Home / ಕಥೆ / ಕಿರು ಕಥೆ / ವಸಂತ ಬಾರದಿರುವನೇ?

ವಸಂತ ಬಾರದಿರುವನೇ?

ಒಂದು ಮಾವಿನ ತೋಪು, ಮಾವಿನ ಮರದಲ್ಲಿ ಚೂತ ಚಿಗುರಿನೊಂದಿಗೆ ಅನೇಕ ಕೋಗಿಲೆಗಳು ವಾಸವಾಗಿದ್ದವು. ಒಮ್ಮೆ ತೊಪಿನ ಕೋಗಿಲೆಗಳೆಲ್ಲ ಸೇರಿ ಒಂದು ನಿರ್ಧಾರಕ್ಕೆ ಬಂದವು. ವಸಂತ ಆಗಮನವನ್ನು ಸಾರಿ ನಾವು ಕುಹೂ ಕುಹೂ ಎಂದು ಕೂಗಿ ವಸಂತಮಾಸ ಪೂರ ನಾವು ಹಾಡುತ್ತಿರುತ್ತೇವೆ. ನಮ್ಮ ಕೊರಳು ಒಣಗಿದರು ಯಾರೂ ಕೇಳುವವರಿಲ್ಲ. ನಮ್ಮ ಹಾಡನ್ನು ಕೇಳಿ ಆನಂದಿಸುವವರಾರೂ ನಮ್ಮನ್ನು ಸನ್ಮಾನಿಸಿಲ್ಲ. ಅಲ್ಲದೆ ಒಮ್ಮೊಮ್ಮೆ ಕೋಗಿಲೆ ಕಪ್ಪು ಎಂದು ವಿಮರ್ಶ ಬೇರೆಮಾಡುತ್ತಾರೆ.

ನಮ್ಮ ಸಿರಿ ಕಂಠ ಒಮ್ಮೆ ಹಾಡುವುದಕ್ಕೆ ಮುಷ್ಕರ ಹೂಡಿದರೆ ಆಗ ರಾಜ ವಸಂತನ ಆಗಮನ ತಿಳಿಯದೆ ಈ ಜನಗಳು ಪರಿತಪಿಸುತ್ತಾರೆ. ಆಗ ತಿಳಿಯುತ್ತದೆ ಅವರಿಗೆ ನಮ್ಮ ಬೆಲೆ, ಎಂದು ಕೋಗಿಲೆಗಳೆಲ್ಲವೂ ಮೌನ ತಾಳಿದವು. ಎಂದಿನಂತೆ ಚೈತ್ರ ಮಾಸ ಹುಟ್ಟಿತು. ಚಿಗುರು ಚೂತ, ಹಕ್ಕಿ ಚಿಲಿಪಿಲಿ, ಹೂವಿನ ಪರಿಮಳ ಎಲ್ಲೆಲ್ಲೂ ತುಂಬಿತು. ಆದರೆ ವಸಂತನ ಆಗಮನದ ಕೋಗಿಲೆ ಹಾಡು ಮಾತ್ರ ಯಾರಿಗೂ ಕೇಳಿಸಲಿಲ್ಲ. ಎಲ್ಲರೂ ಪೆಚ್ಚು ಮೋರೆಯೊಡನೆ ಚೈತ್ರ ಕಳೆದು ತಮ್ಮ ಕೆಲಸದಲ್ಲಿ ತೊಡಗಿದರು. ಚೈತ್ರ ವೈಶಾಖ ಮುಗಿದೊಡನೆ ಕೋಗಿಲೆಗಳೆಲ್ಲವೂ ಹಾಡಲು ತೊಡಗಿದವು. ಯಾರೂ ಹಾಡಿಗೆ ಗಮನ ಕೊಡಲಿಲ್ಲ. ವಸಂತ ಮುಗಿದ ಮೇಲೆ ಅದೆಲ್ಲಿಯ ಕೋಗಿಲೆಯ ಹಾಡು? ಎಂದು ನಿರ್ಲಕ್ಷ್ಯ ತೋರಿದರು. ಕೋಗಿಲೆಗಳು ಅಕಾಲದಲ್ಲಿ ಹಾಡಿಹಾಡಿ ಕೊರಲು ಮಾತ್ರ ಒಣಗಿತು.

“ಕೊರಳಲ್ಲಿ ಕಾಲವನ್ನು ಕಟ್ಟಿಹಾಕಲು ಉಂಟೇ? ಕಾಲಕ್ಕೆ ಬೆಲೆ ಕೊರಳಿಗಲ್ಲ” ಎಂದು ಮನಗಂಡವು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...