Home / ಕವನ / ಕೋಲಾಟ / ಗೋವಿಂದ ರಾಯಾ ಲಂಬೋನೂ

ಗೋವಿಂದ ರಾಯಾ ಲಂಬೋನೂ

ಗೋವಿಂದ ರಾಯಾ ಲಂಬೋನೂ
ಹೊತ್ತರೇಳು ಮೊದಲೇ ಲೆಳುವಾನೋ
ಹೊತ್ತೇಳೂ ಮುನ್ನೇ ಲೆದ್ದೇನೋ
ಕಯ್ಯು ಕಾಲು ಮೋರೆ ತೊಳೆದೇಲೋ
ಬಣ್ಣದೊಂದು ಚದರದ ಮೇನೇಲೋ
ಹೊನ್ನಿನ ಒಂದು ರಾಚೀ ಹೊಯ್ದಾನೋ
ಹೊನ್ನಿಗೊಂದು ರಾಶೀ ಹೊಯ್ದೊಲೇ
ಚಿನ್ನದ ಕೊಳಗ ತರವಾನೋ
ಬೆಳ್ಳಿಯ ಶಿದ್ದೇ ತರವಾನೋ
ಬೆಳ್ಳಿಯ ಶೀದ್ದೇ ತಂದೇಲೇ
ಹೊನ್ನಿನ ರಾಶೀಲಳೆದೇಲೇ
ಹೊನ್ನಳದೇ ದಣಿವೇಲಾಗಿತೋ
ಹೊನ್ನಳದೇ ದಣಿವೇ ಆದವ್ಯಾನೇ
ಯೇಳೂಪ್ಪರಗಿ ಶದರದ ಮೇಲೇಲೋ
ಬಣ್ಣದೊಂದು ವಲ್ಲಿ ಬಿಡಿಶ್ಯಾಲೋ
ಬಣ್ಣಗೊಂದು ವಲ್ಲಿ ಹಾಶೀಲೇ
ಮುಚ್ಚೋರಗೇ ಮಲಗೂತೈದಾನೋ
ಮುಚ್ಚೋರಗೇ ಮಲಗೂ ಶಮ್ಯದಲ್ಲಿ
ಚಿನ್ನದೊಂದು ಕೊಳಗ ತಲೆದಿಂಬು
ಬೆಳ್ಳಿಯ ಶಿದ್ದೆ ಬಗಲಲ್ಲೋ
ಬೆಳ್ಳಿತೊಂದು ಶಿದ್ದೆ ಬಗಲಲ್ಲೋ
ಮುಚ್ಚಿ ಹೊಡೆದೆ ಮಲಗೂತೈದಾನಲೋ
ಮುಚ್ಚಿ ಹೊಡದೆ ಸಮವಾದಲ್ಲೋ
ತೆಂಕಲ ದಿಕ್ಕಿನ ಗಾಳೆ ಕರೆದೇಲೋ
ಶುಕದಲ್ಲೇ ನಿದರೇ ಮಾಡುವಾಗೋ
ಏಳು ಜನ ನಂದನ ಗೋಪ್ಯವರು
ಗೋವಿಂದನ ಪಾದಾ ತಿಕ್ಕವಾರೋ
ಗೋವಿಂದನ ಪಾದಾ ತಿಕವಾಗೇ
ಸೂರ್‍ಯ ಮೂಡಿ ಉದಯಗ ಬಂದಾವೋ
ಸೂರ್‍ಯ ಮೂಡಿ ಉದಯಗ ಬರುವಾಗೋ
ಸೂರ್‍ಯ ಮೂಡಿ ಯಾಳೇ ಬಿಸಿಲೇಲೋ
ಗೋವಿಂದನ ಕಣ್ಣಿಗೈದಾವೋ
ಗೋವಿಂದನ ಕಣ್ಣೀಗೆಸೆವಾಗೋ
ಗೋವಿಂದಗೆ ಎಚ್ಚರಾದವೋ
ಗೋವಿಂದಗೆ ಎಚ್ಚರಾಗವಾಗೇ
ಬಡ ಜನರಿಗೆ ದಾನ ಮಾಡಲಿಲವೋ
ಬಡ ಜನರಿಗೆ ದಾನ ಕೊಡಲಿಲವೋ
ಬಡ ಜನರಿಗೆ ಪಡಿಯ ಅಳೆಲಿಲವೋ
ಆರು ತಾಸು ಮಜ್ಜಾನ ಬಿಶಲಲ್ಲೋ
ಗೋವಿಂದಗೆ ಪೂಜೆ ಮಾಡುವಾರೋ
ಗೋವಿಂದಗೆ ಪೂಜೆ ಮಾಡುವಾಗೇ
ಆರು ತಾಸು ಮಜ್ಜಾನಾ ಬಿಶಲಲ್ಲೋ
ಬಂದವಲೂ ಮಂಗನ ಗೊಲೇಯೋ
ಹಿಡಿದವರು ಶಾರೂಗಂಟೇಯೋ
ನುಡಿದವಲು ಶಾರಾ ಗಂಟೇಯೋ
ಗೋವಿಂದಗೆ ಪೂಜೆ ಮಾಡುನಾರೋ
ಗೋವಿಂದಗೆ ಪೂಜೇ ಮಾಡುವಾಗೇ
ಗಳಗೊಂದೇ ರೂಪಾ ತೋರ್ ಯಾನೋ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...