ಯುಗದ ಹಾದಿಯಲ್ಲಿ
ಜಗದ ಸುತ್ತ
ಹೊನ್ನ ಕಿರಣ
ಆವಾಗ ಮನವಾಗುವಮುನ್ನ
ನಡೆ ಮುಂದೆ
ನಡೆ ಮುಂದೆ
ನಿಂತ ಮಗ್ಗುಲಲ್ಲಿ
ನಿರ್ವಾಣ ಬೇಲಿಯ ಸುತ್ತ
ಕೂಡಿತದೋ
ಕೂಗಿತದೋ
ನಿಮ್ಮದೆಯ ಮೌನ
ಶೂನ್ಯವಿದೋ ಜೀವನ
ಭಗ್ನದಿರುಳಿನ ಸೋಪಾನತಾಣದಡೆಯಲ್ಲಿ
ನಡೆ ಮುಂದೆ
ನಡೆ ಮುಂದೆ
ನಿಂತ ಮಗ್ಗುಲಲ್ಲಿ
ನಿರ್ವಾಣ ಚೇತನ ಸುತ್ತ
ಕೂಡಿತದೋ
ಕೂಗಿತದೋ
ನಿಮ್ಮದೆಯ ಸ್ವಪ್ನ
ಭಾವತೆಯ ಭವ್ಯ ಕಿರಣ
ಪೂರ್ಣತೆಯ ಗಾನದೆಡೆಯಲಿ
ನಡೆಮುಂದೆ
ನಡೆಮುಂದೆ
ಒಂದೇತ್ ಜ್ಯೋತಿರ್ಗಮನ
ಪರ್ವ ಭೂವರ್ಣತೆಯಡಿಯಲ್ಲಿ
ಕೂಡಿತದೋ
ಕೂಗಿತದೋ
ಆವಾಗಮನವಾಗುವ ಮುನ್ನ
ನಿಮ್ಮದೆಯ ಅರ್ಪಣ
ನಡೆಮುಂದೆ
ನಡೆಮುಂದೆ
ಜ್ವಲಂತ ಹಾದಿಯಲಿ
ಮಾನವತೇ ಸ್ವಚ್ಛತೆಯೆಡೆಯಲ್ಲಿ
ಕೂಡಿತದೋ
ಕೂಗಿತದೋ
ಧೃಢತೆಯ ಸೌರ ರೂಪತೆಯಲಿ
ಸತ್ವಪರ್ವ ಆನಂದಗಾನ
ಕೂಗಿತದೋ
ಕೂಗಿತದೋ
ಮಾನ್ಯತೆಯ ಸವ್ಯಸಾಚಿಯಲಿ
ನಿಮ್ನದರ್ಪಣ ಆವಾಗಮನವಾಗುವ ಮುನ್ನ
ನಡೆ ಮುಂದೆ
ನಡೆ ಮುಂದೆ
ನಿಂತ ಮಗ್ಗುಲಲ್ಲಿ
ನಿರ್ವಾಣ ಸರ್ವಾಗಮನ
*****
Related Post
ಸಣ್ಣ ಕತೆ
-
ಹನುಮಂತನ ಕಥೆ
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
-
ಇರುವುದೆಲ್ಲವ ಬಿಟ್ಟು
ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
-
ಸಂಶೋಧನೆ
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…
-
ಕ್ಷಮೆ
ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…