Home / ಕವನ / ಕವಿತೆ / ಯಿಸ್ಸಾಮಿತ್ರ ರತ್ನ

ಯಿಸ್ಸಾಮಿತ್ರ ರತ್ನ

ಲೋಕ ಸುಂಕೆ ಕೆಟ್ಟೋಗೈತೆ !
ಪೂರ ! ತುಂಬ! ಬಾಳ !
ಬೂತಗೊಳ್ ಯಿಗ್ತ ಕುಣದ್ರೆ- ಅದೊ!
ದೆಯ್ಗೊಳ್ ಆಕೊ ತಾಳ! ೧

ದುಡ್ಡಿಗ್ ಕಚ್ಚು ವೊಟ್ಟೇಗಿಚ್ಚು
ಏನ್ ಎಂಗ್ ಎಚ್ಕೊಂಡೈತೆ!
ಸುಕ ಸಾಂತಿ ತ್ರುಪ್ತಿ ಎಲ್ಕು
ಬಾಗಿಲ್ ಮುಚ್ಕೊಂಡೈತೆ! ೨

ಐಕುಂಟ್ದ್ ಅಪ್ನಂಗ್ ಇದ್ ನಂ ದೇಸ
ಈಗ್ ಎಂಗೈತೆ ನೋಡು!
ಕಟಕರ್ ಕೋಣೆ! ನರಕಕ್ ಆಪ್ಪ!
ಬದಿಕಿರೋರ್ ಸುಡಗಾಡು! ೩

ಮುನ್ನೂರ್ ಮುವ್ವತ್ ಕೋಟಿ ದೇವ್ರೂ
ಸುಂಕೆ ಕುಂತ್ಕಂಡೌರೆ!
ನರಳೋರ್ ಗೋಳ್ಗೆ ಕಿವಿ ಮುಚ್ಕೊಂಡಿ
ಸತ್ತಂಗ್ ಬಿದ್ಕೊಂಡೌರೆ! ೪

ದೇವ್ರಂತ್ ಅನ್ನೋ ದೊಡ್ ಯೆಸರ್‌ ಬೇಕು-
ಪದವಿ ಸಂಬ್ಳ ಬೇಕು;
ಕಟ್ಕೊಂಡ್ ಕೆಲಸ ಮಾಡ್ದಿದ್ರೂನೆ-
ಆಹ! ಏನ್ ನಿಂ ಜೋಕು! ೫

ದೇವ್ರು ಗಿವ್ರು ಅನ್ಕೊಂಡ್ ಇದ್ರೆ
ನಮಗ್ ಈಗ್ ಉದ್ದಾರ್ ಇಲ್ಲ!
ದೇವ್ರಿಗೆ ದೇವ್ರೆ! ನಮಗೇ ನಾವೇ!
ಬೆಳದವರ್ ಪಾಲಿಗ್ ಬೆಲ್ಲ! ೬

ಬದಕ್‌ಬೇಕಂದ್ರೆ-ಈ ಲೋಕ್ದಿಂದ
ಬಚಾವ್ ಆಗ್ಬೇಕ್ ತುರ್‍ತು;
ನಮ್ದೆ ಲೋಕ ವುಟ್ಟಿಸ್ಕೊ ಬೇಕು
ಈ ಲೋಕಾನೆ ಮರ್‍ತು! ೭

‘ಇನ್ನೊಬ್ಬ್ ಇಂದ್ರನ್ ಕರಿಸ್ತೀನಿ’
ಅಂದಂಗ್ ಯಿಸ್ಸಾಮಿತ್ರ-
‘ನನ್ದೇ ಲೋಕ ಕಟ್ಕೋಂತೀನಿ’
ಅನ್ನೊದ್ ರತ್ನನ್ ಅತ್ರ! ೮
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...