Home / ಕಥೆ / ಕಿರು ಕಥೆ / ಬಂಗಾರದ ನಾಣ್ಯ

ಬಂಗಾರದ ನಾಣ್ಯ

ಒಂದು ಪರ್ವತದ ತಪ್ಪಲು. ಅಲ್ಲಿ ಒಂದು ಸುಂದರ ತಪೋವನ. ಅಲ್ಲಿ ನೆಲೆಯಾಗಿದ್ದ ಗುರುವಿನ ಬಳಿ ಎರಡು ಮಹಾಮೂರ್ಖರ ಗುಂಪು ವಿದ್ಯೆ ಕಲಿಯಲು ಬರುತಿತ್ತು. ಅವರಲ್ಲಿ ಸ್ವಾರ್ಥ, ಈರ್ಷೆ ತುಂಬಿಕೊಂಡಿತ್ತು. ಎರಡು ಗುಂಪುಗಳು ಒಂದೇ ದಾರಿಯಲ್ಲಿ ಬಂದರು. ಹೆಜ್ಜೆ ಹೆಜ್ಜೆಯಲ್ಲಿ ಘರ್ಷಣೆ ಮಾಡುತ್ತಿದ್ದರು. ಹಾದಿಯಲ್ಲಿ ಬರುವಾಗ ವೃಕ್ಷವನ್ನು ಕಂಡರೆ, ಇದು ಇಬ್ಬರದೂ ಸಮ ಪಾಲೆಂದು ಕತ್ತರಿಸಿ ಭಾಗ ಮಾಡುತ್ತಿದ್ದರು. ಹೂಗಳನ್ನು ಬಳ್ಳಿಗಳನ್ನು ಹರಿದು ಹಂಚಿಕೊಳ್ಳುತ್ತಿದ್ದರು. ನಲಿದಾಡುವ ನವಿಲುಗಳನ್ನು ಹಿಡಿದು ರಕ್ಕೆ ಪುಕ್ಕಗಳನ್ನು, ಕಿತ್ತಿ ಹಂಚಿಕೊಳ್ಳುತ್ತಿದ್ದರು. ಹಾಡುವಹಕ್ಕಿಯ ಕೊರಳನ್ನು ಹಿಚುಕಿ, ನನ್ನದು ರಕ್ಕೆ, ನಿನ್ನದು ಪುಕ್ಕ ಎಂದು ಜಗಳವಾಡುತ್ತಿದ್ದರು. ಬೆಟ್ಟದ ಕಲ್ಲು ಗುಡ್ಡಗಳನ್ನು ಎಣಿಸಿಗುಣಿಸಿ ಭಾಗಮಾಡುತ್ತಿದ್ದರು. ಇಂತಹ ಜಗಳ ಗಂಟ ಗುಂಪಿನ ಶಿಷ್ಯರ ನಡುವೆ ಗುರುಗಳು ಬಂದು “ಹೀಗೆ ಏಕೆ ಕಾದಾಡುತ್ತೀರಿ?”

“ಎಲಾ! ಶಿಷ್ಯರೇ ಇಲ್ಲಿ ಬನ್ನಿ. ಹೇಳಿ.”
“ಆಕಾಶ ಯಾರದು?”
ಶಿಷ್ಯರೆಲ್ಲ ಒಂದು ಧ್ವನಿಯಲ್ಲಿ ಉತ್ತರಿಸಿದರು.
“ಎಲ್ಲರದೂ”
“ಭೂಮಿ ಯಾರದು?”
“ಎಲ್ಲರದೂ”
“ಜಲಪಾತ, ನದಿ, ಸಾಗರ ಯಾರದು?”
“ಎಲ್ಲರದೂ”
“ನಕ್ಷತ್ರ, ಸೂರ್ಯ, ಚಂದ್ರ ಯಾರದು?”
“ಎಲ್ಲರದೂ”
“ನೀರು, ಗಾಳಿ, ಬೆಳಕೂ ಯಾರದು?”
“ಎಲ್ಲರದೂ”
“ಗುರು, ದೈವ, ಜಗತ್ತು ಯಾರದು?”
“ಎಲ್ಲರದೂ”
“ಇಂದಿನ ಪಾಠವಾಯಿತು ನಾಳೆ ಬನ್ನಿ” ಎಂದರು ಗುರುಗಳು.

ಎಲ್ಲರೂ ಮರುದಿನ ಬರುವಾಗ ಏಟು ಪೆಟ್ಟುಗಳನ್ನು ತಿಂದು ರಕ್ತ ಸೋರುತ್ತಾ ನಿಂತರು. ಶಿಷ್ಯರ ತಂಡವನ್ನು ನೋಡಿ ಏನಾಯಿತೆಂದು ಗುರುಗಳು ಕೇಳಿದರು.

“ನೆನ್ನೆ ರಾತ್ರಿ ಕೊಳದಲ್ಲಿ, ಚಂದ್ರನಂತೆ ಕಾಣುವ ಬಂಗಾರದ ನಾಣ್ಯಕ್ಕಾಗಿ ನಾವೆಲ್ಲ ಹೋರಾಡಿದವು. ಪರಿಣಾಮವಾಗಿ ನಮ್ಮ ಸ್ಥಿತಿ ಹೀಗಿದೆ” ಎಂದರು.

“ನಿಮ್ಮ ಶಿಷ್ಯ ವೃತ್ತಿಗೆ ಇಂದೇ ನಿವೃತ್ತಿ.” ಎಂದು ಮೂರ್ಖ ಶಿಷ್ಯರನ್ನು ತಪೋವನದಿಂದ ಆಚೆ ಗಡಿಪಾರು ಮಾಡಿದರು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...