Home / ಕವನ / ಕವಿತೆ / ನಡೆದಾಡು ಬಾ ಗೆಳತಿ

ನಡೆದಾಡು ಬಾ ಗೆಳತಿ

ಹೆದರದಿರು ಗೆಳತಿ
ಕೂಡದೇ ಮೂಲೆಯಲಿ
ನಡೆದಾಡು ಬಾ ಗೆಳತಿ
ಲೋಕದ ದುಃಖಗಳು
ನಿನ್ನ ಬಾಗಿಲನೇ ತಟ್ಟಲಿಲ್ಲ
ಹಲವು ಬಾಗಿಲುಗಳ ತಟ್ಟಿವೆ.
ಎದ್ದು ಸುಧಾರಿಸಿಕೋ ಕೆಲ ಸಮಯ
ಭರವಸೆ ನಿಭಾಯಿಸಬೇಕಿದೆ
ನನ್ನ ಜೊತೆಗೂಡಿ ನಡೆದಾಡು
ಬಾ ಗೆಳತಿ ಹೆಜ್ಜೆ ಹಾಕು ಬಾ.

ಗುರಿ ಮುಟ್ಟುವ ಬಯಕೆ
ದೂರ ಕ್ರಮಿಸುವ ಭರವಸೆ
ಹೆಜ್ಜೆ ಹಾಕು ಬಾ ನನ್ನೊಂದಿಗೆ
ದುಃಖಗಳು ಪ್ರತಿರಾತ್ರಿಯ ಸಂಗಾತಿ
ಬೆಳಕು ಹರಿಯುವ ಭರವಸೆ
ಹೊತ್ತು ನಡೆಯೋಣ ಜಗದಲ್ಲಿ
ಭರವಸೆಯ ಬುತ್ತಿಗಳ
ಹೆದರದಿರು ಬಾ ಗೆಳತಿ ಹಜ್ಜೆ ಹಾಕು.

ಅಮೂಲ್ಯ ಕ್ಷಣಗಳ ತೊರೆಯದಿರು
ದುಃಖದ ಕಪ್ಪು ಹೊಗೆಯಾಗಿ,
ಬಾಚಿಕೋ ನಿನ್ನ ತೆಕ್ಕೆಗೂ
ಕೆಲ ಸಂತಸದ ಕ್ಷಣಗಳನ್ನು
ಲೋಕದಲಿ ಹಂಚಿ ಬಿಡು ಸುಖ ದುಃಖ
ಆಯ್ದುಕೊಳ್ಳಲಿ ಜಗವೂ ಸ್ವಲ್ಪ
ಹರಿಸದಿರು ಕಣ್ಣೀರ ಹನಿಗಳು.
ಹನಿಗಳು ಪವಿತ್ರ ಗಂಗೋತ್ರಿ
ಕಲ್ಮಶ ಕಳೆದುಕೊಂಡೆನೆಂದುಕೋ
ಹೆಜ್ಜೆ ಹಾಕುವ ಬಾ ಗೆಳತಿ.

ಅನಂತ ದುಃಖಗಳಿವೆ ಜಗದಲಿ
ನಿನ್ನೊಬ್ಬಳ ದುಃಖ ಯಾವ ಲೆಕ್ಕ?
ದೀಪದಡಿ ತಮಂಧದವಾಸ
ಬೆಳಕು ಹರಿಯುವ ಭರವಸೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...