Home / ಕವನ / ಕವಿತೆ / ನಡೆದಾಡು ಬಾ ಗೆಳತಿ

ನಡೆದಾಡು ಬಾ ಗೆಳತಿ

ಹೆದರದಿರು ಗೆಳತಿ
ಕೂಡದೇ ಮೂಲೆಯಲಿ
ನಡೆದಾಡು ಬಾ ಗೆಳತಿ
ಲೋಕದ ದುಃಖಗಳು
ನಿನ್ನ ಬಾಗಿಲನೇ ತಟ್ಟಲಿಲ್ಲ
ಹಲವು ಬಾಗಿಲುಗಳ ತಟ್ಟಿವೆ.
ಎದ್ದು ಸುಧಾರಿಸಿಕೋ ಕೆಲ ಸಮಯ
ಭರವಸೆ ನಿಭಾಯಿಸಬೇಕಿದೆ
ನನ್ನ ಜೊತೆಗೂಡಿ ನಡೆದಾಡು
ಬಾ ಗೆಳತಿ ಹೆಜ್ಜೆ ಹಾಕು ಬಾ.

ಗುರಿ ಮುಟ್ಟುವ ಬಯಕೆ
ದೂರ ಕ್ರಮಿಸುವ ಭರವಸೆ
ಹೆಜ್ಜೆ ಹಾಕು ಬಾ ನನ್ನೊಂದಿಗೆ
ದುಃಖಗಳು ಪ್ರತಿರಾತ್ರಿಯ ಸಂಗಾತಿ
ಬೆಳಕು ಹರಿಯುವ ಭರವಸೆ
ಹೊತ್ತು ನಡೆಯೋಣ ಜಗದಲ್ಲಿ
ಭರವಸೆಯ ಬುತ್ತಿಗಳ
ಹೆದರದಿರು ಬಾ ಗೆಳತಿ ಹಜ್ಜೆ ಹಾಕು.

ಅಮೂಲ್ಯ ಕ್ಷಣಗಳ ತೊರೆಯದಿರು
ದುಃಖದ ಕಪ್ಪು ಹೊಗೆಯಾಗಿ,
ಬಾಚಿಕೋ ನಿನ್ನ ತೆಕ್ಕೆಗೂ
ಕೆಲ ಸಂತಸದ ಕ್ಷಣಗಳನ್ನು
ಲೋಕದಲಿ ಹಂಚಿ ಬಿಡು ಸುಖ ದುಃಖ
ಆಯ್ದುಕೊಳ್ಳಲಿ ಜಗವೂ ಸ್ವಲ್ಪ
ಹರಿಸದಿರು ಕಣ್ಣೀರ ಹನಿಗಳು.
ಹನಿಗಳು ಪವಿತ್ರ ಗಂಗೋತ್ರಿ
ಕಲ್ಮಶ ಕಳೆದುಕೊಂಡೆನೆಂದುಕೋ
ಹೆಜ್ಜೆ ಹಾಕುವ ಬಾ ಗೆಳತಿ.

ಅನಂತ ದುಃಖಗಳಿವೆ ಜಗದಲಿ
ನಿನ್ನೊಬ್ಬಳ ದುಃಖ ಯಾವ ಲೆಕ್ಕ?
ದೀಪದಡಿ ತಮಂಧದವಾಸ
ಬೆಳಕು ಹರಿಯುವ ಭರವಸೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...