ಅಂಗುಲ ಹುಳವೊಂದು

ಅಂಗುಲ ಹುಳವೊಂದು ತನ್ನ ಬದುಕ
ಅಂಗುಲ ಅಂಗುಲ ಅಳೆಯುತಿದೆ

ಯಾವುದೊ ಸಿಹಿಯೆಲೆಯಾಸೆ
ಯಾವುದೊ ಇಬ್ಬನಿ ಬಯಕೆ
ಈ ಹುಳವಿನ ತಲೆಯೊಳ ಹೊಕ್ಕು
ಹರೆಯುಸಿತಿದೆ ತೆವಳಿಸುತಿದೆ
ದಾರಿ ಸಾಗುವುದಿದೆ ಬಹಳ ದೂರ

ಪಕ್ಕದಲೇ ಒಂದು ಕಾಗೆ
ಎಡ ತಲೆಬಾಗಿಸಿ ಬಲ ತಲೆಬಾಗಿಸಿ
ತನ್ನ ಕೊಕ್ಕನು ಮೊನೆಮಾಡಿಕೊಳ್ಳುತಿದೆ
ಆಗಲೆ ಅದರ ರೆಕ್ಕೆಗಳೂ ಸಹ
ಎರಗಲು ತಯಾರಾಗುತಿವೆ

ಸಂಗಾತಿಯ ದನಿ ಕೇಳಿ ಹೊರಟ ಒಂದು ಕೀಟ
ತನ್ನ ಬೇಟ ಹುಡುಕುತ್ತಿದೆ ಊಟ ಹುಡುಕುತ್ತಿದೆ
ಈ ಹೂವು ಒಳ್ಳೆದೊ ಆ ಹೂವು ಒಳ್ಳೆದೊ
ಎಂದು ಅಲ್ಲಲ್ಲಿ ಸವಿದು ನೋಡುತಿದೆ

ಸಮೀಪದಲ್ಲೆ ಒಂದು ಮಾರ್‍ಜಾಲ
ತನ್ನುಗುರನೊಳಕ್ಕೆಳೆದು ಮೆಲ್ಲ
ಹೆಜ್ಜೆ ಹಾಕುತಿದೆ ಸದ್ದು ಮಾಡದೆಯೆ
ಏನದರ ಏಕಾಗ್ರ ಏನದರ ಸಾಧನೆ
ಸೆಟೆದು ಮೈ ಬಿಲ್ಲು ಬಾಣ
ಗುರಿ ಸೇರುವ ತನಕ

ಅಂತೆಯೇ ಒಂದು ಜೇಡ
ಅಂತೆಯೇ ಒಂದು ಹಲ್ಲಿ ಕೂಡ
ಅಂತೆಯೇ ಇಡಿ ಜೀವಜಾಲ

ಬ್ರಹ್ಮ ಬಗೆದ ಸಂಗೀತ ಮೇಳ
ತಂತಿಗಳು ಎಷ್ಟೊ ತಾಳಗಳು ಎಷ್ಟೊ
ಮಿಡಿವ ಹೃದಯಗಳೆಷ್ಟೊ
ತುಡಿವ ರಾಗಗಳೆಷ್ಟೊ
ಕೊಂದು ಕೂಗವೇ ಜೀವಗಳ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜುಟ್ಟು
Next post ಉಮರನ ಒಸಗೆ – ೫೧

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…