Home / ಕವನ / ಕವಿತೆ / ಯುಗದ ಹಾದಿಯಲಿ

ಯುಗದ ಹಾದಿಯಲಿ

ಯುಗದ ಹಾದಿಯಲ್ಲಿ
ಜಗದ ಸುತ್ತ
ಹೊನ್ನ ಕಿರಣ
ಆವಾಗ ಮನವಾಗುವಮುನ್ನ
ನಡೆ ಮುಂದೆ
ನಡೆ ಮುಂದೆ
ನಿಂತ ಮಗ್ಗುಲಲ್ಲಿ
ನಿರ್ವಾಣ ಬೇಲಿಯ ಸುತ್ತ
ಕೂಡಿತದೋ
ಕೂಗಿತದೋ
ನಿಮ್ಮದೆಯ ಮೌನ
ಶೂನ್ಯವಿದೋ ಜೀವನ
ಭಗ್ನದಿರುಳಿನ ಸೋಪಾನತಾಣದಡೆಯಲ್ಲಿ
ನಡೆ ಮುಂದೆ
ನಡೆ ಮುಂದೆ
ನಿಂತ ಮಗ್ಗುಲಲ್ಲಿ
ನಿರ್ವಾಣ ಚೇತನ ಸುತ್ತ
ಕೂಡಿತದೋ
ಕೂಗಿತದೋ
ನಿಮ್ಮದೆಯ ಸ್ವಪ್ನ
ಭಾವತೆಯ ಭವ್ಯ ಕಿರಣ
ಪೂರ್ಣತೆಯ ಗಾನದೆಡೆಯಲಿ
ನಡೆಮುಂದೆ
ನಡೆಮುಂದೆ
ಒಂದೇತ್ ಜ್ಯೋತಿರ್ಗಮನ
ಪರ್ವ ಭೂವರ್ಣತೆಯಡಿಯಲ್ಲಿ
ಕೂಡಿತದೋ
ಕೂಗಿತದೋ
ಆವಾಗಮನವಾಗುವ ಮುನ್ನ
ನಿಮ್ಮದೆಯ ಅರ್ಪಣ
ನಡೆಮುಂದೆ
ನಡೆಮುಂದೆ
ಜ್ವಲಂತ ಹಾದಿಯಲಿ
ಮಾನವತೇ ಸ್ವಚ್ಛತೆಯೆಡೆಯಲ್ಲಿ
ಕೂಡಿತದೋ
ಕೂಗಿತದೋ
ಧೃಢತೆಯ ಸೌರ ರೂಪತೆಯಲಿ
ಸತ್ವಪರ್ವ ಆನಂದಗಾನ
ಕೂಗಿತದೋ
ಕೂಗಿತದೋ
ಮಾನ್ಯತೆಯ ಸವ್ಯಸಾಚಿಯಲಿ
ನಿಮ್ನದರ್ಪಣ ಆವಾಗಮನವಾಗುವ ಮುನ್ನ
ನಡೆ ಮುಂದೆ
ನಡೆ ಮುಂದೆ
ನಿಂತ ಮಗ್ಗುಲಲ್ಲಿ
ನಿರ್ವಾಣ ಸರ್ವಾಗಮನ
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...