Home / ಕವನ / ಕೋಲಾಟ / ಗೋವಿಂದ ರಾಯಾ ಲಂಬೋನೂ

ಗೋವಿಂದ ರಾಯಾ ಲಂಬೋನೂ

ಗೋವಿಂದ ರಾಯಾ ಲಂಬೋನೂ
ಹೊತ್ತರೇಳು ಮೊದಲೇ ಲೆಳುವಾನೋ
ಹೊತ್ತೇಳೂ ಮುನ್ನೇ ಲೆದ್ದೇನೋ
ಕಯ್ಯು ಕಾಲು ಮೋರೆ ತೊಳೆದೇಲೋ
ಬಣ್ಣದೊಂದು ಚದರದ ಮೇನೇಲೋ
ಹೊನ್ನಿನ ಒಂದು ರಾಚೀ ಹೊಯ್ದಾನೋ
ಹೊನ್ನಿಗೊಂದು ರಾಶೀ ಹೊಯ್ದೊಲೇ
ಚಿನ್ನದ ಕೊಳಗ ತರವಾನೋ
ಬೆಳ್ಳಿಯ ಶಿದ್ದೇ ತರವಾನೋ
ಬೆಳ್ಳಿಯ ಶೀದ್ದೇ ತಂದೇಲೇ
ಹೊನ್ನಿನ ರಾಶೀಲಳೆದೇಲೇ
ಹೊನ್ನಳದೇ ದಣಿವೇಲಾಗಿತೋ
ಹೊನ್ನಳದೇ ದಣಿವೇ ಆದವ್ಯಾನೇ
ಯೇಳೂಪ್ಪರಗಿ ಶದರದ ಮೇಲೇಲೋ
ಬಣ್ಣದೊಂದು ವಲ್ಲಿ ಬಿಡಿಶ್ಯಾಲೋ
ಬಣ್ಣಗೊಂದು ವಲ್ಲಿ ಹಾಶೀಲೇ
ಮುಚ್ಚೋರಗೇ ಮಲಗೂತೈದಾನೋ
ಮುಚ್ಚೋರಗೇ ಮಲಗೂ ಶಮ್ಯದಲ್ಲಿ
ಚಿನ್ನದೊಂದು ಕೊಳಗ ತಲೆದಿಂಬು
ಬೆಳ್ಳಿಯ ಶಿದ್ದೆ ಬಗಲಲ್ಲೋ
ಬೆಳ್ಳಿತೊಂದು ಶಿದ್ದೆ ಬಗಲಲ್ಲೋ
ಮುಚ್ಚಿ ಹೊಡೆದೆ ಮಲಗೂತೈದಾನಲೋ
ಮುಚ್ಚಿ ಹೊಡದೆ ಸಮವಾದಲ್ಲೋ
ತೆಂಕಲ ದಿಕ್ಕಿನ ಗಾಳೆ ಕರೆದೇಲೋ
ಶುಕದಲ್ಲೇ ನಿದರೇ ಮಾಡುವಾಗೋ
ಏಳು ಜನ ನಂದನ ಗೋಪ್ಯವರು
ಗೋವಿಂದನ ಪಾದಾ ತಿಕ್ಕವಾರೋ
ಗೋವಿಂದನ ಪಾದಾ ತಿಕವಾಗೇ
ಸೂರ್‍ಯ ಮೂಡಿ ಉದಯಗ ಬಂದಾವೋ
ಸೂರ್‍ಯ ಮೂಡಿ ಉದಯಗ ಬರುವಾಗೋ
ಸೂರ್‍ಯ ಮೂಡಿ ಯಾಳೇ ಬಿಸಿಲೇಲೋ
ಗೋವಿಂದನ ಕಣ್ಣಿಗೈದಾವೋ
ಗೋವಿಂದನ ಕಣ್ಣೀಗೆಸೆವಾಗೋ
ಗೋವಿಂದಗೆ ಎಚ್ಚರಾದವೋ
ಗೋವಿಂದಗೆ ಎಚ್ಚರಾಗವಾಗೇ
ಬಡ ಜನರಿಗೆ ದಾನ ಮಾಡಲಿಲವೋ
ಬಡ ಜನರಿಗೆ ದಾನ ಕೊಡಲಿಲವೋ
ಬಡ ಜನರಿಗೆ ಪಡಿಯ ಅಳೆಲಿಲವೋ
ಆರು ತಾಸು ಮಜ್ಜಾನ ಬಿಶಲಲ್ಲೋ
ಗೋವಿಂದಗೆ ಪೂಜೆ ಮಾಡುವಾರೋ
ಗೋವಿಂದಗೆ ಪೂಜೆ ಮಾಡುವಾಗೇ
ಆರು ತಾಸು ಮಜ್ಜಾನಾ ಬಿಶಲಲ್ಲೋ
ಬಂದವಲೂ ಮಂಗನ ಗೊಲೇಯೋ
ಹಿಡಿದವರು ಶಾರೂಗಂಟೇಯೋ
ನುಡಿದವಲು ಶಾರಾ ಗಂಟೇಯೋ
ಗೋವಿಂದಗೆ ಪೂಜೆ ಮಾಡುನಾರೋ
ಗೋವಿಂದಗೆ ಪೂಜೇ ಮಾಡುವಾಗೇ
ಗಳಗೊಂದೇ ರೂಪಾ ತೋರ್ ಯಾನೋ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...