ಕಮ್ಮಟ

ಇದು ನನ್ನ ಕಮ್ಮಟವು. ರಾಜಮುದ್ರೆಯನೊತ್ತಿ
ಹಣವನೋಡಾಡಿಸುವುದಲ್ಲ. ಆಡಳಿತಗಳ
ವ್ಯವಹಾರವನ್ನು ನಿಯಂತ್ರಿಸುತ ದಿಗ್ದೇಶಗಳ-
ನೊಲಿಸ ಬಯಸುವುದಿಲ್ಲ ಕಲ್ಲು ಬಂಡೆಯ ಕೆತ್ತಿ
ಬೋಳಗುಮ್ಮಟಗಳನು ಬಾಳ ಬಯಲಿನಲೆತ್ತಿ
ನಿಲ್ಲಿಸುವ ಸಾಮರ್‍ಥ್ಯವಿದಕಿಲ್ಲ ತಾರೆಗಳ
ಕೋಟಿ ಹೊನ್ನನು ತಂದು ಆಗಸದ ಮೇರೆಗಳ
ತುಂಬುವಳವಿದಕಲ್ಲ ಅದು ದೇವನುಪಪತ್ತಿ

ನನ್ನ ಕಮ್ಮಟದಲ್ಲಿ ಅನುದಿನವು ಜನಿಸುವವು
ಕಮ್ಮಲರ ನರುಗಂಪು ಹಿಡಿದ ಹೊಂಗನಸು, ಇಡಿ
ನಾಡ ಬಗೆಯನು ಸೆಳೆವ ಸೊಗಸುಗಾರಿಕೆ, ಬಾನ
ಮುಟ್ಟಿ ಮುತ್ತಿಡುವಂಥ ಭಾವಗಳು, ಇಲ್ಲಿಹವು-
ಈ ನುಡಿಯ ಬೆಡಗಿನಲಿ-ನಾನೊಲಿದ ತಾಯ ಮುಡಿ-
ಗೆಂದು ಸಲ್ಲಿಸಿದ ಹೂ, ಅನುಸಂಧಿಸಿದ ಗಾನ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿವಸಮಾಗಮ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…