ಸೀಮೋಲ್ಲಂಘನ

ಒಂದು ತಪೋವನ. ಅಲ್ಲಿ ತಪಸ್ವಿ ತನ್ನ ತಪಸ್ಸನ್ನೆಲ್ಲಾ ಧಾರೆಯೆರೆದು ಅದ್ಭುತ ಸಾಧನೆ ಮಾಡಿ ಚೈತ್ರ ವಸಂತನ ಸೆರೆಹಿಡಿದು ತನ್ನ ತಪೋವನದಲ್ಲಿ ವರ್ಷ ಇಡೀ ವಸಂತವೈಭವವನ್ನು ಪಡೆಯುತ್ತಾ ಬಂದಿದ್ದ. ಅವನಿಗೆ ಮನೋಲ್ಲಾಸವಾದರು ಗಿಡಮರಗಳು, ವೃಕ್ಷಗಳು ಚಿಗರೊಡೆದು, ಹೂಬಿಟ್ಟು ಬಳಲಿ ಹೋದವು. ಎಲೆಗಳು ಉದರಿ ತೌರುಮನೆಗೆ ಹೋಗ ಬಯಿಸಿದವು. ಕೋಗಿಲೆಗಳು ಹಾಡಿ-ಹಾಡಿ ದಣಿದವು.

ಇವನ ಸ್ವಾರ್ಥ ಅಹಂಕಾರ ನೋಡಿ ತಡೆಯಲಾರದ ದೇವರು ಒಂದು ದೊಡ್ಡ ಬಿರುಗಾಳಿ ಎಬ್ಬಿಸಿದ. ಹೂಗಳ ದಳಗಳು ಉದರಿದವು, ಚಿಗರು ಕನರಿ ಹೋಯಿತು, ಎಲೆ ಉದರಿ ಹಾರಿ ಹೋದವು. ವೃಕ್ಷದ ಶಾಖೆ ಮುರಿದು ಬಿದ್ದವು. ವೃಕ್ಷದ ಬೇರು ಬುಡಮೇಲಾಯಿತು. ಆಕಾಶದಲ್ಲಿ ಮೋಡಗಳು ಚದುರಿದವು, ಹಕ್ಕಿಗಳೆಲ್ಲಾ ಹಾಹಾಕಾರದಲ್ಲಿ ರೆಕ್ಕೆ ಪುಕ್ಕವಿಲ್ಲದೆ ತತ್ತರಿಸಿದವು. ಬಿರುಗಾಳಿ ತಂದ ಪ್ರಳಯ ತಪಸ್ವಿಯ ಕಣ್ಣಿಗೆ ಕವಿದ ಮೋಡವನ್ನು ಸರಿಸಿತು. ಋತು ವಸಂತನ ಸೆರೆ ಮಾಡುವ ಬದಲು ಋತು ಆಸರೆ ಮಾಡಿಕೊಂಡು ಪ್ರಕೃತಿಯಲ್ಲಿ ಸಹಬಾಳ್ವೆ ಮಾಡುವುದು ಸಹಜ ಸೂತ್ರವೆನಿಸಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಂಬೆಮ್ಮನ್ನವನು ಪರರು ಮಾಡಿದೊಡೇನಂದ?
Next post ನವಿಲು

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…