Home / ಕವನ / ಕವಿತೆ / ಏನಿದು ದೆವ್ವ ಏನಿದು ಬೆಂಕಿ?

ಏನಿದು ದೆವ್ವ ಏನಿದು ಬೆಂಕಿ?

ಪುಸ್ತಕಗಳಿವೆ ಅವು ಇರಬೇಕಾದ ಜಾಗದಲ್ಲಿ ಮರದ
ಆಟಿಕೆಗಳಲ್ಲಿ ಒಪ್ಪ ಓರಣವಾಗಿ ಪೆಪಿರಸ್ ಹಾಳೆಗಳಲ್ಲಿ
ಆದರೆ ಯಾಕೆ ಕಳೆದೊಂದು ವಾರದಿಂದಲು ಯಾವ
ಓದುಗರೂ ಬಂದಿಲ್ಲ-ಒಬ್ಬ ವೃದ್ಧ ವಿದ್ವಾಂಸನ ಹೊರತು?
ಆತ ಪ್ರತಿದಿನ ಬರುವವ ಗ್ರಂಥಾಲಯ ತೆರೆಯಲು ಕಾಯುವವ
ಇಡೀ ದಿನ ಇದ್ದು
ಮುಚ್ಚುವ ವೇಳೆ ಗೊಣಗುವವ
ಅವನಿಗೋಸ್ಕರವೆ ಬರುವಂತೆ ಬರುತ್ತಾನೆ ಗ್ರಂಥಪಾಲಕ
ಗ್ರಂಥಪಾಲಕನ ಮುಖದಲ್ಲೇನೋ ಸಾರ್ಥಕತೆ ಮತ್ತು ದುಗುಡ
ಏಕ ಕಾಲಕ್ಕೆ
ಕಸ ತೆಗವ ಆ ಸುಂದರ ಹುಡುಗಿಯೂ ಬರುತ್ತಿಲ್ಲ
ಕಿಟಿಕಿ ಮುಚ್ಚಿದರೂ ಬಂದು ಬೀಳುತ್ತದೆ ಉತ್ತರದಿಂದ ಧೂಳು ಕಸ
ಕೂತುಕೊಳ್ಳುತ್ತವೆ ಪ್ರತಿ ಪುಸ್ತಕದ ಮೇಲೆ
ಆ ಹುಡುಗಿಯ ಕೈಯ ಮಖಮಲ್ಲಿನ ವಸ್ತ್ರದ ಸುಖ
ಇವುಗಳ ಮೈಗೀಗ ಇಲ್ಲ
ಏನಾಗಿದೆ ಎಲ್ಲರಿಗೆ?
ಪುಸ್ತಕಗಳಿಗೆ ಗೊತ್ತಿಲ್ಲ
ಕೊಳ್ಳಿದೆವ್ವಗಳು ಬರುತ್ತಿದ್ದಾವೆ ಕತ್ತಲ ಕೂಪದಿಂದ ಅವು ಅಕ್ಷರ ದ್ವೇಷಿಗಳು
ಇಷ್ಟೊಂದು ದೊಡ್ಡ ಭಂಡಾರ ಉರಿಯಲೂ ಸಮಯ ಬೇಕು
ದೆವ್ವಗಳಿಗೆ ಅಸಹನೆ ಒಂದೇ ಒಂದು ಹಾಳೆಯನ್ನೂ ಬಿಡದೆ
ಉರಿಸಿದರೇ ತೃಪ್ತಿ
ಕವಿಗಳು ಕಲಾವಿದರು ವಿಜ್ಞಾನಿಗಳೀಗ ಭಸ್ಮೀಭೂತ ನಾಮಿಕರು ಅನಾಮಿಕರು
ಈ ಭೂರಿ ದಹನದಿಂದ ಲೋಕ ಚೇತರಿಸಿಕೊಳ್ಳುವುದಕ್ಕೆ ಇನ್ನು
ಅದೆಷ್ಟೋ ಕಾಲ ಬೇಕು ಆದರೂ ಕೊಳ್ಳಿ ದೆವ್ವಗಳು ನಾಶವಾಗುವುದಿಲ್ಲ ಯಾವತ್ತಿಗೂ
ಅವಕ್ಕೀಗ ಇರುಳ ಆಶ್ರಯ ಬೇಡ ಹಾಡು ಹಗಲೇ ಸುತ್ತಾಡುತ್ತವೆ
ಬೆಂಕಿ ಕಾಣುವುದಿಲ್ಲ ಆದರೂ ಬೆಂಕಿಯಿದೆ
ತೂಕಡಿಸುವ ಓದುಗರ ಮೈಮನಸು ನುಗ್ಗಿ
ತೀರಿಸಿಕೊಳ್ಳಲು ತಮ್ಮ ಕಾಲಾಂತರದ ಹಗೆ
ವೃದ್ಧ ವಿದ್ವಾಂಸನಿಗದು ಗೊತ್ತಿದೆಯೇ ಇಷ್ಟೊಂದು ಓದುತ್ತ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...