Home / ಕವನ / ಕವಿತೆ / ಬೆಳದಿಂಗಳ ಬಾಲೆ

ಬೆಳದಿಂಗಳ ಬಾಲೆ

ತೋಟಕ ಬಾರೆ ಬೆಳದಿಂಗಳ ಬಾಲೆ
ತೋಟಕೆ ಬಾ ಊಟಕೆ ಬಾ
ಕಾದಿರುವೆನು ನಾ
ಬೆಳದಿಂಗಳ ಬಾಲೆ

ಎಂತು ಅರಳಿವೆ ನೋಡು ಇರುಳ ಹೂವುಗಳು
ಗಿಡಗಳ ಮೇಲೆ ನಿಂತು ಕಾದಿವೆ ಅವು ನಿನಗಾಗಿ
ಸಂಜೆ ಮಲ್ಲಿಗೆ ರಾತ್ರಿ ಮಲ್ಲಿಗೆ
ಇರುಳ ರಾಣಿಯರ ಕಂಪು ಹಗುರವಾಗಿ

ಇಬ್ಬನಿಯ ತಂಪು ಒಂದೊಂದು ಎಲೆಯಿಂದ
ಹನಿಯಾಗಿ ಬೀಳುವುದು ಹುಲ್ಲ ಮೇಲೆ
ತಿಳಿಮೋಡಗಳ ರಾಸಿ ಬಿಳಿಯಾಗಿ ಆಕಾಶ
ಗಾಳಿ ಸುಳಿಯುವುದು ಸ್ವಚ್ಛಂದದಿಂದ

ನೀ ಬಂದು ಮುಟ್ಟಿದರೆ ಮುಟ್ಟಿದುದು ಅಮೃತವೆ
ನೀ ಬಂದು ತಟ್ಟಿದರೆ ತಟ್ಟಿದುದು ಋತವೆ
ಕುಡಿದುದೇ ಪಾನ ಹಾಡಿದುದೆ ಗಾನ
ಮಾತನಾಡುವುದು ಯಾಮಿನಿಯ ಮೌನ

ಏನಿದದ್ಭುತವು
ಕಾನು ಬೆಳಗುವುದು ಕಾನನವು ಹೊಳೆಯುವುದು
ಜಗವೆ ತೊಳೆಯುವುದು
ಮನ ಬೆರಗಾಗುವುದು
ನೆಲಜಲ ಚರಾಚರವೆ ತುಡಿಯುವುದು
ಎದ್ದು ಕುಣಿಯುವುದು
ನಿನ್ನ ಆಗಮನಕೆ

ಗೀತ ನಿನ್ನದು ಸಂಗೀತ ನಿನ್ನದು
ರಾತ್ರಿ ಮುಗಿಯುವ ವರೆಗೆ
ಗಾಯನ ನಿನ್ನದು ನರ್‍ತನ ನಿನ್ನದು
ಇಡೀ ರಾತ್ರಿಯೇ ನಿನ್ನ ಸೆರೆಗೆ

ಗೆಜ್ಜೆ ನಿನ್ನದು ಹೆಜ್ಜೆ ನಿನ್ನದು
ಗೆಜ್ಜೆಪಾದದ ಲಜ್ಜೆಯೂ ನಿನ್ನದು
ಲಾಸ್ಯ ನಿನ್ನದು ಮೃದುಹಾಸ್ಯ ನಿನ್ನದು
ಮಧುರ ನಿನ್ನದು ಮಾಧುರ್‍ಯವೂ ನಿನ್ನದು

ಸಾವಿರ ವರ್‍ಷ ಬೇಡ
ಇನ್ನಿಲ್ಲದ ಹರ್‍ಷ ಬೇಡ
ನಿನ್ನೊಂದು ಸ್ಪರ್‍ಶವಲ್ಲದೆ
ನನಗಿನ್ನೇನು ಬೇಡ

ಕ್ಷಣವೊಂದೆ ಸಾಕು
ಅದುವೆ ಕಲ್ಪ ನನಗೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...