Home / ಕಥೆ / ಕಿರು ಕಥೆ / ಬಂಗಾರದ ನಾಣ್ಯ

ಬಂಗಾರದ ನಾಣ್ಯ

ಒಂದು ಪರ್ವತದ ತಪ್ಪಲು. ಅಲ್ಲಿ ಒಂದು ಸುಂದರ ತಪೋವನ. ಅಲ್ಲಿ ನೆಲೆಯಾಗಿದ್ದ ಗುರುವಿನ ಬಳಿ ಎರಡು ಮಹಾಮೂರ್ಖರ ಗುಂಪು ವಿದ್ಯೆ ಕಲಿಯಲು ಬರುತಿತ್ತು. ಅವರಲ್ಲಿ ಸ್ವಾರ್ಥ, ಈರ್ಷೆ ತುಂಬಿಕೊಂಡಿತ್ತು. ಎರಡು ಗುಂಪುಗಳು ಒಂದೇ ದಾರಿಯಲ್ಲಿ ಬಂದರು. ಹೆಜ್ಜೆ ಹೆಜ್ಜೆಯಲ್ಲಿ ಘರ್ಷಣೆ ಮಾಡುತ್ತಿದ್ದರು. ಹಾದಿಯಲ್ಲಿ ಬರುವಾಗ ವೃಕ್ಷವನ್ನು ಕಂಡರೆ, ಇದು ಇಬ್ಬರದೂ ಸಮ ಪಾಲೆಂದು ಕತ್ತರಿಸಿ ಭಾಗ ಮಾಡುತ್ತಿದ್ದರು. ಹೂಗಳನ್ನು ಬಳ್ಳಿಗಳನ್ನು ಹರಿದು ಹಂಚಿಕೊಳ್ಳುತ್ತಿದ್ದರು. ನಲಿದಾಡುವ ನವಿಲುಗಳನ್ನು ಹಿಡಿದು ರಕ್ಕೆ ಪುಕ್ಕಗಳನ್ನು, ಕಿತ್ತಿ ಹಂಚಿಕೊಳ್ಳುತ್ತಿದ್ದರು. ಹಾಡುವಹಕ್ಕಿಯ ಕೊರಳನ್ನು ಹಿಚುಕಿ, ನನ್ನದು ರಕ್ಕೆ, ನಿನ್ನದು ಪುಕ್ಕ ಎಂದು ಜಗಳವಾಡುತ್ತಿದ್ದರು. ಬೆಟ್ಟದ ಕಲ್ಲು ಗುಡ್ಡಗಳನ್ನು ಎಣಿಸಿಗುಣಿಸಿ ಭಾಗಮಾಡುತ್ತಿದ್ದರು. ಇಂತಹ ಜಗಳ ಗಂಟ ಗುಂಪಿನ ಶಿಷ್ಯರ ನಡುವೆ ಗುರುಗಳು ಬಂದು “ಹೀಗೆ ಏಕೆ ಕಾದಾಡುತ್ತೀರಿ?”

“ಎಲಾ! ಶಿಷ್ಯರೇ ಇಲ್ಲಿ ಬನ್ನಿ. ಹೇಳಿ.”
“ಆಕಾಶ ಯಾರದು?”
ಶಿಷ್ಯರೆಲ್ಲ ಒಂದು ಧ್ವನಿಯಲ್ಲಿ ಉತ್ತರಿಸಿದರು.
“ಎಲ್ಲರದೂ”
“ಭೂಮಿ ಯಾರದು?”
“ಎಲ್ಲರದೂ”
“ಜಲಪಾತ, ನದಿ, ಸಾಗರ ಯಾರದು?”
“ಎಲ್ಲರದೂ”
“ನಕ್ಷತ್ರ, ಸೂರ್ಯ, ಚಂದ್ರ ಯಾರದು?”
“ಎಲ್ಲರದೂ”
“ನೀರು, ಗಾಳಿ, ಬೆಳಕೂ ಯಾರದು?”
“ಎಲ್ಲರದೂ”
“ಗುರು, ದೈವ, ಜಗತ್ತು ಯಾರದು?”
“ಎಲ್ಲರದೂ”
“ಇಂದಿನ ಪಾಠವಾಯಿತು ನಾಳೆ ಬನ್ನಿ” ಎಂದರು ಗುರುಗಳು.

ಎಲ್ಲರೂ ಮರುದಿನ ಬರುವಾಗ ಏಟು ಪೆಟ್ಟುಗಳನ್ನು ತಿಂದು ರಕ್ತ ಸೋರುತ್ತಾ ನಿಂತರು. ಶಿಷ್ಯರ ತಂಡವನ್ನು ನೋಡಿ ಏನಾಯಿತೆಂದು ಗುರುಗಳು ಕೇಳಿದರು.

“ನೆನ್ನೆ ರಾತ್ರಿ ಕೊಳದಲ್ಲಿ, ಚಂದ್ರನಂತೆ ಕಾಣುವ ಬಂಗಾರದ ನಾಣ್ಯಕ್ಕಾಗಿ ನಾವೆಲ್ಲ ಹೋರಾಡಿದವು. ಪರಿಣಾಮವಾಗಿ ನಮ್ಮ ಸ್ಥಿತಿ ಹೀಗಿದೆ” ಎಂದರು.

“ನಿಮ್ಮ ಶಿಷ್ಯ ವೃತ್ತಿಗೆ ಇಂದೇ ನಿವೃತ್ತಿ.” ಎಂದು ಮೂರ್ಖ ಶಿಷ್ಯರನ್ನು ತಪೋವನದಿಂದ ಆಚೆ ಗಡಿಪಾರು ಮಾಡಿದರು.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್