ ಹೊಮ್ಮುತಿಹುದು

ಬಾನ್ನೀರ ಚುಂಬನದ ಚೆಲುವು ನೈದಿಲೆಯಲ್ಲಿ
ಕಿರಣ ಪಿಚ್ಛವ ಹರಡಿ ಕುಳಿತಿರುವನು
ದೇವನೋ ಯಕ್ಷನೋ, ಸ್ವಪ್ನ ಮಂದಿರ ರಚಿಸಿ
ಸಾಹಸಕೆ ಕರೆಯುತಿಹ ಶಿಲ್ಪಿವರನು.

ಅದುವೆನಗೆ ನಿತ್ಯವೂ ಧೈರ್ಯ, ಜೀವನ ಸ್ಫುರಣ,
ಆಸೆಗಳ ಚಿರವಾದ ಸುಮಬಂಧನ.
ಅದ ನೋಡಿದೀ ನಾವೆ ಪಕ್ಕಗಳ ಹರಡುವುದು
ನೀರ್ವಕ್ಕಿಯೊಲು ನೆಗೆದು ಮುನ್ನಡೆವುದು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...