ತಂದೆ

ಈಕೆ ನನ್ನ ಯಶೋದೆ, ಇವಳೆನ್ನ ಸಲಹುವಳೊ
ನಾನಿವಳ ಸಲಹುವೆನೋ ನನಗರಿದು. ಕೈಯೆತ್ತಿ
ರೆಕ್ಕೆಯೊಲು ಬಡಿವಾಗ, ಕಣ್ಣನರಳಿಸಹತ್ತಿ
ಕುಲುಕುಲನೆ ನಗುವಾಗ,- ಇವಳೆ ಅನುಭವಿಸುವಳೊ
ಹಿರಿದಾದ ಸಂತಸವ, ನಾನೊ? ಇದು ನನಗರಿದು.
ಕೇಕಿಯನು ಹಾಕಿವಳು ಕುಣಿದು ಕಳೆಯೇರುತಿರೆ,-
ಅವಳ ಸುಖ ಮಿಕ್ಕಿ ನನ್ನೆದೆಯು ಉಕ್ಕೇರುತಿರೆ,-
ಉಭಯತರು ನಲಿಯುವೆವು ಬಾಳ ಭಯವನು ಮರೆದು.

ಇಂತು ನಲಿವ ಯಶೋದೆ ಬೆಳೆದು ದೊಡ್ಡವಳಿರಲು
ಯಾರ ಮನೆದೀವಿಗೆಯ ಹಚ್ಚಿ ಸಂತಸದಿಂದ
ಒಲಿಯುವಳೊ ನಾ ಕಾಣೆ! ತುಸುವೆ ಕೊಂಕಿರ ಕುರುಳು
ಮೆಲುಗಾಳಿ ಸೋಂಕಿಂದ, ನಲುಮೆಯುತ್ಸವದಿಂದ
ಬುದ್ಧಿ ತುಸು ಮಂಕಾಗೆ, ಮನವಿತ್ತು ಮುತ್ತೈದೆ-
ಯಾಗಿ ನಿಂತಿರಲಿವಳು;- ಯಾರ ಮನೆಯ ಯಶೋದೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೇಮ ಪೂರ್‍ಣನೆ ಶಿವಶಿವಾ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…