Home / ಕವನ / ಕವಿತೆ / ಏನಿದು ದೆವ್ವ ಏನಿದು ಬೆಂಕಿ?

ಏನಿದು ದೆವ್ವ ಏನಿದು ಬೆಂಕಿ?

ಪುಸ್ತಕಗಳಿವೆ ಅವು ಇರಬೇಕಾದ ಜಾಗದಲ್ಲಿ ಮರದ
ಆಟಿಕೆಗಳಲ್ಲಿ ಒಪ್ಪ ಓರಣವಾಗಿ ಪೆಪಿರಸ್ ಹಾಳೆಗಳಲ್ಲಿ
ಆದರೆ ಯಾಕೆ ಕಳೆದೊಂದು ವಾರದಿಂದಲು ಯಾವ
ಓದುಗರೂ ಬಂದಿಲ್ಲ-ಒಬ್ಬ ವೃದ್ಧ ವಿದ್ವಾಂಸನ ಹೊರತು?
ಆತ ಪ್ರತಿದಿನ ಬರುವವ ಗ್ರಂಥಾಲಯ ತೆರೆಯಲು ಕಾಯುವವ
ಇಡೀ ದಿನ ಇದ್ದು
ಮುಚ್ಚುವ ವೇಳೆ ಗೊಣಗುವವ
ಅವನಿಗೋಸ್ಕರವೆ ಬರುವಂತೆ ಬರುತ್ತಾನೆ ಗ್ರಂಥಪಾಲಕ
ಗ್ರಂಥಪಾಲಕನ ಮುಖದಲ್ಲೇನೋ ಸಾರ್ಥಕತೆ ಮತ್ತು ದುಗುಡ
ಏಕ ಕಾಲಕ್ಕೆ
ಕಸ ತೆಗವ ಆ ಸುಂದರ ಹುಡುಗಿಯೂ ಬರುತ್ತಿಲ್ಲ
ಕಿಟಿಕಿ ಮುಚ್ಚಿದರೂ ಬಂದು ಬೀಳುತ್ತದೆ ಉತ್ತರದಿಂದ ಧೂಳು ಕಸ
ಕೂತುಕೊಳ್ಳುತ್ತವೆ ಪ್ರತಿ ಪುಸ್ತಕದ ಮೇಲೆ
ಆ ಹುಡುಗಿಯ ಕೈಯ ಮಖಮಲ್ಲಿನ ವಸ್ತ್ರದ ಸುಖ
ಇವುಗಳ ಮೈಗೀಗ ಇಲ್ಲ
ಏನಾಗಿದೆ ಎಲ್ಲರಿಗೆ?
ಪುಸ್ತಕಗಳಿಗೆ ಗೊತ್ತಿಲ್ಲ
ಕೊಳ್ಳಿದೆವ್ವಗಳು ಬರುತ್ತಿದ್ದಾವೆ ಕತ್ತಲ ಕೂಪದಿಂದ ಅವು ಅಕ್ಷರ ದ್ವೇಷಿಗಳು
ಇಷ್ಟೊಂದು ದೊಡ್ಡ ಭಂಡಾರ ಉರಿಯಲೂ ಸಮಯ ಬೇಕು
ದೆವ್ವಗಳಿಗೆ ಅಸಹನೆ ಒಂದೇ ಒಂದು ಹಾಳೆಯನ್ನೂ ಬಿಡದೆ
ಉರಿಸಿದರೇ ತೃಪ್ತಿ
ಕವಿಗಳು ಕಲಾವಿದರು ವಿಜ್ಞಾನಿಗಳೀಗ ಭಸ್ಮೀಭೂತ ನಾಮಿಕರು ಅನಾಮಿಕರು
ಈ ಭೂರಿ ದಹನದಿಂದ ಲೋಕ ಚೇತರಿಸಿಕೊಳ್ಳುವುದಕ್ಕೆ ಇನ್ನು
ಅದೆಷ್ಟೋ ಕಾಲ ಬೇಕು ಆದರೂ ಕೊಳ್ಳಿ ದೆವ್ವಗಳು ನಾಶವಾಗುವುದಿಲ್ಲ ಯಾವತ್ತಿಗೂ
ಅವಕ್ಕೀಗ ಇರುಳ ಆಶ್ರಯ ಬೇಡ ಹಾಡು ಹಗಲೇ ಸುತ್ತಾಡುತ್ತವೆ
ಬೆಂಕಿ ಕಾಣುವುದಿಲ್ಲ ಆದರೂ ಬೆಂಕಿಯಿದೆ
ತೂಕಡಿಸುವ ಓದುಗರ ಮೈಮನಸು ನುಗ್ಗಿ
ತೀರಿಸಿಕೊಳ್ಳಲು ತಮ್ಮ ಕಾಲಾಂತರದ ಹಗೆ
ವೃದ್ಧ ವಿದ್ವಾಂಸನಿಗದು ಗೊತ್ತಿದೆಯೇ ಇಷ್ಟೊಂದು ಓದುತ್ತ?
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್