ಅನ್ವೇಷಣೆ

ಕವಿತೆ ಬರೆಯುತ್ತೇನೆ
ಸಂಘರ್ಷದ ಹಾದಿಯಲಿ
ನೋವಿನ ಎಳೆ ಎಳೆಗೆ
ಚೀತ್ಕಾರದ ಧ್ವನಿಗಳಿಗೆ
ಮಾದ್ಯಮ ಹುಡುಕುತ್ತೇನೆ

ನಾನು ಇದ್ದುದ್ದಕ್ಕೆ
ಸಾಕ್ಷಿ-ಪುರಾವೆಗಳ
ಒಂದೊಂದೇ ದಾಖಲಿಸುತ್ತೇನೆ
ಗೋರಿಯಿಂದ ಎದ್ದೆದ್ದು ಬರುವ
ಪ್ರಶ್ನೆಗಳಿಗೆ ಉತ್ತರ ಹುಡುಕುತ್ತೇನೆ

ಭೂಮಿಯಲಿ ಬೇರುಗಳ
ಬಿಳಲುಗಳ ಭದ್ರಗೊಳಿಸಿ
ನೆಲೆಯ ಕಾಣಲು
ದಾರಿ ಹುಡುಕುತ್ತೇನೆ.
ಮತ್ತೆ ಮತ್ತೆ ಬರೆಯುತ್ತೇನೆ

ಹೆಣ್ಣಿನ ನೋವುಗಳು
ನಿಟ್ಟುಸಿರುಗಳ ಅವುಚಿಕೊಳ್ಳುತ್ತ
ಅಸಹಾಯಕ-ಹಸಿವಿನಿಂದ ಆರ್‍ತತೆ
ದಯನೀಯ ಧ್ವನಿಯಿಲ್ಲದ
ಸ್ಥಿತಿಗಳ ಬಗ್ಗೆ
ಧ್ವನಿಯಾಗಿ ಹೊರಹೊಮ್ಮದೇ
ಕೊರಳಲೇ ಇಂಗಿದ ಹಾಡುಗಳ ಬಗ್ಗೆ
ವಾಸ್ತವಕ್ಕಿಳಿಯದೇ ಕತ್ತಲ್ಲಲೇ
ಕರಗಿದ ಕನಸುಗಳ ಬಗ್ಗೆ
ಅರಳಿ ಘಮಘಮಿಸದೇ
ಕಮರಿ ಹೋದ ಹೂವುಗಳ ಬಗ್ಗೆ.
ಸಾಕ್ಷಿ ಪುರಾವೆಗಳ ಹುಡುಕುತ್ತೇನೆ
ಮತ್ತೆ ಮತ್ತೆ ಬರೆಯುತ್ತೇನೆ
ಸಂಘರ್‍ಷದ ಹಾದಿಯಲ್ಲಿ
ನೋವಿನ ಎಳೆ ಎಳೆಗೆ
ಚಿತ್ಕಾರದ ಧ್ವನಿಗಳಿಗೆ
ಮಾಧ್ಯಮ ಹುಡುಕುತ್ತೇನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮ್ಯಾನ್ ಬುಕರ್
Next post ಲಘುವಾಗೆಲೆ ಮನ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…