Home / ಲೇಖನ / ವಿಜ್ಞಾನ / ಮರಗಳ ಅಡಿಯಲ್ಲಿ(ಭೂಗರ್‍ಭದಲ್ಲಿ)ಇರುವ ಖಿನಿಜ ಸಂಪತ್ತು

ಮರಗಳ ಅಡಿಯಲ್ಲಿ(ಭೂಗರ್‍ಭದಲ್ಲಿ)ಇರುವ ಖಿನಿಜ ಸಂಪತ್ತು

ಇದು ಸೋಜಿಗದ ವಿಷಯ. ಹಾಗಾದರೆ ಕಾಡಿನಲ್ಲಿರುವ ಮರಗಳ ಅಡಿಯನ್ನು ಅಗೆದು ಖನಿಜ ಹುಡುಕಬಹುದಲ್ಲ.?! ಎನ್ನಬಹುದು. ಆದರೆ ಇದು ಹೀಗಾಗದೇ ಕೆಲವೇ ಜಾತಿಗಳ ಮರಗಳು ಬೇರೆಬೇರೆ ಜಾತಿಯ ಖನಿಜಗಳಿರುವ ಮಣ್ಣಿನ ಪದರಲ್ಲಿ ಬೇರುಬಿಟ್ಟು ಬೇರೆಬೇರೆ ಜಾತಿಯ ಮರಗಳು ಬೆಳೆಯುತ್ತವೆ, ಎಂಬ ಸತ್ಯ ಇತ್ತೀಚೆಗೆ ಕಂಡುಹಿಡಿಯಲಾಗಿದೆ. ಮೊಟ್ಟ ಮೊದಲ ಬಾರಿಗೆ, ಇದಕ್ಕೆ ಸಂಬಂಧಪಟ್ಟ ಸಂಶೋಧನೆ ಕೆನಡಾದಲ್ಲಿ ಬ್ರಿಟಿಷ್ ಕೋಲಂಬಿಯಾದಲ್ಲಿ ೫ ಪ್ರಮುಖ ಸಂಶೋಧನಾಲಯಗಳ ವಿಜ್ಞಾನಿಗಳ ತಂಡ ೬,೦೦೦ ಅಡಿಗಳೆತ್ತರದ ಪರ್ವತ ಪ್ರದೇಶದ ಮೇಲೆ ಕೆಲವು ಮರಗಳ ಬೇರು, ಕೊಂಬೆಗಳು, ಎಲೆಗಳು, ಹಾಗೂ ಬೀಜಗಳನ್ನು ಆಯ್ದು ತಂದು ಬೇರೆಬೇರೆ ಪೆಟ್ಟಿಗೆಗಳಲ್ಲಿ ತುಂಬಿ ಪ್ರತಿಯೊಂದನ್ನು ಗುರುತು ಮಾಡಿಟ್ಟುಕೊಂಡರು. ಈ ಮರಗಳ ಭಾಗಗಳನ್ನು ಬೂದಿಮಾಡಿ ವೈಜ್ಞಾನಿಕ ಪ್ರಯೋಗಾಲಯದಲ್ಲಿ ಅದಮ್ನ ಪರೀಕ್ಷಿಸಿ ಗುರುತು ಮಾಡಿಟ್ಟು ಕೊಳ್ಳಲಾಯಿತು. ಪ್ರತಿಯೊಂದು ಸಣ್ಣ ಕಣವನ್ನು ಪರೀಕ್ಷಿಸಿ ಅವುಗಳಲ್ಲಿ ಏನಾದರೂ ಖನಿಜಗಳಿವೆಯೆ? ಎಂಬುದನ್ನು ಪರೀಕ್ಷಿಸಿದರು. ಆಗ ಆ ಬೂದಿಗಳಲ್ಲಿ ಚಿನ್ನ, ತಾಮ್ರ, ಸತುವು, ಬೇರೆಬೇರೆ ಖನಿಜಗಳ ಅಂಶ ಬೆಳಕಿಗೆ ಬಂದಿತು. ಕೂಡಲೇ ಕಾರ್ಯ ಪ್ರವೃತ್ತವಾದ ತಂಡ ಆ ಮರಗಳ ಅಡಿಯಲ್ಲಿ ಆಳ ಆಳಕ್ಕೆ ಆಗಿಯಲಾರಂಭಿಸಿದರು ಆಗ ಹೆಚ್ಚು ಹೆಚ್ಚು ಖನಿಜಗಳು ದೊರೆಯಲಾರಂಭಿಸಿದವು. ಚಿನ್ನದ ಅದಿರುಗಳಿದ್ದ ಭೂ ಪ್ರದೇಶದ ಮೇಲೆ ೫ ಬೇರೆಬೇರೆ ಜಾತಿಯ ಫರ್ ಮರಗಳು ಬೆಳೆಯುತ್ತವೆ. ಪ್ರತಿಯೊಂದು ಮರವು ಒಂದೇ ಪ್ರಮಾಣದಲ್ಲಿ ಚಿನ್ನದ ಅದಿರನ್ನು ತನ್ನ ಅಡಿಯಲ್ಲಿಟ್ಟುಕೊಂಡಿತ್ತು. ಹೀಗಾಗಿ ಈ ತರಹದ ಮರಗಳು ಸುದ್ದಿ ನೀಡುವ ಮರಗಳಾದವು.

ಇನ್ನೂ ಕೆಲವು ಮರಗಳ ಬೇರಿನಾಳದಲ್ಲಿ ಯುರೇನಿಯಂ, ಹಾಗೂ ವೆನೀಡಿಯಮ್ ಲೋಹಗಳ ಅದಿರುಗಳು ಪತ್ತೆಯಾಗಿವೆ. ಇವು ವಿಶಿಷ್ಟ ಮರಗಳು. ವಿಜ್ಞಾನಿಗಳು ಈ ಮರಗಳ ಹೆಸರನ್ನು ಸೂಚಿಸಿಲ್ಲ. ಉತ್ತರ ಅಮೇರಿಕಾದ ಸಮೀಪದಲ್ಲಿ ಆರಿಜೋನಾದ ಸ್ಕಾಸ್‌ಮ್ಯಾನ್ಯುಯಲ್ ಭೂ ಪ್ರದೇಶ ತಾಮ್ರದ ಖನಿಜಗಳಿಂದ ತುಂಬಿದೆ ಎಂದು ಕೆಲವು ಮರಗಳು ಸುದ್ದಿಕೊಟ್ಟವು. ಜೈವಿಕ ಭೂ ಗರ್ಭಶಾಸ್ತ್ರಜ್ಞರು ಸು.೨೦ ಅಡಿಗಳಷ್ಟು ಎತ್ತರವಾಗಿ ಬೆಳೆಯುವ ಎರಡು ಜಾತಿಯ ಓಕ್ ಮರಗಳು ಬೆಳೆದ ಬುಡದಲ್ಲಿ ತಾಮ್ರದ ನಿಕ್ಷೇಪಗಳಿರುವುದನ್ನು ಪತ್ತೆಹಚ್ಚಿದರು. ಕಿತ್ತಳೆ ವರ್ಣದ ಹೂಗಳಿಂದ ಕೂಡಿದ್ದ ಸಾವಿರಾರು ಗಸೆಗಸೆ ಮರಗಳ ಅಡಿಯಲ್ಲಿಯೂ ತಾಮ್ರದ ಇರುವನ್ನೂ ಕಂಡು ಹಿಡಿಯಲಾಯಿತು. ಕುರುಚಲುಭೂರ್ಜ(ಒಂದು ಜಾತಿಯ ಕಾಡುಮರ) ಮತ್ತು ಹಲವು ಜಾತಿಯ ಪಾಚಿಗಳು ಬೆಳೆಯುವ ಭೂಪ್ರದೇಶದ ಗರ್ಭದಲ್ಲಿ ಸತು ಹಾಗೂ ತಾಮ್ರದ ಖನಿಜಗಳು ಅಡಗಿರುತ್ತವೆ. ಎಂದು ತಿಳಿದು ಬಂದಿದೆ. ಡೌಗ್ಲಾಸ್‌ಫರ್, ಎಂಬ ಮರಗಳು ಬೆಳೆಯುವ ಭೂಮಿಯು ಆರ್ಸೆನಿಕ್ ಬೆಳ್ಳಿ ಮತ್ತು ಚಿನ್ನಗಳ ತವರುಮನೆಯಾಗಿದೆ ಎಂದು ಸಂಶೋದಿಸಿದರು, ಸಾದರ ಪಡಿಸಿದರು. ನಿಂಬೆ ಹಾಗೂ ಭೂರ್ಜ ಸಸ್ಯಗಳು ಸೀಸ ಎಂಬ ಖನಿಜ ಇರುವ ಸೂಚನೆ ನೀಡುತ್ತವೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...