Home / ಲೇಖನ / ವಿಜ್ಞಾನ / ಸಸ್ಯಗಳಿಂದ ಏಡ್ಸ್, ನೀರೋಧಕ ಚುಚ್ಚು ಮದ್ದು

ಸಸ್ಯಗಳಿಂದ ಏಡ್ಸ್, ನೀರೋಧಕ ಚುಚ್ಚು ಮದ್ದು

‘ಏಡ್ಸ್’ರೋಗವೆಂದರೆ ಮಾರಕವೆಂದು, ಮರಣಾಂತಿಕವೆಂದೂ ಜನ ಹೆದರುತ್ತಾರೆ. ಇದರ ಶಮನಕ್ಕೆ ಅನೇಕ ಔಷಧಿಗಳು ಬಂದರೂ ಅಷ್ಟೇನೂ ಪರಿಣಾಮ ಬೀರಿಲ್ಲ. ಇಂಥಹ ರೋಗಗಳ ನಿವಾರಣೆಗಾಗಿ ಇತ್ತೀಚೆಗೆ ಜೈವ ತಂತ್ರಜ್ಞಾನ ವಿಧಾನಗಳಿಂದ ಸಸ್ಯಾಧಾರಿತ ಔಷಧಗಳನ್ನು ತಯಾರಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಈ ವಿಧಾನಕ್ಕೆ Chemical virus particle platform-cvvp ಎಂದು ಕರೆಯುತ್ತಾರೆ. ಕೇಂಬ್ರಿಚ್ಡ್ ವಿಶ್ವದ್ಯಾನಿಲಯದ ಪ್ರಯೋಗಾಲಯದಲ್ಲಿ ಪೆಪ್ಟೈಡ್, ಮತ್ತು ಪ್ರೊಟೀನ್‌ಗಳನ್ನು ಬೆಳೆಸಿ ನಂತರ ಈ ಎರಡರಿಂದ ಚುಚ್ಚುಮದ್ದು ಮತ್ತು ಔಷಧಿಯನ್ನು ತಯಾರಿಸುವ ಸಂಶೋಧನೆಯಾಗಿದೆ. ಕೆಲವೇ ದಿನಗಳಲ್ಲಿ ಸಸ್ಯಗಳ ಭಾಗದಲ್ಲಿ ಪೆಪ್ಟೈಡ್ ಬೆಳೆಯಲು ಆರಂಭಿಸುತ್ತದೆ. ಅದೇವೇಳೆಗೆ ಸಸ್ಯಗಳ ಒಳನುಗ್ಗಿದ ಸಂಶೋಧಿತ ವಿಷಾಣು (Virus) ಗಳು ವಿಭಜನೆಯಿಂದ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಈ ವಿಷಾಣುಗಳನ್ನು ಈಗ ಕಣ ರೂಪದಲ್ಲಿ ಸುಲಭವಾಗಿ ಬೇರ್‍ಪಡಿಸಬಹುದು. ಈ ಎಲ್ಲ ಕಣಗಳಲ್ಲಿ ಪೆಪ್ಟೈಡ್ ಮತ್ತು ಪ್ರೊಟೀನ್‌ಗಳ ಬಹುಖಂಡ ಪ್ರತಿಗಳು ಇರುತ್ತವೆ. ಹೀಗೆ ತಯಾರಾದ ಪೆಪ್ಟೈಡ್‌ ಮತ್ತು ಪ್ರೊಟೀನ್‌ಗಳನ್ನು ಪರಿಶ್ಕರಿಸಿ ಪ್ರಾರಂಭಿಕ ಇಂಜಕ್ಷನ್ ಮೂಲಕ ಕೊಡುವ ಚುಚ್ಚು ಮದ್ದನ್ನು ತಯಾರು ಮಾಡಬಹುದು. ಈಗ ವಿಷಾಣು ಚುಚ್ಚಿಸಿಕೊಂಡ ಸಸ್ಯಗಳ ಎಲೆಗಳಿಂದ ಪೆಪ್ಟೈಡ್‌ ಮತ್ತು ಪ್ರೋಟೀನ್‌ಗಳನ್ನು ಹೊರತೆಗೆಯುವ ಕಾರ್‍ಯಸಾಗಿದೆ.

ಬ್ರಿಟನ್ನಿನ ವಿಜ್ಞಾನಿಗಳ ಪ್ರಕಾರ ಸಸ್ಯ ಮತ್ತು ವಿಷಾಣುಗಳ ವಂಶವಾಹಿನಿಗಳ ಪ್ರಕ್ರಿಯೆಯಿಂದ ಇಂಥಹ ಸಕ್ರಿಯ ಪೆಪ್ಟೈಡ್‌ನಿಂದ ಮುಂದಿನ ಒಂದು ದಶಕದ ಒಳಗಾಗಿ ಮನುಷ್ಯ ಮತ್ತು ಪಶುಗಳಿಗೆ ಉತ್ತಮ ಚುಚ್ಚುಮದ್ದು ಹಾಗೂ ಇತರ ಔಷಧಿಗಳನ್ನು ತಯಾರುಮಾಡಬಹುದಾಗಿದೆ. ಸಸ್ಯಗಳಿಂದ ಪಡೆದ ವಿಷಾಣುಗಳು ಶರೀರದ ತಾಪಮಾನಕ್ಕೆ ಸ್ಥಿರವಾಗಿರುತ್ತವೆ. ಅಲ್ಲದೇ ಅವುಗಳ ಮೇಲೆ ಆಮ್ಲ ಮತ್ತು ಪಾಚಕ ಎಂಜಾಮ್‌ (ಕಿಣ್ವಗಳೂ ಪ್ರಭಾವ ಬಿರುವುದಿಲ್ಲ. ಆದ್ದರಿಂದ ಇದರ ಚುಚ್ಚುಮದ್ದಿನ ಬದಲಾಗಿ ನೇರವಾಗಿ ಬಾಯಿಂದ ನುಂಗುವ ಔಷಧಿಯಂತೆಯೂ ಬಳಸಬಹುದು. ಸಸ್ಯಗಳಿಂದ ಚುಚ್ಚುಮದ್ದು ಮತ್ತು ಔಷಧಿಗಳನ್ನು ತಯಾರಿಸುವ ಸಂಶೋಧನೆಗಾಗಿ ನೆದರ್ಲ್ಯಾಂಡ್ ಪ್ರಾಣಿವಿಜಾನ ಮತ್ತು ಆರೋಗ್ಯ ಸಂಸ್ಥೆ ಹಾಗೂ ಡೆನ್ಮಾರ್ಕಿನ ಸ್ಟೇಟ್ ವೆಟರ್ನರಿ ಇನ್‌ಸ್ಟಿಟ್ಯೂಟ್ ಫಾರ್ ವೈರಾ‌ಲಜಿಯಂತಹ ಸಂಸ್ಥೆಗಳು ಸಹಾಯಕ್ಕೆ ಬಂದಿವೆ.
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...