ಕವಿ ಕುಂಚದಾ ಹಕ್ಕಿ

ನಾಮ ಫಲಕಗಳ ಮೇಲೆ ಬರೆದಾ
ಚಿತ್ತಾರದ ಕವಿಕುಂಚದಾ ಹಕ್ಕಿ
ಸುಂದರ ವರ್ಣಗಳ ಬಿಡಿಸಿ
ಮಾರ್ದನಿಯರೂಪದಿ ನಸುನಗೆಯ
ಬೀರಿತು ಮುತ್ತಿಟ್ಟ ಕನ್ನಡತನವ||

ಬೆರೆತಾಯ್ತು ಒಂದೊಂದಾದ ವರ್ಣಗಳ
ಬೆಡಗು ಬಿನ್ನಾಣತನದಿ ಕೂಡಿಸಿ ಓಲೈಸಿ
ಅಕ್ಷರ ಮಾಲೆಗಳ ತಿದ್ದಿ ತೀಡಿದಸೋಗು||

ನೋಡುವವನ ಕಣ್ಸೆಳೆದು ತಂಪಲೆರೆವ
ಮಣಿಕಟ್ಟು ತಾಪಸಿಗನ ಮಗ್ನತೆ ಭಗ್ನಗೊಳಿಸಿ
ಸಿರಿತನದ ಗೆಲ್ಗೆಯ ಉತ್ತುಂಗ ಶಿಖರಕ್ಕೇರಿಸಿತು||

ಆನಂದಾಮೃತ ನೆರೆದ ಸ್ವರಮಾಲೆ ಒಲ್ಮೆಯ
ಇದೋ ಬೆಳಕಾಯ್ತು ಕೂಹೂಕೂಹೂ ಕೋಗಿಲೆ
ಹಾಡಿ ನಲಿದುದ ಕಾಣಗೈದ ಜಾತಕಪಕ್ಷಿ
ಜೊತೆಗೂಡಿ ಮರ್ಮವ ಭೇದಿಸಿ ಹರಿಸಿತು||

ಅಂಗನೆಯರ ಮುಗುಳ್ನಗೆಯ ಅರಿವ
ಮೋಡಿಯಲಿ ಸುಪ್ರಭಾತವ ಹಾಡಿಸಿ
ಮೈ ಮೆರೆವತನದಿ ಕವಿಕುಂಚದಾ ಹಕ್ಕಿ||
ಫಲಕಗಳ ಮೈ ಯೊಡ್ಡಿ ಮೆರೆಸಿತು
ಕಸ್ತೂರಿ ಕನ್ನಡತನದಾ ಬಾಳ್ವೆಯ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಲೀನ ಯುವತಿಯ ಮೂರನೆ ಹಾಡು
Next post ಋಣ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…