Home / ಲೇಖನ / ವಿಜ್ಞಾನ / ಸಸ್ಯಗಳಿಂದ ಏಡ್ಸ್, ನೀರೋಧಕ ಚುಚ್ಚು ಮದ್ದು

ಸಸ್ಯಗಳಿಂದ ಏಡ್ಸ್, ನೀರೋಧಕ ಚುಚ್ಚು ಮದ್ದು

‘ಏಡ್ಸ್’ರೋಗವೆಂದರೆ ಮಾರಕವೆಂದು, ಮರಣಾಂತಿಕವೆಂದೂ ಜನ ಹೆದರುತ್ತಾರೆ. ಇದರ ಶಮನಕ್ಕೆ ಅನೇಕ ಔಷಧಿಗಳು ಬಂದರೂ ಅಷ್ಟೇನೂ ಪರಿಣಾಮ ಬೀರಿಲ್ಲ. ಇಂಥಹ ರೋಗಗಳ ನಿವಾರಣೆಗಾಗಿ ಇತ್ತೀಚೆಗೆ ಜೈವ ತಂತ್ರಜ್ಞಾನ ವಿಧಾನಗಳಿಂದ ಸಸ್ಯಾಧಾರಿತ ಔಷಧಗಳನ್ನು ತಯಾರಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಈ ವಿಧಾನಕ್ಕೆ Chemical virus particle platform-cvvp ಎಂದು ಕರೆಯುತ್ತಾರೆ. ಕೇಂಬ್ರಿಚ್ಡ್ ವಿಶ್ವದ್ಯಾನಿಲಯದ ಪ್ರಯೋಗಾಲಯದಲ್ಲಿ ಪೆಪ್ಟೈಡ್, ಮತ್ತು ಪ್ರೊಟೀನ್‌ಗಳನ್ನು ಬೆಳೆಸಿ ನಂತರ ಈ ಎರಡರಿಂದ ಚುಚ್ಚುಮದ್ದು ಮತ್ತು ಔಷಧಿಯನ್ನು ತಯಾರಿಸುವ ಸಂಶೋಧನೆಯಾಗಿದೆ. ಕೆಲವೇ ದಿನಗಳಲ್ಲಿ ಸಸ್ಯಗಳ ಭಾಗದಲ್ಲಿ ಪೆಪ್ಟೈಡ್ ಬೆಳೆಯಲು ಆರಂಭಿಸುತ್ತದೆ. ಅದೇವೇಳೆಗೆ ಸಸ್ಯಗಳ ಒಳನುಗ್ಗಿದ ಸಂಶೋಧಿತ ವಿಷಾಣು (Virus) ಗಳು ವಿಭಜನೆಯಿಂದ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಈ ವಿಷಾಣುಗಳನ್ನು ಈಗ ಕಣ ರೂಪದಲ್ಲಿ ಸುಲಭವಾಗಿ ಬೇರ್‍ಪಡಿಸಬಹುದು. ಈ ಎಲ್ಲ ಕಣಗಳಲ್ಲಿ ಪೆಪ್ಟೈಡ್ ಮತ್ತು ಪ್ರೊಟೀನ್‌ಗಳ ಬಹುಖಂಡ ಪ್ರತಿಗಳು ಇರುತ್ತವೆ. ಹೀಗೆ ತಯಾರಾದ ಪೆಪ್ಟೈಡ್‌ ಮತ್ತು ಪ್ರೊಟೀನ್‌ಗಳನ್ನು ಪರಿಶ್ಕರಿಸಿ ಪ್ರಾರಂಭಿಕ ಇಂಜಕ್ಷನ್ ಮೂಲಕ ಕೊಡುವ ಚುಚ್ಚು ಮದ್ದನ್ನು ತಯಾರು ಮಾಡಬಹುದು. ಈಗ ವಿಷಾಣು ಚುಚ್ಚಿಸಿಕೊಂಡ ಸಸ್ಯಗಳ ಎಲೆಗಳಿಂದ ಪೆಪ್ಟೈಡ್‌ ಮತ್ತು ಪ್ರೋಟೀನ್‌ಗಳನ್ನು ಹೊರತೆಗೆಯುವ ಕಾರ್‍ಯಸಾಗಿದೆ.

ಬ್ರಿಟನ್ನಿನ ವಿಜ್ಞಾನಿಗಳ ಪ್ರಕಾರ ಸಸ್ಯ ಮತ್ತು ವಿಷಾಣುಗಳ ವಂಶವಾಹಿನಿಗಳ ಪ್ರಕ್ರಿಯೆಯಿಂದ ಇಂಥಹ ಸಕ್ರಿಯ ಪೆಪ್ಟೈಡ್‌ನಿಂದ ಮುಂದಿನ ಒಂದು ದಶಕದ ಒಳಗಾಗಿ ಮನುಷ್ಯ ಮತ್ತು ಪಶುಗಳಿಗೆ ಉತ್ತಮ ಚುಚ್ಚುಮದ್ದು ಹಾಗೂ ಇತರ ಔಷಧಿಗಳನ್ನು ತಯಾರುಮಾಡಬಹುದಾಗಿದೆ. ಸಸ್ಯಗಳಿಂದ ಪಡೆದ ವಿಷಾಣುಗಳು ಶರೀರದ ತಾಪಮಾನಕ್ಕೆ ಸ್ಥಿರವಾಗಿರುತ್ತವೆ. ಅಲ್ಲದೇ ಅವುಗಳ ಮೇಲೆ ಆಮ್ಲ ಮತ್ತು ಪಾಚಕ ಎಂಜಾಮ್‌ (ಕಿಣ್ವಗಳೂ ಪ್ರಭಾವ ಬಿರುವುದಿಲ್ಲ. ಆದ್ದರಿಂದ ಇದರ ಚುಚ್ಚುಮದ್ದಿನ ಬದಲಾಗಿ ನೇರವಾಗಿ ಬಾಯಿಂದ ನುಂಗುವ ಔಷಧಿಯಂತೆಯೂ ಬಳಸಬಹುದು. ಸಸ್ಯಗಳಿಂದ ಚುಚ್ಚುಮದ್ದು ಮತ್ತು ಔಷಧಿಗಳನ್ನು ತಯಾರಿಸುವ ಸಂಶೋಧನೆಗಾಗಿ ನೆದರ್ಲ್ಯಾಂಡ್ ಪ್ರಾಣಿವಿಜಾನ ಮತ್ತು ಆರೋಗ್ಯ ಸಂಸ್ಥೆ ಹಾಗೂ ಡೆನ್ಮಾರ್ಕಿನ ಸ್ಟೇಟ್ ವೆಟರ್ನರಿ ಇನ್‌ಸ್ಟಿಟ್ಯೂಟ್ ಫಾರ್ ವೈರಾ‌ಲಜಿಯಂತಹ ಸಂಸ್ಥೆಗಳು ಸಹಾಯಕ್ಕೆ ಬಂದಿವೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...