Home / ಲೇಖನ / ಇತರೆ / ತಬ್ಬಲಿ ಚೀನಾದ ಕತೆ

ತಬ್ಬಲಿ ಚೀನಾದ ಕತೆ

ಚೀನಾ ದೇಶ ನಮ್ಮ ಭವ್ಯ ಭಾರತದ ಮೇಲೆ ಮೇಲಿಂದಮೇಲೆ ಕಾಲು ಕೆದರಿ ಜಗಳ ತೆಗೆಯುತ್ತಿದೆ. “ಮಾರಿ ಕಣ್ಣು ಹೋರಿ ಮೇಲೆ” – ಎನ್ನುವಂತೆ ಚೀನಾದ ಕಣ್ಣು ನಮ್ಮ ಭವ್ಯ ಭಾರತದ ಮೇಲೆ.

ಚೀನಾ ದೇಶ ತನ್ನ ಮನೆಯನ್ನು ತಾನು ಸರಿಮಾಡಿಕೊಂಡು ಉನ್ನತಿ ಸಾಧಿಸಲು ಸಾಧ್ಯವಾಗುತ್ತಿಲ್ಲ! ದಿನದಿಂದ ದಿನಕ್ಕೆ ತಬ್ಬಲಿ ಚೀನಾವಾಗುತ್ತಿದೆ. ತಳ ಸೋರುವ ಮಡಿಕೆ ಕುಡಿಕೆಯಾಗುತ್ತಿದೆ.

ಇತ್ತೀಚಿನ ೨೦೧೫ರ ಅಂಕಿ ಅಂಶಗಳ ಪ್ರಕಾರ ಚೀನಾದಲ್ಲಿ ಉದ್ಯೋಗದ ಬೆನ್ನು ಹತ್ತಿದ ತಂದೆತಾಯಿ ಅಜ್ಜ‌ಅಜ್ಜಿಯರಿಂದ ತಬ್ಬಲಿಗೊಳಗಾದ ಸುಮಾರು ೬.೧ ಕೋಟಿ ಕೋಟಿ ಮಕ್ಕಳು ಚೀನಾದ ಗ್ರಾಮೀಣ ಭಾಗಗಳಲ್ಲಿದ್ದಾರೆಂಬಾ ಆಘಾತಕಾರಿ ಸುದ್ದಿಯೊಂದು ಸ್ಫೋಟಗೊಂಡಿದೆ.

ಇನ್ನೊಂದು ಧಾರುಣವಾದ ಸಂಗತಿಯೆಂದರೆ… ನೈರುತ್ಯ ಚೀನಾದ ತಬ್ಬಲಿ ಗ್ರಾಮವೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ! ಅಲ್ಲಿ ೧೩೨ ತಬ್ಬಲಿಯಾದ ಸಣ್ಣ ಪುಟ್ಟ ಕಂದಮ್ಮಗಳಿದ್ದಾರೆ!

ಹೆತ್ತ ಹೊತ್ತ ಅಪ್ಪ ಅಮ್ಮ ಸಂಬಂಧಿಕರಿಲ್ಲದೆ, ಈ ತಬ್ಬಲಿಗಳು ಲೈಂಗಿಕ ವೃತ್ತಿಗೆ ಬಳಕೆಯಾಗುವ ಅಪಾಯಗಳು ತೀರಾ ಹೆಚ್ಚು ಎಂದು ಆತಂಕಕಾರಿ ಸುದ್ದಿಯನ್ನು ಸ್ಥಳೀಯ ಪತ್ರಿಕೆಯಾದ “ಪೀಪಲ್ಸ್ ಡೈಲಿ”ಯು ಅಲ್ಲಿ ಬಹಿರಂಗ ಪಡಿಸಿರುವುದು.

ಅಲ್ಲಿ ವಿಶೇಷವಾಗಿ ಚೀನಾದ ಕೇಂದ್ರ ಭಾಗದಲ್ಲೇ ಇರುವ ಹುನಾನ್ ಪ್ರಾಂತ್ಯದ ಹುವಾಂಗ್ ಜಿಂಗ್ ಗ್ರಾಮ ವ್ಯಾಪ್ತಿಯ ಶಾವೊಯಾಂಗ್ ಕೌಂಟಿ ಎಂಬ ಗ್ರಾಮದಲ್ಲಿರುವ ೧೩೨ ತಬ್ಬಲಿ ಮಕ್ಕಳ ಕಥೆ ಅರಣ್ಯ ರೋದನವಾಗಿದೆ!! ಇದನ್ನು ತಬ್ಬಲಿ ಗ್ರಾಮ ಎಂಬ ಕುಖ್ಯಾತಿಗಳಿಸಿದೆ.

ಇಲ್ಲಿನ ೧೩೨ ಮಕ್ಕಳಲ್ಲಿ ೧೧೬ ಮಕ್ಕಳು ತಾಯಂದಿರನ್ನು ಕಳೆದುಕೊಂಡಿದ್ದಾರೆ. ಮರು ಮದುವೆ, ಮನೆ ಬಿಟ್ಟು ಓಡಿ ಹೋದವರು, ಮೃತ ಪಟ್ಟಿರುವುದು… ಕೆಲಸದಲ್ಲಿರುವುದು ಇತ್ಯಾದಿ ಕಾರಣಗಳೆಂದು ವರದಿಯು ಖಚಿತಪಡಿಸಿದೆ.

ಇಡೀ ವಿಶ್ವದಲ್ಲೇ ತೀರಾ ಬೃಹತ್ ಆರ್ಥಿಕ, ಸಮಾಜಿಕ, ರಾಜಕೀಯ ಶಕ್ತಿಯೆನಿಸಿರುವ ಬೃಹತ್ ರಾಷ್ಟ್ರ ಚೀನಾದಲ್ಲಿ ಈಗಾಗಲೇ ಸುಮಾರು ೨೬ ಕೋಟಿ ಕೋಟಿ ವಲಸೆ ಕೂಲಿ ಕಾರ್ಮಿಕರಿರುವರೆಂದು ಅಲ್ಲಿನ ಘನ ಸರ್ಕಾರ ೨೦೧೪ ರ ಸಾಲಿನಲ್ಲಿ ಅಧಿಕೃತವಾಗಿ ಅಂಕಿ ಅಂಶ ಹೊರಗೆಡವಿದೆ.

ಇಲ್ಲಿನ ಬಲು ವಿಚಿತ್ರವಾದ ಸಮಸ್ಯೆಯೆಂದರೆ, ತನ್ನಮ್ಮ ತನ್ನಪ್ಪ ಹೇಗಿದ್ದರೆಂದು ಯಾವ ಮಕ್ಕಳಿಗೂ ನೆನಪಿಲ್ಲ. ಭಾವನಾತ್ಮಕ ನಂಟಿನ ಅಂಟು ಅಲ್ಲಿಲ್ಲದೆ ವಿಲಿವಿಲಿ ಒದ್ದಾಡುತ್ತಿರುವರೆಂಬ ಸತ್ಯ ಸಂಗತಿಯನ್ನು ಸ್ಥಳೀಯ ಪತ್ರಿಕೆ ಆತಂಕ ವ್ಯಕ್ತಪಡಿಸಿದೆ.

ಇದೇ ನಗರದಲ್ಲಿ ಕೆಲಸ ಅರಸಿ ತನ್ನ ನಾಲ್ಕು ಮಕ್ಕಳನ್ನು ತೊರೆದು ಗ್ಯುಜೋವ್ ಪ್ರಾಂತ್ಯದ ತಾಯಿಯೊಬ್ಬಳು ಹೋದಾಗ ದಿಕ್ಕು ತೋಚದೆ ಇವರೆಲ್ಲ ಏಕಕಾಲಕ್ಕೆ ಜುಲೈ ತಿಂಗಳು ೨೦೧೫ ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆಯೊಂದು ಜರುಗಿದೆ.

ಇಂಥಾ ದುಃಸ್ಥಿತಿ ಭವ್ಯ ಭಾರತಕ್ಕೆ ಎಂದೂ ಭಾರದಿರಲಿ ಅಲ್ಲವೇ??
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...