Home / ಲೇಖನ / ವಿಜ್ಞಾನ / ಸಸ್ಯಗಳಿಂದ ಏಡ್ಸ್, ನೀರೋಧಕ ಚುಚ್ಚು ಮದ್ದು

ಸಸ್ಯಗಳಿಂದ ಏಡ್ಸ್, ನೀರೋಧಕ ಚುಚ್ಚು ಮದ್ದು

‘ಏಡ್ಸ್’ರೋಗವೆಂದರೆ ಮಾರಕವೆಂದು, ಮರಣಾಂತಿಕವೆಂದೂ ಜನ ಹೆದರುತ್ತಾರೆ. ಇದರ ಶಮನಕ್ಕೆ ಅನೇಕ ಔಷಧಿಗಳು ಬಂದರೂ ಅಷ್ಟೇನೂ ಪರಿಣಾಮ ಬೀರಿಲ್ಲ. ಇಂಥಹ ರೋಗಗಳ ನಿವಾರಣೆಗಾಗಿ ಇತ್ತೀಚೆಗೆ ಜೈವ ತಂತ್ರಜ್ಞಾನ ವಿಧಾನಗಳಿಂದ ಸಸ್ಯಾಧಾರಿತ ಔಷಧಗಳನ್ನು ತಯಾರಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಈ ವಿಧಾನಕ್ಕೆ Chemical virus particle platform-cvvp ಎಂದು ಕರೆಯುತ್ತಾರೆ. ಕೇಂಬ್ರಿಚ್ಡ್ ವಿಶ್ವದ್ಯಾನಿಲಯದ ಪ್ರಯೋಗಾಲಯದಲ್ಲಿ ಪೆಪ್ಟೈಡ್, ಮತ್ತು ಪ್ರೊಟೀನ್‌ಗಳನ್ನು ಬೆಳೆಸಿ ನಂತರ ಈ ಎರಡರಿಂದ ಚುಚ್ಚುಮದ್ದು ಮತ್ತು ಔಷಧಿಯನ್ನು ತಯಾರಿಸುವ ಸಂಶೋಧನೆಯಾಗಿದೆ. ಕೆಲವೇ ದಿನಗಳಲ್ಲಿ ಸಸ್ಯಗಳ ಭಾಗದಲ್ಲಿ ಪೆಪ್ಟೈಡ್ ಬೆಳೆಯಲು ಆರಂಭಿಸುತ್ತದೆ. ಅದೇವೇಳೆಗೆ ಸಸ್ಯಗಳ ಒಳನುಗ್ಗಿದ ಸಂಶೋಧಿತ ವಿಷಾಣು (Virus) ಗಳು ವಿಭಜನೆಯಿಂದ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಈ ವಿಷಾಣುಗಳನ್ನು ಈಗ ಕಣ ರೂಪದಲ್ಲಿ ಸುಲಭವಾಗಿ ಬೇರ್‍ಪಡಿಸಬಹುದು. ಈ ಎಲ್ಲ ಕಣಗಳಲ್ಲಿ ಪೆಪ್ಟೈಡ್ ಮತ್ತು ಪ್ರೊಟೀನ್‌ಗಳ ಬಹುಖಂಡ ಪ್ರತಿಗಳು ಇರುತ್ತವೆ. ಹೀಗೆ ತಯಾರಾದ ಪೆಪ್ಟೈಡ್‌ ಮತ್ತು ಪ್ರೊಟೀನ್‌ಗಳನ್ನು ಪರಿಶ್ಕರಿಸಿ ಪ್ರಾರಂಭಿಕ ಇಂಜಕ್ಷನ್ ಮೂಲಕ ಕೊಡುವ ಚುಚ್ಚು ಮದ್ದನ್ನು ತಯಾರು ಮಾಡಬಹುದು. ಈಗ ವಿಷಾಣು ಚುಚ್ಚಿಸಿಕೊಂಡ ಸಸ್ಯಗಳ ಎಲೆಗಳಿಂದ ಪೆಪ್ಟೈಡ್‌ ಮತ್ತು ಪ್ರೋಟೀನ್‌ಗಳನ್ನು ಹೊರತೆಗೆಯುವ ಕಾರ್‍ಯಸಾಗಿದೆ.

ಬ್ರಿಟನ್ನಿನ ವಿಜ್ಞಾನಿಗಳ ಪ್ರಕಾರ ಸಸ್ಯ ಮತ್ತು ವಿಷಾಣುಗಳ ವಂಶವಾಹಿನಿಗಳ ಪ್ರಕ್ರಿಯೆಯಿಂದ ಇಂಥಹ ಸಕ್ರಿಯ ಪೆಪ್ಟೈಡ್‌ನಿಂದ ಮುಂದಿನ ಒಂದು ದಶಕದ ಒಳಗಾಗಿ ಮನುಷ್ಯ ಮತ್ತು ಪಶುಗಳಿಗೆ ಉತ್ತಮ ಚುಚ್ಚುಮದ್ದು ಹಾಗೂ ಇತರ ಔಷಧಿಗಳನ್ನು ತಯಾರುಮಾಡಬಹುದಾಗಿದೆ. ಸಸ್ಯಗಳಿಂದ ಪಡೆದ ವಿಷಾಣುಗಳು ಶರೀರದ ತಾಪಮಾನಕ್ಕೆ ಸ್ಥಿರವಾಗಿರುತ್ತವೆ. ಅಲ್ಲದೇ ಅವುಗಳ ಮೇಲೆ ಆಮ್ಲ ಮತ್ತು ಪಾಚಕ ಎಂಜಾಮ್‌ (ಕಿಣ್ವಗಳೂ ಪ್ರಭಾವ ಬಿರುವುದಿಲ್ಲ. ಆದ್ದರಿಂದ ಇದರ ಚುಚ್ಚುಮದ್ದಿನ ಬದಲಾಗಿ ನೇರವಾಗಿ ಬಾಯಿಂದ ನುಂಗುವ ಔಷಧಿಯಂತೆಯೂ ಬಳಸಬಹುದು. ಸಸ್ಯಗಳಿಂದ ಚುಚ್ಚುಮದ್ದು ಮತ್ತು ಔಷಧಿಗಳನ್ನು ತಯಾರಿಸುವ ಸಂಶೋಧನೆಗಾಗಿ ನೆದರ್ಲ್ಯಾಂಡ್ ಪ್ರಾಣಿವಿಜಾನ ಮತ್ತು ಆರೋಗ್ಯ ಸಂಸ್ಥೆ ಹಾಗೂ ಡೆನ್ಮಾರ್ಕಿನ ಸ್ಟೇಟ್ ವೆಟರ್ನರಿ ಇನ್‌ಸ್ಟಿಟ್ಯೂಟ್ ಫಾರ್ ವೈರಾ‌ಲಜಿಯಂತಹ ಸಂಸ್ಥೆಗಳು ಸಹಾಯಕ್ಕೆ ಬಂದಿವೆ.
*****

Tagged:

Leave a Reply

Your email address will not be published. Required fields are marked *

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...