Home / ಕವನ / ಕವಿತೆ / ಏನಿದು ದೆವ್ವ ಏನಿದು ಬೆಂಕಿ?

ಏನಿದು ದೆವ್ವ ಏನಿದು ಬೆಂಕಿ?

ಪುಸ್ತಕಗಳಿವೆ ಅವು ಇರಬೇಕಾದ ಜಾಗದಲ್ಲಿ ಮರದ
ಆಟಿಕೆಗಳಲ್ಲಿ ಒಪ್ಪ ಓರಣವಾಗಿ ಪೆಪಿರಸ್ ಹಾಳೆಗಳಲ್ಲಿ
ಆದರೆ ಯಾಕೆ ಕಳೆದೊಂದು ವಾರದಿಂದಲು ಯಾವ
ಓದುಗರೂ ಬಂದಿಲ್ಲ-ಒಬ್ಬ ವೃದ್ಧ ವಿದ್ವಾಂಸನ ಹೊರತು?
ಆತ ಪ್ರತಿದಿನ ಬರುವವ ಗ್ರಂಥಾಲಯ ತೆರೆಯಲು ಕಾಯುವವ
ಇಡೀ ದಿನ ಇದ್ದು
ಮುಚ್ಚುವ ವೇಳೆ ಗೊಣಗುವವ
ಅವನಿಗೋಸ್ಕರವೆ ಬರುವಂತೆ ಬರುತ್ತಾನೆ ಗ್ರಂಥಪಾಲಕ
ಗ್ರಂಥಪಾಲಕನ ಮುಖದಲ್ಲೇನೋ ಸಾರ್ಥಕತೆ ಮತ್ತು ದುಗುಡ
ಏಕ ಕಾಲಕ್ಕೆ
ಕಸ ತೆಗವ ಆ ಸುಂದರ ಹುಡುಗಿಯೂ ಬರುತ್ತಿಲ್ಲ
ಕಿಟಿಕಿ ಮುಚ್ಚಿದರೂ ಬಂದು ಬೀಳುತ್ತದೆ ಉತ್ತರದಿಂದ ಧೂಳು ಕಸ
ಕೂತುಕೊಳ್ಳುತ್ತವೆ ಪ್ರತಿ ಪುಸ್ತಕದ ಮೇಲೆ
ಆ ಹುಡುಗಿಯ ಕೈಯ ಮಖಮಲ್ಲಿನ ವಸ್ತ್ರದ ಸುಖ
ಇವುಗಳ ಮೈಗೀಗ ಇಲ್ಲ
ಏನಾಗಿದೆ ಎಲ್ಲರಿಗೆ?
ಪುಸ್ತಕಗಳಿಗೆ ಗೊತ್ತಿಲ್ಲ
ಕೊಳ್ಳಿದೆವ್ವಗಳು ಬರುತ್ತಿದ್ದಾವೆ ಕತ್ತಲ ಕೂಪದಿಂದ ಅವು ಅಕ್ಷರ ದ್ವೇಷಿಗಳು
ಇಷ್ಟೊಂದು ದೊಡ್ಡ ಭಂಡಾರ ಉರಿಯಲೂ ಸಮಯ ಬೇಕು
ದೆವ್ವಗಳಿಗೆ ಅಸಹನೆ ಒಂದೇ ಒಂದು ಹಾಳೆಯನ್ನೂ ಬಿಡದೆ
ಉರಿಸಿದರೇ ತೃಪ್ತಿ
ಕವಿಗಳು ಕಲಾವಿದರು ವಿಜ್ಞಾನಿಗಳೀಗ ಭಸ್ಮೀಭೂತ ನಾಮಿಕರು ಅನಾಮಿಕರು
ಈ ಭೂರಿ ದಹನದಿಂದ ಲೋಕ ಚೇತರಿಸಿಕೊಳ್ಳುವುದಕ್ಕೆ ಇನ್ನು
ಅದೆಷ್ಟೋ ಕಾಲ ಬೇಕು ಆದರೂ ಕೊಳ್ಳಿ ದೆವ್ವಗಳು ನಾಶವಾಗುವುದಿಲ್ಲ ಯಾವತ್ತಿಗೂ
ಅವಕ್ಕೀಗ ಇರುಳ ಆಶ್ರಯ ಬೇಡ ಹಾಡು ಹಗಲೇ ಸುತ್ತಾಡುತ್ತವೆ
ಬೆಂಕಿ ಕಾಣುವುದಿಲ್ಲ ಆದರೂ ಬೆಂಕಿಯಿದೆ
ತೂಕಡಿಸುವ ಓದುಗರ ಮೈಮನಸು ನುಗ್ಗಿ
ತೀರಿಸಿಕೊಳ್ಳಲು ತಮ್ಮ ಕಾಲಾಂತರದ ಹಗೆ
ವೃದ್ಧ ವಿದ್ವಾಂಸನಿಗದು ಗೊತ್ತಿದೆಯೇ ಇಷ್ಟೊಂದು ಓದುತ್ತ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...