Home / ಕವನ / ಕವಿತೆ / ಬೆಳದಿಂಗಳ ಬಾಲೆ

ಬೆಳದಿಂಗಳ ಬಾಲೆ

ತೋಟಕ ಬಾರೆ ಬೆಳದಿಂಗಳ ಬಾಲೆ
ತೋಟಕೆ ಬಾ ಊಟಕೆ ಬಾ
ಕಾದಿರುವೆನು ನಾ
ಬೆಳದಿಂಗಳ ಬಾಲೆ

ಎಂತು ಅರಳಿವೆ ನೋಡು ಇರುಳ ಹೂವುಗಳು
ಗಿಡಗಳ ಮೇಲೆ ನಿಂತು ಕಾದಿವೆ ಅವು ನಿನಗಾಗಿ
ಸಂಜೆ ಮಲ್ಲಿಗೆ ರಾತ್ರಿ ಮಲ್ಲಿಗೆ
ಇರುಳ ರಾಣಿಯರ ಕಂಪು ಹಗುರವಾಗಿ

ಇಬ್ಬನಿಯ ತಂಪು ಒಂದೊಂದು ಎಲೆಯಿಂದ
ಹನಿಯಾಗಿ ಬೀಳುವುದು ಹುಲ್ಲ ಮೇಲೆ
ತಿಳಿಮೋಡಗಳ ರಾಸಿ ಬಿಳಿಯಾಗಿ ಆಕಾಶ
ಗಾಳಿ ಸುಳಿಯುವುದು ಸ್ವಚ್ಛಂದದಿಂದ

ನೀ ಬಂದು ಮುಟ್ಟಿದರೆ ಮುಟ್ಟಿದುದು ಅಮೃತವೆ
ನೀ ಬಂದು ತಟ್ಟಿದರೆ ತಟ್ಟಿದುದು ಋತವೆ
ಕುಡಿದುದೇ ಪಾನ ಹಾಡಿದುದೆ ಗಾನ
ಮಾತನಾಡುವುದು ಯಾಮಿನಿಯ ಮೌನ

ಏನಿದದ್ಭುತವು
ಕಾನು ಬೆಳಗುವುದು ಕಾನನವು ಹೊಳೆಯುವುದು
ಜಗವೆ ತೊಳೆಯುವುದು
ಮನ ಬೆರಗಾಗುವುದು
ನೆಲಜಲ ಚರಾಚರವೆ ತುಡಿಯುವುದು
ಎದ್ದು ಕುಣಿಯುವುದು
ನಿನ್ನ ಆಗಮನಕೆ

ಗೀತ ನಿನ್ನದು ಸಂಗೀತ ನಿನ್ನದು
ರಾತ್ರಿ ಮುಗಿಯುವ ವರೆಗೆ
ಗಾಯನ ನಿನ್ನದು ನರ್‍ತನ ನಿನ್ನದು
ಇಡೀ ರಾತ್ರಿಯೇ ನಿನ್ನ ಸೆರೆಗೆ

ಗೆಜ್ಜೆ ನಿನ್ನದು ಹೆಜ್ಜೆ ನಿನ್ನದು
ಗೆಜ್ಜೆಪಾದದ ಲಜ್ಜೆಯೂ ನಿನ್ನದು
ಲಾಸ್ಯ ನಿನ್ನದು ಮೃದುಹಾಸ್ಯ ನಿನ್ನದು
ಮಧುರ ನಿನ್ನದು ಮಾಧುರ್‍ಯವೂ ನಿನ್ನದು

ಸಾವಿರ ವರ್‍ಷ ಬೇಡ
ಇನ್ನಿಲ್ಲದ ಹರ್‍ಷ ಬೇಡ
ನಿನ್ನೊಂದು ಸ್ಪರ್‍ಶವಲ್ಲದೆ
ನನಗಿನ್ನೇನು ಬೇಡ

ಕ್ಷಣವೊಂದೆ ಸಾಕು
ಅದುವೆ ಕಲ್ಪ ನನಗೆ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...